ಪಾಕ್ ಪರ ಘೋಷಣೆ ಕೂಗಿ ಜೈಲು ಪಾಲಾಗಿದ್ದ ಹಾಗೂ ನಾಲ್ಕು ದಿನಗಳ ಕಾಲ ತನಿಖೆಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಅಮೂಲ್ಯ ತನಿಖೆ ವೇಳೆಯಲ್ಲಿ ಕಣ್ಣೀರಿಟ್ಟಿದ್ದಾಳೆಂದು ತಿಳಿದುಬಂದಿದೆ. ತನಿಖೆ ನಡೆಸುತ್ತಿರುವ ಉಪ್ಪಾರಪೇಟೆ ಹಾಗೂ ಚಾಮರಾಜಪೇಟೆ ಪೊಲೀಸರು ಬೆಳಗ್ಗೆ ಹತ್ತುಗಂಟೆಯಿಂದಲೂ ಅಮೂಲ್ಯಳನ್ನು ಸತತ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಪಾಕ್ ಪರ ಘೋಷಣೆ ಕೂಗಿದ್ದ ಮತ್ತೋರ್ವ ಯುವತಿ ಆರ್ದ್ರಾ ಕುರಿತು ಕೇಳಿದಾಗ, ನಾವಿಬ್ಬರೂ ಒಂದೇ ಕಡೆ ರೂಮ್ ಬಾಡಿಗೆ ಪಡೆದು ನೆಲೆಸಿದ್ದೆವು. ಆದರೆ ಈಗ ಆರ್ದ್ರಾ ಇಲ್ಲ ಎನ್ನುತ್ತಿದ್ದಾಳೆ. ಯಾಕೆ ಆ ರೀತಿ ಹೇಳುತ್ತಿದ್ದಾಳೋ ನನಗೆ ಗೊತ್ತಿಲ್ಲ ಎಂದು ಅಮೂಲ್ಯ ತಿಳಿಸಿದ್ದಾಳೆ ಎನ್ನಲಾಗಿದೆ. ಸತತ ವಿಚಾರಣೆ ವೇಳೆಯಲ್ಲಿ ಗೌರಿ ಲಂಕೇಶ್ ಕುರಿತು ಪ್ರಶ್ನೆ ಕೇಳಿದಾಗ ಅವರು ನನ್ನ ತಾಯಿ ಇದ್ದಂತೆ ಎಂದಿದ್ದು, ಸುಮಾರು ೧೫ ನಿಮಿಷಗಳ ಕಾಲ ಕಣ್ಣೀರಿಟ್ಟಿದ್ದಾಳೆ ಎನ್ನಲಾಗುತ್ತಿದೆ.
ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್ನಲ್ಲಿ ಆರ್ಸಿಬಿ ವಾದ
ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...








