Mehbooba Mufti – ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗೃಹಬಂಧನ..
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಶ್ರೀನಗರದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭಾನುವಾರ ‘ಗೃಹಬಂಧನ’ದಲ್ಲಿ ಇರಿಸಲಾಗಿದೆ.
ಇದೇ ತಿಂಗಳ 16ರಂದು ಸ್ಥಳೀಯ ಕಾಶ್ಮೀರಿ ಪಂಡಿತ್ ಸುನೀಲ್ ಕುಮಾರ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅವರ ಕುಟುಂಬವನ್ನ ಬೇಟಿಯಾಗಲು ಮೆಹಬೂಬಾ ಮುಫ್ತಿ ಇಂದು ಶೋಪಿಯಾನ್ ಜಿಲ್ಲೆಯ ಛೋಟಿಗಾಮ್ಗೆ ಹೋಗಬೇಕಿತ್ತು ಎಂದು ಪಿಡಿಪಿ ವಕ್ತಾರ ಸುಹೇಲ್ ಬುಖಾರಿ ಹೇಳಿದ್ದಾರೆ.
ಮೆಹಬೂಬಾ ಮುಫ್ತಿ ತಮ್ಮ ಗೃಹಬಂಧನದ ಚಿತ್ರಗಳನ್ನ ಟ್ವೀಟರ್ ನಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಾರತ ಸರ್ಕಾರದಿಂದಾಗಿ ಕಾಶ್ಮೀರಿ ಪಂಡಿತರು ಶೋಚನೀಯ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಕಾಶ್ಮೀರಿ ಪಂಡಿತರು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗದಂತೆ ತಡೆಯುವ ಕೇಂದ್ರ ನೀತಿಗಳಿಂದಾಗಿ ಉದ್ದೇಶಿತ ಹತ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇವತ್ತು ನನ್ನನ್ನು ಗೃಹಬಂಧನದಲ್ಲಿ ಇಡುವ ಅಗತ್ಯ ಏನಿದೆ?” ಎಂದು ಕೋಪದಿಂದ ಕೇಳಿದ್ದಾರೆ.