ರಾಜ್ಯದಲ್ಲಿ 20 ಸಾವಿರ ಬೆಡ್ ಗಳನ್ನು ಹೆಚ್ಚಿಸಲು ಕ್ರಮ : ಅಶ್ವಥ್ ನಾರಾಯಣ್
ಬೆಂಗಳೂರು : ರಾಜ್ಯದಲ್ಲಿ 20 ಸಾವಿರ ಬೆಡ್ ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 20 ಸಾವಿರ ಬೆಡ್ ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಕೊರೊನ ಪೀಕ್ ಗೆ ಹೋಗಬಾರದೆಂದು ಲಾಕ್ ಡೌನ್ ಮಾಡಲಾಗಿದೆ. ಇದಕ್ಕೆ ಜನ ಸಹಕಾರ ನೀಡಬೇಕು. ಕೊರೊನಾ ಸೋಂಕು ಹೆಚ್ಚಾದರೇ ನಿಯಂತ್ರಣ ಸವಾಲಾಗಲಿದೆ ಎಂದು ಎಚ್ಚರಿಸಿದರು.
ಇನ್ನು ಬೆಂಗಳೂರಿನಲ್ಲಿ 7 ಸಾವಿರ ಬೆಡ್ ಬೇಕು ಎಂದು ಬೇಡಿಕೆ ಬಂದಿದೆ. ಆದರೆ ಇಷ್ಟು ಜನಕ್ಕೆ ಬೆಡ್ ಬೇಕು ಎಂದು ಟ್ರೇಸಿಂಗ್ ನಡೆಯಲಾಗುತ್ತಿದೆ.
ಅಗತ್ಯ ಇರುವವರಿಗೆ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಕೊರೊನ ರಿಪೋರ್ಟ್ ತಡ ವಾಗಿ ಬಂದ್ರೆ ಲ್ಯಾಬ್ ಗೆ ಇನ್ನು ಮುಂದೆ ದಂಡ ವಿಧಿಸಲಾಗುವುದು.
24 ಗಂಟೆ ಒಳಗೆ ಟೆಸ್ಟ್ ರಿಸಲ್ಟ್ ಕೊಡಲೇಬೇಕು. ಆ ಅವಧಿಯಲ್ಲಿ ರಿಪೋರ್ಟ್ ಕೊಡದಿದ್ದರೆ ಪ್ರತಿ ರಿಪೋರ್ಟ್ ಗೆ 150 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಇನ್ನು ಪ್ರತಿ ದಿನ ಸಾವಿರ ಜನಕ್ಕೆ ಬೆಡ್ ಕೊಡುತ್ತೇವೆ. ಒಟ್ಟಾಗಿ 2 ರಿಂದ 3 ಸಾವಿರ ಬೆಡ್ ಕೊಡಲು ಸಾಧ್ಯವಾಗುತ್ತದೆ.
ಹೀಗಾಗಿ ಸಾರ್ಸ್ ಪೋರ್ಟಲ್ ಮೂಲಕ ಜನರಿಗೆ ತಲುಪುತ್ತೆ. ರೇಮ್ಡಿಸಿವರ್ ಕೂಡ ಸಾರ್ಸ್ ಪೋರ್ಟಲ್ ಮೂಲಕ ನೀಡಲಾಗುತ್ತೆ ಎಂದು ತಿಳಿಸಿದರು.










