ADVERTISEMENT
Monday, August 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತುಳುನಾಡಿನ ಕಾರಣೀಕ ಶಕ್ತಿ ಸ್ವಾಮಿ ಕೊರಗಜ್ಜ

Shwetha by Shwetha
February 9, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv tulunadu episode1
Share on FacebookShare on TwitterShare on WhatsappShare on Telegram

ತುಳುನಾಡಿನ ಕಾರಣೀಕ ಶಕ್ತಿ ಸ್ವಾಮಿ ಕೊರಗಜ್ಜ Saakshatv tulunadu episode1

ಕಡಲಪುಡೆತ ಉಡಲಗೇನ ತುಡರ್‌ ಈ ಅಜ್ಜ… ಆ ಸತ್ಯದ ಹಾದಿಗ್‌… ಧರ್ಮೊದ ಸಾದಿಗ್‌ ಪುದರ್‌ ಕೊರಗಜ್ಜ…

Related posts

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

August 24, 2026
ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

August 24, 2026

ತುಳುನಾಡಿನಲ್ಲಿ ದೈವಗಳು ತುಳುವರ ಮನೆ-ಮನಸ್ಸಿನಲ್ಲಿ ನೆಲೆಗೊಂಡಿರುವ ಕಾರಣೀಕ ಶಕ್ತಿಗಳು. Saakshatv tulunadu episode1
Saakshatv tulunadu episode1

ಬದುಕಿಗೆ ಭರವಸೆ, ಭದ್ರತೆ ಮತ್ತು ಸಮಾಧಾನವನ್ನು ನೀಡಿರುವ ಈ ದೈವಗಳ ಜೊತೆ ತುಳುವರಿಗೆ ಭಕ್ತಿಯೊಂದಿಗೆ ಒಂದು ರೀತಿಯ ಸಲುಗೆಯ ಸಂಬಂಧವಿದೆ. ಹಾಗಾಗಿ ದೈವಗಳನ್ನು ಇಲ್ಲಿ ಏಕವಚದಲ್ಲೇ ಸಂಭೋದಿಸಲಾಗುತ್ತದೆ. ವೃದ್ಧರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ‌ಇಷ್ಟ ಪಡುವ ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರಣೀಕ ದೈವ. ‌

ಬೆಲೆ ಬಾಳುವ ವಸ್ತು ಕಳೆದು ಹೋದರೆ‌ ಕೊರಗಜ್ಜನಿಗೆ ಸಾರಾಯಿ ಕೊಡುತ್ತೇನೆ ಎಂದು ಹರಕೆ ಹೇಳಿದರೆ ಕಾಣೆಯಾದ ವಸ್ತು ಪತ್ತೆಯಾಗುತ್ತದೆ. ಆರೋಗ್ಯ ಸಮಸ್ಯೆ ಅಥವಾ ದನಕರುಗಳಿಗೆ ಏನಾದರೂ ತೊಂದರೆಯಾದರೆ ತುಳುನಾಡಿನ ಜನರು ಕೊರಗಜ್ಜನ ಮೊರೆ ಹೋಗುತ್ತಾರೆ. ‌
ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು.
ಪಾಡ್ದನ ಪ್ರಕಾರ ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳಿಗೆ ಜನಿಸಿದ ಮಗುವೇ ತನಿಯ ಕೊರಗ. 30 ದಿನಗಳ ಶಿಶುವಾಗಿದ್ದಾಗ ತಂದೆ ತಾಯಿಯನ್ನು ಕಳೆದುಕೊಂಡ ತನಿಯ ಬಳಿಕ‌ ಸೇಂದಿ ಮಾರುವ ಹೆಂಗಸು ಮೈರಕ್ಕೆ ಬೈದತಿಯ ಆಶ್ರಯದಲ್ಲಿ ಬೆಳೆಯುತ್ತಾನೆ.

ಬಾಲ್ಯದಿಂದಲೇ ತನ್ನ ಅಸಾಮಾನ್ಯ ಕೆಲಸಗಳಿಂದ ಪ್ರಸಿದ್ಧನಾಗಿದ್ದ ತನಿಯ ಕೊರಗ ಹಣ್ಣು ಕೊಯ್ಯಲು ಹೋದವ ಅಲ್ಲಿಂದ ಮಾಯವಾಗುತ್ತಾನೆ ಎಂಬ ವಿವರ ತುಳುನಾಡಿನ ಪಾಡ್ದನದಲ್ಲಿ ಬರುತ್ತದೆ. ಮುಂದೆ ಆತ ತನ್ನ ನೆಲದ ಜನರನ್ನು ಕಾಯುವ ಭರವಸೆ ನೀಡಿದ.

ಮಂಗಳೂರಿನ ಕುತ್ತಾರು ಕಟ್ಟೆಯ ಬಳಿ ಕೊರಗಜ್ಜನ ಸಾನಿಧ್ಯವಿದೆ. ಈ ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ಬೆಂಕಿ ಕಿಡಿಯನ್ನು ಹೊತ್ತಿಸಬಾರದು ಎಂಬ ನಿಯಮವಿದೆ. ವಾಹನಗಳು ಆ ರಸ್ತೇಲಿ ದೀಪ ಹಾಕದೆ ಬರುತ್ತಾರೆ. ಯಾರಾದರೂ ನಿಯಮ ಮೀರಿದರೆ ಅವರಿಗೆ ಕೆಡುಕು ಆಗಿರುವುದಕ್ಕೆ ಅನೇಕ ಉದಾಹರಣೆಗಳಿವೆ.
ಡೆಕ್ಕಾರು, ಬೊಲ್ಯ,ಸೋಮೇಶ್ವರ, ದೇರಳಕಟ್ಟೆ, ಕುತ್ತಾರು ಮೂಲಸ್ಥಾನ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ 7 ಕಲ್ಲಿನಲ್ಲಿ ‌ ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತದೆ.
ಕೊರಗಜ್ಜನ ಕಟ್ಟೆಗಳಲ್ಲಿ ಹರಕೆಯ ಅಗೇಲು ಸೇವೆ ಮತ್ತು ಕೋಲಗಳನ್ನು ನಡೆಸಲಾಗುತ್ತದೆ. ಹುರುಳಿ, ಬಸಳೆ, ಮೀನು, ಕೋಳಿ, ಉಪ್ಪಿನಕಾಯಿ, ಚಕ್ಕುಲಿ, ಸೇಂದಿ, ಮದ್ಯ, ತಾಂಬೂಲವನ್ನು ಅಗೆಲು ಸೇವೆಯಲ್ಲಿ ಬಡಿಸಲಾಗುತ್ತದೆ.
Saakshatv tulunadu episode1

ಕೊರಗಜ್ಜನ ಕೋಲದಲ್ಲಿ ತಲೆಗೆ ಮುಟ್ಟಾಳೆ, ಸೊಂಟಕ್ಕೆ ಗೆಜ್ಜೆಯ ಪಟ್ಟಿ, ಮೈ ತುಂಬಾ ಮಸಿ ಬಳಿದು ಕೈಯಲ್ಲಿ ‌ಬೆತ್ತವನ್ನು ಹಿಡಿದು ನರ್ತನ ಮಾಡಲಾಗುತ್ತದೆ. ಮತ್ತು ‌ಪಾಡ್ದನ ಪ್ರಮುಖ ‌ಪಾತ್ರವಹಿಸುತ್ತದೆ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಮೇಲಿನ ಕಥೆ ಪಾಡ್ದನ ಆಧಾರಿತವಾಗಿದ್ದು, ತಮ್ಮದೇ ಆದ ಸಂಸ್ಕ್ರತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ತುಳುನಾಡಿನಲ್ಲಿ ತುಳುನಾಡಿನ ಎಲ್ಲಾ ದೈವಗಳ ಇತಿಹಾಸವು ‌ಅಲಿಖಿತವಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv/status/1357889181113024515?s=19

https://twitter.com/SaakshaTv/status/1358257880034648067?s=19

 

Tags: Saakshatv tulunaduSwami koragajjaTulunadu
ShareTweetSendShare
Join us on:

Related Posts

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

by Shwetha
August 24, 2026
0

ಪುಣೆ: ದೇಶದ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆತಂಕಕಾರಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ....

ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

by Shwetha
August 24, 2026
0

ನವದೆಹಲಿ: ದೇಶದಲ್ಲಿ ಮೀಸಲಾತಿ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮೀಸಲಾತಿ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಯಾರ ಒತ್ತಾಯಕ್ಕೂ...

ಗಾರ್ಡನ್ ಸಿಟಿ ಬೆಂಗಳೂರಿನ ಉಸಿರು ನಿಲ್ಲಿಸಬೇಡಿ: ಪಾರ್ಕ್ ಗಳು ನಿಮ್ಮ ಖಾಸಗಿ ಆಸ್ತಿಯಲ್ಲ-ಉದ್ಯಾನವನಗಳ ಶೇ 5ರಷ್ಟು ಜಾಗದ ಸರ್ಕಾರದ ಬಳಕೆಗೆ ತೇಜಸ್ವಿ ಸೂರ್ಯ ಬ್ರೇಕ್

ಗಾರ್ಡನ್ ಸಿಟಿ ಬೆಂಗಳೂರಿನ ಉಸಿರು ನಿಲ್ಲಿಸಬೇಡಿ: ಪಾರ್ಕ್ ಗಳು ನಿಮ್ಮ ಖಾಸಗಿ ಆಸ್ತಿಯಲ್ಲ-ಉದ್ಯಾನವನಗಳ ಶೇ 5ರಷ್ಟು ಜಾಗದ ಸರ್ಕಾರದ ಬಳಕೆಗೆ ತೇಜಸ್ವಿ ಸೂರ್ಯ ಬ್ರೇಕ್

by Shwetha
August 24, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಉದ್ಯಾನವನಗಳ ಶೇಕಡಾ 5ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ತೀರ್ಮಾನ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವು...

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

by Shwetha
August 24, 2026
0

ಮುಂಬೈ: ಪುಣೆಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಇದೊಂದು ರಾಜಕೀಯ ಕಾಮಿಡಿ ಶೋ ಎಂದು...

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

by Shwetha
August 24, 2026
0

ಬಾಗಲಕೋಟೆ: ರಾಜ್ಯದಲ್ಲಿ ಸಕ್ಕರೆ ಬೆಲೆ ಏರಿಕೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಬೆಲೆ ಏರಿಕೆಯನ್ನು ವಿಭಿನ್ನವಾಗಿ ಸಮರ್ಥಿಸಿಕೊಂಡಿದ್ದಾರೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram