ಬಾಲಿವುಡ್ ನಟ ಸುಶಾಂತ್ ಸಾವಿನ ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗಿದ್ದು, ಪ್ರಕರಣ ಸಂಬಂಧ ಸಿಬಿಐ ಎಫ್ ಐ ಆರ್ ದಾಖಲಿಸಿಕೊಂಡಿದೆ. 7 ಮಂದಿ ವಿರುದ್ದ FIR ದಾಖಲು ಮಾಡಿಕೊಂಡ ಸಿಬಿಐ ತನಿಖೆ ಆರಂಭಿಸಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಪ್ರಕರಣದ ಹಿಂದೆ ಹಲವಾರು ಅನುಮಾನುಗಳು ಹುಟ್ಟುವುದಕ್ಕೆ ಶುರುವಾಗಿತ್ತು. ನೆಪೋಟಿಸಮ್, ಮೂವಿ ಮಾಫಿಯಾ ಆರೋಪ ಒಂದೆಡೆಯಾದ್ರೆ, ಮತ್ತೊಂದೆಡೆ ಸುಶಾಂತ್ ರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬುವುದಕ್ಕೆ ಕೆಲವರು ವಾದಿಸೋಕೆ ಶುರುಮಾಡಿದ್ರು. ಸುಶಾಂತ್ ಸಾವಿಗೆ 2 ತಿಂಗಳೇ ಆಗುತ್ತಾ ಬಂದಿದ್ದರು ದಿನಕ್ಕೊಂದು ತಿರುವು ಪಡೆದುಕೊಂಡೇ ಸುದ್ದಿಯಲ್ಲಿದೆ. ಇನ್ನೂ ಬಾಲಿವುಡ್ ನ ದೊಡ್ಡ ದೊಡ್ಡ ಮಂದಿಯ ಕೈವಾಡ ಈ ಪ್ರಕೃರಣದಲ್ಲಿದೆ, ಅಷ್ಟೇ ಅಲ್ಲ ಈ ಕೇಸ್ ಗೆ ಮಹಾರಾಷ್ಟ್ರ ಸಿಎಂ ಪುತ್ರ ಆದಿತ್ಯ ಠಾಕ್ರೆ ಅವರನ್ನು ಎಳೆ ತಂದಿದ್ರು ನಟಿ ಕಂಗನಾ. ಈ ಮೂಲಕ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪವೂ ಇದೆ ಎಂಬ ಅನುಮಾನ ಶುರುವಾಗಿತ್ತು. ಆದ್ರೆ ಈ ಅನುಮಾನಕ್ಕೆ ರೆಕ್ಕೆ ಪುಕ್ಕ ನೀಡಿದ್ದೇ ಮಹಾರಾಷ್ಟ್ರ ಸರ್ಕಾರ ಎಂಬಂತಾಗಿತ್ತು. ಯಾಕೆಂದ್ರೆ ಹಲವಾರು ಮಂದಿ ಹಲವು ಖ್ಯಾತ ನಟರು ಅಷ್ಟೇ ಯಾಕೆ ಬಿಜೆಪಿ ಸಂಸದ ಸುಬ್ರಮಣಿಯನ್ ಸಹ ಈ ಕೇಸ್ ಸಿಬಿಐಗೆ ಒಪ್ಪಿಸಬೇಕೆಂದು ಎಷ್ಟೇ ಒತ್ತಾಯಿಸಿದ್ರು ಮಹಾರಾಷ್ಟ್ರ ಸರ್ಕಾರ ಇದಕ್ಕೆ ಸುತರಾಮ್ ಒಪ್ಪಲಿಲ್ಲ.
ಹೀಗಿರುವಾಗಲೇ ಬಿಹಾರದ ಪಟ್ನಾದಲ್ಲಿ ಸುಶಾಂತ್ ತಂದೆ ಕೆ.ಕೆ ಸಿಂಗ್ ಅವರು ತಮ್ಮ ಮಗನ ಸಾವಿಗೆ ಪ್ರೇಯಸಿ ರಿಯಾಳೆ ಕಾರಣ ಅನ್ನೋ ಸ್ಟೇಟ್ ಮೆಂಟ್ ಕೊಟ್ಟಿದ್ರು. ಅಲ್ದೇ ರಿಯಾ ವಿರುದ್ಧ ಮಾನಸಿಕ ಕಿರುಕುಳ, ಮೋಸ ಕಳ್ಳತನದ ಆರೋಪ ಹೊರಿಸಿ ಪಟ್ನಾದಲ್ಲಿ ದೂರು ದಾಖಲಿಸಿದ್ರು. ಇನ್ನೇನು ಬಿಹಾರದ ಪೊಲಿಸ್ರು ನನ್ನ ಹುಡುಕಿಕೊಂಡು ಬಂದೇ ಬರುತ್ತಾರೆ ಅನ್ನೋದು ಯಾವಾಗ ಗೊತ್ತಾಯ್ತೋ ರಿಯಾ ಗಂಟು ಮೂಟೆ ಸಮೇತ ಎಸ್ಕೇಪ್ ಆಗಿಬಿಟ್ಟಿದ್ರು. ಇಲ್ಲೇ ಕಹಾನಿ ಮೆ ಟ್ವಿಸ್ಟ್ ಸಿಕ್ಕಿದ್ದು. ರಿಯಾ ಎಸ್ಕೇಪ್ ಆಗಿದ್ದೇ ತಡ ಆಕೆಯ ವಿರುದ್ಧ ಒಂದೊಂದೆ ಆರೋಪಗಳು ಶುರುವಾದ್ವು. ಒಂದೆಡೆ ರಿಯಾ ಮಾಠ ಮಂತ್ರದಿಂದ ಸುಶಾಂತ್ ರನ್ನ ವಶೀಕರಿಸಿದ್ರು ಎಂಬ ಆರೋಪವೂ ಕೇಳಿ ಬಂತು. ನೆಟ್ಟಿಗರಂತು ರಿಯಾ ವಿರುದ್ಧ ಕಿಡಿಕಿಡಿ ಕೆಂಡ ಕಾರೋದಕ್ಕೆ ಶುರುಮಾಡಿಬಿಟ್ರು. ಆಕೆಯನ್ನು ಬಂಧಿಸಲೇ ಬೇಕು ಎಂದು ಒತ್ತಾಯಿಸಿದ್ರು. ಇದರ ಜೊತೆ ಜೊತೆಗೆ ಬಿಹಾರದ ಪೊಲಿಸರಿಗೆ ತನಿಖೆಯಲ್ಲಿ ಸಹಾಯ ಮಾಡದ ಮುಂಬೈ ಪೊಲೀಸರ ವಿರುದ್ಧ ಆಕ್ರೋಶಗಳ ಸುರಿಮಳೆಗಳನ್ನೇ ಸುರಿಸಿದ್ರು. ಇದಲ್ಲದೇ ಪೊಲೀಸರು ಬೇಕಂತಲೇ ಸರಿಯಾಗಿ ತನಿಖೆ ನಡೆಸುತ್ತಲ್ಲ. ರಿಯಾಳನ್ನ ಬಚಾವ್ ಮಾಡೋ ಪ್ರಯತ್ನ ಮಾಡ್ತಿದ್ದಾರೆ ಎಂದೆಲ್ಲಾ ಆರೋಪಗಳು ಹರಿದಾಡೋಕೆ ಶುರುವಾಗಿಬಿಡ್ತು. ಇತ್ತೀಚೆಗೆ ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ಠಾಣೆ ಅವರು ನಟರಾದ ಸೂರಜ್ ಪಾಂಚೋಲಿ ಹಾಗೂ ಡಿನೋ ಮೊರಿಯಾ ಅವರನ್ನೇ ವಿಚಾರಣೇ ಮಾಡಲೇಬೇಕೆಂದು ಆಗ್ರಹಿಸುವ ಮೂಲಕ ಅಚ್ಚರಿ ಮೂಡಿಸಿದ್ರು.
ಇದರ ಜೊತೆ ಜೊತೆಗೆ ಕೇಸ್ ಸಿಬಿಐಗೆ ಒಪ್ಪಿಸಬೇಕೆಂಬ ಒತ್ತಡುಗಳು ಹೆಚ್ಚತ್ತಲೇ ಬಂದಿದ್ದು, ಇದಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದ್ದು, ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ಆ ಒಂದು ನಿರ್ದಾರ. ಯಾವಾಗ ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ಕೇಸ್ ಒಪ್ಪಿಸಲಿಲ್ವೋ ಆ ಕೆಲಸವನ್ನ ಮಾಡೋಕೆ ಬಿಹಾರದ ಸಿಎಂ ಮುಂದಾದ್ರೂ. ಅವರ ಒಂದೇ ಒಂದು ಶಿಫಾರಸ್ಸಿನಿಂದ ಈ ತನಿಖೆ ಸಿಬಿಐಗೆ ಹಸ್ತಾಂತರವಾಯ್ತು. ಇದೀಗ ಸಿಬಿಐ ಮುಷ್ಠಿಯಲ್ಲಿ ಪ್ರಕರಣವಿದ್ದು, ಎಫ್ ಐ ಆರ್ ಸಹ ದಾಖಲಾಗಿರುವುದು ಇಷ್ಟು ದಿನದ ಸುಶಾಂತ್ ಅಭಿಮಾನಿಗಳ ಹೋರಾಟಕ್ಕೆ ಫಲ ಸಿಕ್ಕಿದ್ರೆ ಹಲವರಲ್ಲಿ ನಡುಕ ಹುಟ್ಟಿಸಿದೆ. ದೊಡ್ಡ ದೊಡ್ಡ ಕುಳಗಳ ಹೆಸರುಗಳು ಬಯಲಾಗುವ ಸಾಧ್ಯತೆಯಿದೆ.