Siddaramaiah | ರಾಹುಲ್ ಗಾಂಧಿಯವರ ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ
ಬೆಂಗಳೂರು : ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ರಾಯಚೂರಿನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಬೆಳಗ್ಗೆ 6.10 ಕ್ಕೆ ರಾಯಚೂರು ತಾಲೂಕಿನ ಯರಗೇರಾದಿಂದ ಪಾದಯಾತ್ರೆ ಶುರುವಾಗಿದೆ. ಪಾದಯಾತ್ರೆ ವೇಳೆ ಮಾಜಿ ಸೈನಿಕರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಈ ವೇಳೆ ಆ ಸೈನಿಕರೊಂದಿಗೆ ರಾಹುಲ್ ಗಾಂಧಿ ರಾಷ್ಟ್ರಧ್ವಜ ಹಿಡಿದು ಸುಮಾರು 100 ಮೀಟರ್ ಗೂ ಹೆಚ್ಚು ದೂರು ಓಡಿದರು.
ನಡೆದಷ್ಟೂ ಹಿಗ್ಗುತ್ತಿರುವ @RahulGandhi ಅವರ ಉತ್ಸಾಹ, ನೊಂದ ಜನರನ್ನು ಅವರು ಸಂತೈಸಿ, ಬದುಕಿನ ಭರವಸೆ ತುಂಬುವ ರೀತಿ, ದೇಶದ ಬಗೆಗಿನ ಬದ್ಧತೆ, ಕಾಳಜಿ ಇವು ಅವರನ್ನು ಓರ್ವ ಪರಿಪೂರ್ಣ ನಾಯಕನನ್ನಾಗಿಸಿದೆ.
ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ.#BharatJodoYatra pic.twitter.com/EcgtxioeNq
— Siddaramaiah (@siddaramaiah) October 22, 2022
ರಾಹುಲ್ ಗಾಂಧಿ ಅವರ ಪಾದಯಾತ್ರೆಗೆ ಭಾರಿ ಜನ ಸ್ಪಂದನೆ ಸಿಗುತ್ತಿದ್ದು, ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ನಡೆದಷ್ಟೂ ಹಿಗ್ಗುತ್ತಿರುವ ರಾಹುಲ್ ಗಾಂಧಿ ಅವರ ಉತ್ಸಾಹ, ನೊಂದ ಜನರನ್ನು ಅವರು ಸಂತೈಸಿ, ಬದುಕಿನ ಭರವಸೆ ತುಂಬುವ ರೀತಿ, ದೇಶದ ಬಗೆಗಿನ ಬದ್ಧತೆ, ಕಾಳಜಿ ಇವು ಅವರನ್ನು ಓರ್ವ ಪರಿಪೂರ್ಣ ನಾಯಕನನ್ನಾಗಿಸಿದೆ.
ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ ಎಂದು ಬರೆದುಕೊಂಡಿದ್ದಾರೆ.