ಮಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 5ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಸಂಘಟನೆಗಳ ವಿರುದ್ಧ ಕಾಳಿಮಠದ ರಿಷಿಕುಮಾರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ರಾಮ್ ಸೇನಾ ಕರ್ನಾಟಕ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಷಿಕುಮಾರ ಸ್ವಾಮೀಜಿ, ಕನ್ನಡ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದಕ್ಕೂ ಬಂದ್, ಬಂದ್ ಎನ್ನುತ್ತೀರಲ್ಲಾ, ಕರ್ನಾಟಕವೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ ? ಕನ್ನಡದ ಹೆಸರೇಳಿ ಕಿಡಿಗೇಡಿತನ ನಡೆಸುತ್ತಿದ್ದಾರೆ. ಸಂಘಟನೆ ಹೆಸರೇಳಿ ಪುಡಿ ರೌಡಿಸಂ ಮಾಡುತ್ತಿದ್ದಾರೆ. ಮರಾಠರಿಗೆ ಪ್ರಾಧಿಕಾರ ಕೊಟ್ಟರೆ ನಿಮಗೇನು ತೊಂದರೆ ? ನೀವು 20 ಮಂದಿ ಸೇರಿದ್ರಷ್ಟೇ ಕರ್ನಾಟಕನಾ ? 6.5 ಕೋಟಿ ಜನ ನಿಮ್ಮ ಮಾತು ಕೇಳಬೇಕಾ ? ಎಂದು ಕಿಡಿಕಾರಿದ್ದಾರೆ.

ಅವನ್ಯಾವನೋ ನರಿ, ಕತ್ತೆ ತಗೊಂಡು ಬಂದು ಕೂಗಾಡ್ತಾನೆ. ಒದ್ದಾಡಿ, ಉರುಳಾಡಿ ಆಮೇಲೆ ಮನೆಗೆ ಹೋಗ್ತಾನೆ ಎಂದು ವಾಟಾಳ್ ನಾಗರಾಜ್ ಹೆಸರು ಹೇಳದೆ ವಾಗ್ದಾಳಿ ನಡೆಸಿದ ರಿಷಿ ಕುಮಾರ ಸ್ವಾಮೀಜಿ, ಬಂದ್ ಮಾಡಲು ಬಂದರೆ ಕಲ್ಲು ಹೊಡೆದು ಕಳುಹಿಸಿ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಕಾಳಿ ಸ್ವಾಮೀಜಿ ಕರೆ ನೀಡಿದ್ದಾರೆ.

ಎಲ್ಲದಕ್ಕೂ ಬಂದ್, ಹೋರಾಟ ಎನ್ನುವವರನ್ನು ರಾಜ್ಯದ ಪ್ರಾಣ ತೆಗೀಲಿಕ್ಕೆ ಇಟ್ಟುಕೊಂಡಿದ್ದೀರಾ ? ಇಂತವರನ್ನ ಸರಕಾರ ಶೂಟ್ ಮಾಡಿ ಬಿಸಾಕಲಿ ಎಂದು ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡುತ್ತಿದ್ದೇನೆ ಎಂದು ರಿಷಿಕುಮಾರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವರುಷಕ್ಕೆ 20 ರಷ್ಟು ಹಿಂದೂ ಸಂಘಟನೆ ಕಾರ್ಯಕರ್ತರು ಸಾಯುತ್ತಿದ್ದಾರೆ. ಕನ್ನಡ ಸಂಘಟನೆಯಲ್ಲಿ ಒಬ್ಬನಾದ್ರೂ ಸತ್ತಿದ್ದೀರಾ? ಶಾಸ್ತ್ರ ಮತ್ತು ಶಸ್ತ್ರ ಇವೆರಡೂ ನಮ್ಮ ಸಂಸ್ಕೃತಿ ಎಂದು ಸಮರ್ಥಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








