ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ : CBI ತನಿಖೆಗೆ ಒತ್ತಾಯ – ಬ್ಯಾಂಕ್ ವ್ಯವಸ್ಥಾಪಕ ED ವಶಕ್ಕೆ..
ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಸೌಹಾರ್ದ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣ ಅವರನ್ನ ಜಾರಿ ನಿರ್ದೇಶನಾಲಯ ( ಇ ಡಿ ) ವಶಕ್ಕೆ ಪಡೆದುಕೊಂಡಿದೆ..
ಈ ಕುರಿತು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು ಪತ್ರಿಕಾ ಗೋಷ್ಠಿ ನಡೆಸಿದರು. ಡಾ. ಶಂಕರ್ ಗುಹಾ ಅವರು ಮಾತನಾಡಿ “ ಸುದೀರ್ಘ ಎರೆಡು ವರ್ಷಗಳ ಸತತ ಹೋರಾಟಕ್ಕೆ ಜಯ ಸಿಕ್ಕಿದ್ದು ಸಮಾಧಾನ ತಂದಿದೆ. ಕರ್ನಾಟಕ ಪೊಲೀಸರ ಮೇಲೆ ನಮಗೆ ನಂಬಿಕೆಯಿದೆ. ಆದ್ರೆ ರಾಜಕೀಯ ಒತ್ತಡ ಬಂದ ಹಿನ್ನಲೆ ಸ್ವಲ್ಪ ಹಿನ್ನಡೆಯಾಗಿತ್ತು. 834 ಕೋಟಿ ಬೇನಾಮಿ ಹಣ ಪತ್ತೆಯಾಗಿದೆ. ಇದು ಸೂಕ್ತ ಸಮಯವಾಗಿದ್ದು, ಸಿಬಿಐ ತನಿಖೆ ಆಗ್ಬೇಕಿದೆ. ಸಿಬಿಐ ತನಿಖೆ ನಡೆಸಿದ್ರೆ ಷೇರುದಾರರಿಗೆ ಅನುಕೂಲವಾಗುತ್ತೆ ಎಂದು ಡಾ ಶಂಕರ್ ಗುಹ ತಿಳಿಸಿದರು.

ಮುಂದುವರೆದು ಮಾತನಾಡಿ “ಸಾಕಷ್ಟು ಹಗರಣಗಳು ನಡೆದಿದೆ ಷೇರುದಾರರಿಗೆ ನ್ಯಾಯ ಸಿಗಬೇಕಿದ್ರೆ ಸಿಬಿಐ ತನಿಖೆ ಆಗಲೇ ಬೇಕು. ಸಿಬಿಐನ ಎಕನಾಮಿಕಲ್ ವಿಂಗ್ ತನಿಖೆ ನಡೆಸಿದ್ರೆ ಮಾತ್ರ ನ್ಯಾಯ ಸಿಗುತ್ತೆ ಬ್ಯಾಂಕ್ ನಲ್ಲಿ ಹಣವಿಟ್ಟು ಹಣ ಕಳೆದುಕೊಂಡ ಕನಿಷ್ಠ ನೂರು ಮಂದಿ ಸಾವನ್ನಪ್ಪಿದ್ದಾರೆ. ಷೇರುದಾರರಿಗೆ ಹಣ ಮರು ಪಾವತಿ ಮಾಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಾಯ ಮಾಡ್ಬೇಕು. ಏಪ್ರಿಲ್ ವರೆಗೂ ಅವಕಾಶ ನೀಡುತ್ತೇವೆ. ಅಷ್ಟರೊಳಗೆ ಸರ್ಕಾರದಿಂದ ಸ್ಪಂಧನೆ ಸಿಗದೆ ಹೋದ್ರೆ ಉಪವಾಸ ಸತ್ಯಗ್ರಹ ಕೈ ಗೊಳ್ಳುತ್ತೇವೆ. ಸಿಬಿಐ ಗೆ ಪ್ರಕರಣ ವರ್ಗಾವಣೆ ಆಗ್ಬೇಕು, ಷೇರುದಾರರಿಗೆ ಹಣ ವಾಪಸ್ಸು ಕೊಡಿಸಬೇಕು, ತಪ್ಪಿತಸ್ಥರು ಜೈಲಿಗೆ ತೆರಳ ಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 10 ನೇ ತಾರೀಖಿಗೆ ಹಗರಣ ಬೆಳಕಿಗೆ ಬಂದು 2 ವರ್ಷವಾದ ಹಿನ್ನೆಲೆಯಲ್ಲಿ ಬ್ಯಾಂಕ್ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ನಡೆಸಿದ್ದೆವು. ಅದರಲ್ಲಿ ಠೇವಣಿದಾರರ ಸಂಕಷ್ಟಗಳು, ಸ್ಥಳೀಯ ಶಾಸಕರು, ಸಂಸದರ ನಿರ್ಲಕ್ಷ್ಯ ಸೇರಿದಂತೆ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ತಿಳಿಸಲಾಗಿತ್ತು. ಅದಾದ ಬಳಿಕ ಹಗರಣದ ಸೂತ್ರಧಾರ ಕೆ.ರಾಮಕೃಷ್ಣರನ್ನು ED ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಂತಾಗಿದೆ ಎಂದಿದ್ದಾರೆ.
Enforcement Directorate ಅಧಿಕಾರಿಗಳು PMLA (ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್) ಕಾಯ್ದೆಯಡಿಯಲ್ಲಿ ತನಿಖೆಯನ್ನು ಮಾಡುತ್ತಾರೆ. ಇದು ಕೇವಲ ತನಿಖೆಯ ಒಂದು ಭಾಗವಷ್ಟೇ. ಈ ಹಗರಣ ಸುಮಾರು 3 ಸಾವಿರ ಕೋಟಿ ರೂಪಾಯಿಗಳಷ್ಟು ದೊಡ್ಡದಿದೆ. ಈಗ ಅರೆಸ್ಟ್ ಮಾಡಿರುವುದು ಸಮಾಧಾನಕರ ವಿಚಾರ, ಆದರೆ ಇದಕ್ಕೆ ಎರಡು ವರ್ಷಗಳ ಕಾಲ ತಗಲಿದೆ. ಇದು ಪ್ರಶ್ನೆಪತ್ರಿಕೆ ನೀಡಿ ಸಾಕಷ್ಟು ಸಮಯಾವಕಾಶ ಕಲ್ಪಿಸಿಕೊಟ್ಟು ಆನಂತರ ಪರೀಕ್ಷೆ ಬರೆಯಲು ಹೇಳಿದಂತಾಗಿದೆ. ಇದೀಗ ಸರಿಯಾದ ಸಮಯ ಈ ಸಂದರ್ಭದಲ್ಲಿ ಹಗರಣವನ್ನು ED ಮತ್ತು CBI ಜೊತೆಗೆ IT ಸೇರಿ ತನಿಖೆ ನಡೆಸಬೇಕಾದೆ. ತಕ್ಷಣವೇ ಇದು ಕಾರ್ಯಗತಗೊಳಿಸಲು ಇದನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಮುಖ್ಯ ಮಂತ್ರಿಗಳು ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಇದರ ಸಂಪೂರ್ಣ ತನಿಖೆಯಾಗಬೇಕಾದರೆ CBI ನಿಂದಲೇ ತನಿಖೆ ಮಾಡಿಸಬೇಕು. ಈ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನ ಸಂಸ್ಥಾಪನಾ ಮಂಡಳಿಯ ನಿರ್ದೇಶಕರು, RBI ಅಧಿಕಾರಿಗಳು, RCS ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳು ಇವರೆಲ್ಲರ ಮೇಲೆ ಸಾಕಷ್ಟು ಅನುಮಾನಗಳಿಗೆ. ಯಾವ ಕಾರಣಕ್ಕಾಗಿ ರಾಮಕೃಷ್ಣರನ್ನ ಬಂಧಿಸಲು 2 ವರ್ಷದಷ್ಟು ಸಮಯ ತೆಗೆದುಕೊಳ್ಳಲಾಯಿತು. ಇದರ ಹಿಂದೆ ಯಾರ ಕೈವಾಡವಿದೆ. ಯಾವೆಲ್ಲಾ ರಾಜಕೀಯ ವ್ಯಕ್ತಿಗಳ ಬೆಂಬಲ ಇವರಿಗಿತ್ತು ಎಂಬ ಸತ್ಯ ತನಿಖೆಯಿಂದ ಹೊರಬರಬೇಕಿದೆ ಎಂದು ತಿಳಿಸಿದರು.
ಇದಿಷ್ಟೇ ಅಲ್ಲದೆ ಬಸವನಗುಡಿಯ ಮಾನ್ಯ ಶಾಸಕರಾದ ಶ್ರೀ ರವಿಸುಬ್ರಮಣ್ಯ ಅವರು ಅಧಿವೇಶನದ ವೇಳೆ ಸದನದಲ್ಲಿ ಮಾತನಾಡುತ್ತಾ ಹಗರಣಕ್ಕೆ ಸಂಬಂಧಿಸಿದಂತೆ 24 ಜನರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿರುತ್ತಾರೆ. ಆ 24 ಜನರ ಪೈಕಿ ಯಾರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಸಿಬಿಐ ತನಿಖೆಯಿಂದಷ್ಟೇ ಸತ್ಯ ಬಹಿರಂಗವಾಗಬೇಕಾಗಿದೆ. ಯಾವ ರೀತಿ ಜನರ ದುಡ್ಡನ್ನು ದುರುಪಯೋಗ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಮತ್ತೆ ಈ ತರಹದ ಹಗರಣಗಳನ್ನು ಯಾರೂ ಮಾಡದಂತೆ ಒಂದು ಸಂದೇಶವನ್ನು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡಬೇಕಾಗಿದೆ ಎಂದು ಹೇಳಿದರು.
ಇತ್ತೀಚಿಗಷ್ಟೇ ಮಾನ್ಯ ಸಹಕಾರ ಸಚಿವರು ವಿಧಾನಸೌಧದ ಅವರ ಕಚೇರಿಯಲ್ಲಿ ಗುರು ರಾಘವೇಂದ್ರ ಬ್ಯಾಂಕ್ ಮತ್ತು ವಸಿಷ್ಠ ಸೌಹಾರ್ದ ಸೊಸೈಟಿಯ ಬಗ್ಗೆ ಮಾತನಾಡಲು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಕೆಲವು ಶಾಸಕರುಗಳು RBI ಅಧಿಕಾರಿಗಳು RCS ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಇದರಲ್ಲಿ ಬಹುಮುಖ್ಯವಾಗಿ ಇರಬೇಕಿದ್ದವರು ಠೇವಣಿದಾರರು ಆದೆ ಅವರಿಗೆ ಭಾಗವಹಿಸಲು ಅವಕಾಶವೇ ಇರಲಿಲ್ಲ. ಇಂತಹ ಸಭೆಗಳಲ್ಲಿ ಸಂಕಷ್ಟದಲ್ಲಿರುವ ಠೇವಣಿದಾರರರ ಭಾವನೆಗಳನ್ನು ಅರಿತುಕೊಂಡು ಅವರಿಗೆ ಉಪಯೋಗವಾಗುವಂತಹ ಪರಿಹಾರವನ್ನು ಕೊಡಬೇಕೇ ಹೊರತು ನಿಮಗೆ ಅನುಕೂಲವಾಗುವಂತಹ ಪರಿಹಾರವನ್ನು ಠೇವಣಿದಾರರ ಮೇಲೆ ಹೇರಬಾರದು. ಅಷ್ಟೇ ಅಲ್ಲದೆ ಯಾವ ವಿಷಯವನ್ನು ಮುಚ್ಚಿಡುವುದಕ್ಕಾಗಿ ಠೇವಣಿದಾರರು ಇಂಥ ಸಭೆಗೆ ಕರೆಯುತ್ತಿಲ್ಲ ಎಂದರು.
ನಾವು ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ಏಕೆಂದರೆ ಇವತ್ತು ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿರುವಂತಹ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 2400 ಕೋಟಿ ಹಗರಣ, ಗುರುಸಾರ್ವಭೌಮ ಸೊಸೈಟಿಯಲ್ಲಿ 270 ಕೋಟಿ ಹಗರಣ, ನಾಗರತ್ನ ಸೌಹಾರ್ದ ಸೊಸೈಟಿಯಲ್ಲಿ 150 ಕೋಟಿ ಹಗರಣ, ಕಣ್ವ ಸೌಹಾರ್ದ ಸೊಸೈಟಿಯಲ್ಲಿ ನೂರು ಕೋಟಿ ಹಗರಣ, ವಸಿಷ್ಠ ಸೌಹಾರ್ದ ಸೊಸೈಟಿಯಲ್ಲಿ ಸುಮಾರು 500 ಕೋಟಿ ಹಗರಣ ನಡೆದಿವೆ. ಇವಿಷ್ಟೇ ಅಲ್ಲದೆ ಸಂಸದರಾಗಲಿ, ಶಾಸಕರಾಗಲಿ ಹೇಳದೇ ಇರುವಂತಹ ಮತ್ತೊಂದು ವಿಷಯವೆಂದರೆ ಗುರುರಾಘವೇಂದ್ರ ಬ್ಯಾಂಕಿನಲ್ಲಿ ಸುಮಾರು 120 ಸೊಸೈಟಿಗಳು ಠೇವಣಿ ಇಟ್ಟಿವೆ. DICGC ವಿಮೆಯ ಹಣ ಈ ಸಂಸ್ಥೆಗಳಿಗೆ ಸಿಗುವುದಿಲ್ಲ. ಈ ಸೊಸೈಟಿಗಳ ಠೇವಣಿದಾರರು ಯಾವುದೇ ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ಈ ಎಲ್ಲಾ ಪ್ರಕರಣಗಳು ಸಂಪೂರ್ಣ ತನಿಖೆಯಾಗಿ ತಪಿತಸ್ಥರಿಗೆ ಶಿಕ್ಷೆ ಕೊಡಿಸುವ ಜೊತೆಗೆ ನೊಂದ ಠೇವಣಿದಾರರಿಗೆ ನ್ಯಾಯ ಕೊಡಿಸಬೇಕಿದೆ. ಇದೆಲ್ಲಾ ಆಗಬೇಕಾದರೆ CBI ನಿಂದಲೇ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದರು.
ಇಷ್ಟೊಂದು ಹಗರಣಗಳು ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದ್ದು ಇದೆಲ್ಲಾ ಪ್ರಕರಣಗಳು ಸ್ಥಳೀಯ ಶಾಸಕರು ಮತ್ತು ಸಂಸದರು ತಮ್ಮ ಗಮನಕ್ಕೆ ಬಂದರೂ ಕಂಡೂ ಕಾಣದಂತೆ ಇದ್ದಾರೆ. ಜನಪ್ರತಿನಿಧಿಗಳು ಜನರ ಪರ ನಿಂತು ಹೋರಾಟ ಮಾಡಿ ಜನರಿಗೆ ನ್ಯಾಯ ಒದಗಿಸಿಕೊಡಬೇಕಿತ್ತು. ಆದರೆ ಅವರು ಅದರಲ್ಲಿ ವಿಫಲರಾಗಿದ್ದಾರೆ. ಅವರು ಮಾಡಬೇಕಿದ್ದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಈ ಹೋರಾಟದಿಂದ ಹಿಂದೆ ಸರಿಯುವಂತೆ ಹಲವು ಕಡೆಗಳಿಂದ ಬೇರೆ ಬೇರೆ ರೀತಿಯ ಒತ್ತಡಗಳು ಬಂದರೂ ಅಂತಹ ಒತ್ತಡಗಳಿಗೆ ಹೆದರದೆ ನಾನು ನನ್ನ ಹೋರಾಟವನ್ನು ನಡೆಸುತ್ತಾ ಬಂದಿದ್ದೇನೆ.

ಈ ಪ್ರಕರಣಗಳು ಒಂದಕ್ಕೊಂದು ಕೊಂಡಿಯಾಗಿ ಬೆಳೆದುಕೊಂಡಿದೆ ಗುರು ರಾಘವೇಂದ್ರ ಬ್ಯಾಂಕ್ ನಿಂದ ಗುರು ಸಾರ್ವಭೌಮ ಸೊಸೈಟಿ ಅಲ್ಲಿಂದ ವರಿಷ್ಠ ಸೌಹಾರ್ದ ಮತ್ತು ನಾಗರತ್ನ, ಕಣ್ವ ಹೀಗೆ ಉದ್ದಕ್ಕೂ ಬೆಳೆದುಕೊಂಡು ಹೋಗುತ್ತಿವೆ. ಈಗಾಗಲೇ ಒಂದಿಷ್ಟು ಜನರಿಗೆ ಭಯ ಶುರುವಾಗುತ್ತಿರಬಹುದು. ರಾಮಕೃಷ್ಣ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಅಷ್ಟೇ 840 ಕೋಟಿ ಎಲ್ಲಿ ಹೋಗಿದೆ ಯಾರು ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವುದು ಬಹಿರಂಗವಾಗಬೇಕಾಗಿದೆ. ಇದರಲ್ಲಿ ರಾಜಕೀಯ ವೈಕ್ತಿಗಳ, ದೊಡ್ಡ ದೊಡ್ಡ ಅಧಿಕಾರಿಗಳ, ಪ್ರಮುಖ ಉದ್ಯಮಿಗಳ ಕೈವಾಡ ಇರುವುದು ಬಯಲಾಗಬೇಕಾಗಿದೆ. ಸ್ಥಳೀಯ ರಾಜಕೀಯ ಮುಖಂಡರ ಬೆಂಬಲ ಇಲ್ಲದೇ ಈ ವಿಷಯ ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯವಿರಲಿಲ್ಲ ತನಿಖೆಗೆ ಇಷ್ಟು ವಿಳಂಬವೂ ಆಗುತ್ತಿರಲಿಲ್ಲ. ಇನ್ನು ಮುಂದೆ ಅಚ್ಚರಿಯ ಬೆಳವಣಿಗಳಾಗುತ್ತದೆ. ತನಿಖೆ ಬೇಗ CBI ಗೆ ಹೋಗುತ್ತದೆ ಎಂಬ ನಂಬಿಕೆ ನನಗಿದೆ. ಠೇವಣಿದಾರರಿಗೆ ಕಟ್ಟಕಡೆಯ ಒಂದು ರೂಪಾಯಿ ಬರುವವರೆಗೂ, ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ. ಎಂದು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು & ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕರಾದ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ತಿಳಿಸಿದರು.








