ಮಾಟ ಮಾಡಲು 6 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಶ್ವಾಸಕೋಶವನ್ನು ತೆಗೆದ ಕೀಚಕರು black magic lungs removed
ಕಾನ್ಪುರ, ನವೆಂಬರ್18: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಶ್ವಾಸಕೋಶವನ್ನು ದೇಹದಿಂದ ಹೊರತೆಗೆಯಲಾಗಿದೆ. ಘಟಾಂಪುರ ಪ್ರದೇಶದಿಂದ ದೀಪಾವಳಿಯ ರಾತ್ರಿ ಬಾಲಕಿ ನಾಪತ್ತೆಯಾಗಿದ್ದಳು. black magic lungs removed

ಮಾಟ ಮಂತ್ರ ಮಾಡಲು ಶಂಕಿತರು ಶ್ವಾಸಕೋಶವನ್ನು ತೆಗೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಶ್ವಾಸಕೋಶವನ್ನು ಮಾಟ ಮಾಡುವುದರಿಂದ ಮಹಿಳೆ ಮಗುವಿಗೆ ಜನ್ಮ ನೀಡಲು ಸಹಾಯ ಮಾಡುತ್ತದೆ ಎಂದು ಆರೋಪಿಗಳು ನಂಬಿದ್ದರು ಎಂದು ಹೇಳಲಾಗಿದೆ. ಭಾನುವಾರ ಬಂಧಿಸಲ್ಪಟ್ಟ ಆರೋಪಿ ಅಂಕುಲ್ ಕುರಿಲ್ (20) ಮತ್ತು ಬೀರನ್ (31) ಬಾಲಕಿಯ ಶ್ವಾಸಕೋಶವನ್ನು ಪರಶುರಾಮ್ ಕುರಿಲ್ ಎಂಬಾತನಿಗೆ ಮಾಟ ಮಾಡಲು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬ್ರಜೇಶ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ಸೋಮವಾರ ಪರಶುರಾಮ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಘಟನೆಯ ಬಗ್ಗೆ ತಿಳಿದಿರಬಹುದೆಂಬ ಸಂಶಯದಿಂದ ಪರಶುರಾಮ್ ನ ಪತ್ನಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಆತ ಯಾರೊಂದಿಗೂ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಪ್ರಶ್ನಿಸಿದ ಯೂತ್ ಕಾಂಗ್ರೆಸ್
ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪ ಹೊರಿಸಲಾಗಿದೆ.
ವರದಿಗಳ ಪ್ರಕಾರ, ಪರಶುರಾಮ್ ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದನು. ಆದರೆ ಪೊಲೀಸರ ತೀವ್ರವಾದ ವಿಚಾರಣೆಯಿಂದ ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು. ಅವನು 1999 ರಲ್ಲಿ ವಿವಾಹವಾಗಿದ್ದು, ಇಲ್ಲಿಯವರೆಗೆ ಮಗುವಾಗಿರಲಿಲ್ಲ. ಅದರ ನಂತರ ಆತ ತನ್ನ ಸೋದರಳಿಯ ಅಂಕುಲ್ ಮತ್ತು ಅವನ ಸ್ನೇಹಿತ ಬೀರನ್ ಅವರನ್ನು ಬಾಲಕಿಯನ್ನು ಅಪಹರಿಸಿ ಅವಳ ಶ್ವಾಸಕೋಶವನ್ನು ತರುವಂತೆ ಮನವೊಲಿಸಿದ್ದಾನೆ.
ಅತಿಯಾಗಿ ಕುಡಿದಿದ್ದ ಆರೋಪಿಗಳು ಬಾಲಕಿಯನ್ನು ಅಪಹರಿಸಿ ಕೊಲೆ ಮಾಡುವ ಮೊದಲು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಏತನ್ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದು, ಇದರಿಂದಾಗಿ ಆರೋಪಿಗಳಿಗೆ ಶೀಘ್ರದಲ್ಲಿಯೇ ಶಿಕ್ಷೆಯಾಗಲಿದೆ.
ಸಂತ್ರಸ್ತೆಯ ಕುಟುಂಬಕ್ಕೆ 5 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ನಿರ್ದೇಶನ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶುಂಠಿಯ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು#health#healthtips#healthcare#GINGERhttps://t.co/80SBmAXYZS
— Saaksha TV (@SaakshaTv) October 25, 2020
ಪ್ರಧಾನಿ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಪ್ರಶ್ನಿಸಿದ ಯೂತ್ ಕಾಂಗ್ರೆಸ್https://t.co/HCkz0WsXWC
— Saaksha TV (@SaakshaTv) November 17, 2020








