ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಚಹಾ ಅಂಗಡಿಯವರ ಮಗಳು ಈಗ‌ ಹೆಮ್ಮೆಯ ವಾಯು ಸೇನೆಯ ಪೈಲಟ್

admin by admin
June 24, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಚಹಾ ಅಂಗಡಿಯವರ ಮಗಳು ಈಗ‌ ಹೆಮ್ಮೆಯ ವಾಯು ಸೇನೆಯ ಪೈಲಟ್

ಮಧ್ಯಪ್ರದೇಶ, ಜೂನ್ 24: 23 ವರ್ಷದ ಆಂಚಲ್ ಗಂಗ್ವಾಲ್ ಅವರು ಶನಿವಾರ ಭಾರತೀಯ ವಾಯುಪಡೆಯ ಅಕಾಡೆಮಿಯಿಂದ ಪದವಿ ಪಡೆದು, ಭಾರತದ ಹೆಮ್ಮೆಯ ವಾಯು ಸೇನೆಯಲ್ಲಿ ಪೈಲಟ್​​ ಆಗಿ ನೇಮಕಗೊಂಡಿದ್ದಾರೆ.

Related posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

December 5, 2025
ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

December 5, 2025


ಬಡತನದಲ್ಲಿ ಬೆಳೆದು ಬಂದ ಅಂಚಲ್ ಅವರ ತಂದೆ ಸುರೇಶ್ ಗಂಗ್ವಾಲ್ ಅವರು ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಸಣ್ಣ ಚಹಾ ಅಂಗಡಿಯನ್ನು ಹೊಂದಿದ್ದಾರೆ. ಆಂಚಲ್ ಅವರು ಕಂಡಿದ್ದ ಕನಸನ್ನು ನನಸಾಗಿಸಿರುವ ಸಾಧನೆಯ ಹಿಂದೆ ಅವರ ತಂದೆಯ ಕಠಿಣ ಪರಿಶ್ರಮವೂ ಅಡಗಿದೆ. ಮಗಳು ಏರೋನಾಟಿಕಲ್ ಎಂಜಿನಿಯರಿಂಗ್‌ ಗೆ ಸೇರುತ್ತೇನೆ ಎಂದಾಗ ಅವರ ತಂದೆ ಬಳಿ ಶಿಕ್ಷಣ ಶುಲ್ಕವನ್ನು ಪಾವತಿಸಲು ಸಹ ಹಣವಿರಲಿಲ್ಲ. ಆದರೆ ಸುರೇಶ್ ಗಂಗ್ವಾಲ್ ಮಾತ್ರ ಚಹ ಮಾರುತ್ತಲೇ ಕಷ್ಟ ‌ಪಟ್ಟು ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿ ಪೈಲಟ್ ಮಾಡಿದ್ದಾರೆ.
ಪ್ರಯಾಣದ ನಿರ್ಬಂಧದಿಂದಾಗಿ ಆಂಚಲ್ ಅವರ ಪೋಷಕರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ‌ಆದರೆ ಮಗಳು ವಾಯು ಸೇನೆಯಲ್ಲಿ ಪೈಲಟ್​​ ಆಗಿ ನೇಮಕಗೊಂಡದನ್ನು ಟಿವಿಯಲ್ಲಿ ನೋಡಿ ಆನಂದಬಾಷ್ಪ ಸುರಿಸಿದ್ದಾರೆ.
ಪದವಿ ಸಮಾರಂಭದಲ್ಲಿ ಆಂಚಲ್ ಗಂಗ್ವಾಲ್ ನಾನು ಪ್ರತಿದಿನ ರಾತ್ರಿ ಈ ದಿನದ ಕನಸು ಕಾಣುತ್ತಿದ್ದೆ. ನಾನು ಇಂದು  ‌ಈ ಸಮವಸ್ತ್ರವನ್ನು ಧರಿಸಿ ಇಲ್ಲಿ ನಿಲ್ಲುವಾಗ ನನಗಾಗಿ ಬಹಳಷ್ಟು ತೊಂದರೆಗಳನ್ನು ಎದುರಿಸಿರುವ ನನ್ನ ತಂದೆ ತಾಯಿ ಎದುರು ಇರಬೇಕು ಎಂದು ಬಯಸಿದ್ದೆ.‌ ಆದರೆ ಕೊರೊನಾ‌ ಸಮಯದಿಂದಾಗಿ ಅದು ಸಾಧ್ಯವಾಗಿಲ್ಲ ಎಂದರು.‌


ಅವರ ತಂದೆ ಮಗಳ ಸಾಧನೆಯ ಬಗ್ಗೆ, ಪೈಲಟ್​ ಆಗುವುದು ಮಗಳ ಕನಸಾಗಿತ್ತು. ಅವಳು ವಾಯಸೇನೆಯ ಪೈಲಟ್ ಆಗಿ ನೇಮಕವಾಗಿದ್ದು ನಮಗೆ ತುಂಬಾ ಹೆಮ್ಮೆ ತಂದಿದೆ. ಈ ಸಂತೋಷವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. 2013ರ ಕೇದಾರನಾಥ ಮೇಘಸ್ಪೋಟದ ಅವಘಡದಲ್ಲಿ ಭಾರತೀಯ ವಾಯುಸೇನೆ‌ ನಿರ್ವಹಿಸಿದ ಕಾರ್ಯದಿಂದ ಪ್ರೇರಣೆಗೊಂಡು ಭಾರತೀಯ ವಾಯುಪಡೆಗೆ ಸೇರುವ ಕನಸು ಕಂಡಿದ್ದಳು. ಆದರೆ ಅವಳ ಕನಸನ್ನು ನನಸಾಗಿಸುವುದು ನಮಗೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ಅವಳು ಅದನ್ನು ದೃಢ ಸಂಕಲ್ಪದಿಂದ ಸಾಧಿಸಿ ತೋರಿಸಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಮಧ್ಯಪ್ರದೇಶದ ಸಿಎಂ ಶಿವರಾಜ್​ ಸಿಂಗ್ ಚೌವ್ಹಾಣ್​ ಅವರು ಅಂಚಲ್ ಗಂಗ್ವಾಲ್ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅಂಚಲ್ ಗಂಗ್ವಾಲ್ ಸಾಧನೆ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದೆ.‌ ನೀಮುಚ್‌ನಲ್ಲಿ ಚಹಾ ಅಂಗಡಿಯನ್ನು ಹೊಂದಿರುವ ಸುರೇಶ್ ಗಂಗ್ವಾಲ್ ಅವರ ಪುತ್ರಿ ಅಂಚಲ್ ಈಗ ವಾಯುಸೇನೆಯಲ್ಲಿ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆ. ಮಧ್ಯಪ್ರದೇಶದ ಹೆಮ್ಮೆಯ ಮಗಳು ಅಂಚಲ್ ಆಕಾಶದ ಎತ್ತರದಲ್ಲಿ ಹಾರಲಿದ್ದಾರೆ.
ಮಧ್ಯಪ್ರದೇಶಕ್ಕೆ ಹೆಮ್ಮೆ ತಂದ ಮಗಳಿಗೆ ಅಭಿನಂದನೆಗಳು, ಆಶೀರ್ವಾದ ಮತ್ತು ಶುಭಾಶಯಗಳು ಎಂದು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

Tags: #ಕರ್ನಾಟಕAnchal gangwalindiaIndian air forceInspirekarnatakaMadhya PradeshShivaraj singhಭಾರತ
ShareTweetSendShare
Join us on:

Related Posts

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ

by admin
December 5, 2025
0

ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

by admin
December 5, 2025
0

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ...! ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ. ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ...

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

by Shwetha
December 5, 2025
0

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಎಂದು ಸುಳ್ಳು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ತೊಟ್ಟಿಯಲ್ಲಿ ಮುಳುಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ...

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

by Shwetha
December 5, 2025
0

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೂಪಾಯಿ...

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

by Shwetha
December 5, 2025
0

ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಸೈಬರ್​ ಭದ್ರತಾ ಆಪ್ ಅನ್ನು ಕಡ್ಡಾಯವಾಗಿ ಪೂರ್ವ ಅಳವಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಈ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram