ಸರಣಿ ಸೋಲುತ್ತಿದ್ದಂತೆ ಕನ್ನಡಿಗನ ವಿರುದ್ಧ ಮುಗಿಬಿದ್ದ ಮುಂಬೈಕರ್ Sunil Gavaskar brutally slams KL Rahul’s captaincy
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ರನ್ಗಳ ಸೋಲು ಕಂಡಿದೆ.
ಮೂರು ಪಂದ್ಯಗಳ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ 3-0 ಅಂತರದಿಂದ ವಶಪಡಿಸಿಕೊಂಡಿದೆ.
ಈ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿದ್ದ ಕೆ.ಎಲ್.ರಾಹುಲ್ ಕೇವಲ ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್ ಮನ್ ಆಗಿಯೂ ವಿಫಲರಾಗಿದ್ದರು.
ಟೀಂ ಇಂಡಿಯಾದ ನಾಯಕನಾಗಿ ರಾಹುಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. Sunil Gavaskar brutally slams KL Rahul’s captaincy
ಇತ್ತ ಕೆ.ಎಲ್.ರಾಹುಲ್ ಆದಾಗಿನಿಂದಲೂ ಟೀಕಿಸುತ್ತಲೇ ಬರುತ್ತಿರುವ ದಿಗ್ಗಜ ಬ್ಯಾಟರ್ ಸುನೀಲ್ ಗವಾಸ್ಕರ್, ಸರಣಿ ಕ್ಲೀನ್ ಸ್ವೀಪ್ ಆಗುತ್ತಿದ್ದಂತೆ ಕನ್ನಡಿಗನ ವಿರುದ್ಧ ಮುಗಿಬಿದಿದ್ದಾರೆ.
ನಾಯಕರಾಗಿ ತಂಡ ಸಂಕಷ್ಟದಲ್ಲಿದ್ದಾಗ ತಂತ್ರಗಳನ್ನು ರೂಪಿಸುವಲ್ಲಿ ರಾಹುಲ್ ವಿಫಲರಾಗಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ರಾಹುಲ್ ನಾಯಕತ್ವದ ಬಗ್ಗೆ ಟೀಕೆಗಳ ಸುರಿಮಳೆಗೈದಿರುವ ಸುನೀಲ್ ಗವಾಸ್ಕರ್, ”ರಾಹುಲ್ ಈ ಸರಣಿಯಲ್ಲಿ ನಾಯಕನಾಗಿ ಸಂಪೂರ್ಣ ವಿಫಲರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಬ್ಯಾಟರ್ ಗಳು ಗಟ್ಟಿಯಾಗಿ ನೆಲೆಯೂರುತ್ತಿದ್ದಾಗ ನಾಯಕರಾಗಿ ರಾಹುಲ್ ರಣತಂತ್ರಗಳನ್ನು ರೂಪಿಸಬೇಕಿತ್ತು.
ಆದ್ರೆ ರಾಹುಲ್ ಆ ರೀತಿ ಮಾಡದೇ ದೂರ ಇದ್ದರು, ದಕ್ಷಿಣ ಆಫ್ರಿಕಾ ತಂಡ ದೊಡ್ಡ ಸ್ಕೋರ್ ಮಾಡುವುದನ್ನು ತಡೆಯುವ ರಾಹುಲ್ ತೆಗೆದುಕೊಂಡ ನಿರ್ಧಾರದಿಂದ ನನಗೆ ತೃಪ್ತಿಕರವಾಗಿಲ್ಲ.
ಕೆ.ಎಲ್.ರಾಹುಲ್ ವೈಫಲ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕನಾಗಿ ಹೆಚ್ಚಿನ ಅನುಭವ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು. ರಾಹುಲ್ ಬ್ಯಾಟಿಂಗ್ನಲ್ಲಿಯೂ ವಿಫಲರಾಗಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.