ADVERTISEMENT
Friday, April 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಚಹಾ ಅಂಗಡಿಯವರ ಮಗಳು ಈಗ‌ ಹೆಮ್ಮೆಯ ವಾಯು ಸೇನೆಯ ಪೈಲಟ್

admin by admin
June 24, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಚಹಾ ಅಂಗಡಿಯವರ ಮಗಳು ಈಗ‌ ಹೆಮ್ಮೆಯ ವಾಯು ಸೇನೆಯ ಪೈಲಟ್

ಮಧ್ಯಪ್ರದೇಶ, ಜೂನ್ 24: 23 ವರ್ಷದ ಆಂಚಲ್ ಗಂಗ್ವಾಲ್ ಅವರು ಶನಿವಾರ ಭಾರತೀಯ ವಾಯುಪಡೆಯ ಅಕಾಡೆಮಿಯಿಂದ ಪದವಿ ಪಡೆದು, ಭಾರತದ ಹೆಮ್ಮೆಯ ವಾಯು ಸೇನೆಯಲ್ಲಿ ಪೈಲಟ್​​ ಆಗಿ ನೇಮಕಗೊಂಡಿದ್ದಾರೆ.

Related posts

ದೇವಸ್ಥಾನಗಳ ಟನ್ ಗಟ್ಟಲೆ ಚಿನ್ನ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಲಿ ಫಾದರ್ ಪೌಲ್ ಥೆಲಕ್ಕಟ್ ವಿವಾದಾತ್ಮಕ ಹೇಳಿಕೆ

ದೇವಸ್ಥಾನಗಳ ಟನ್ ಗಟ್ಟಲೆ ಚಿನ್ನ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಲಿ ಫಾದರ್ ಪೌಲ್ ಥೆಲಕ್ಕಟ್ ವಿವಾದಾತ್ಮಕ ಹೇಳಿಕೆ

April 17, 2026
ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

April 17, 2026


ಬಡತನದಲ್ಲಿ ಬೆಳೆದು ಬಂದ ಅಂಚಲ್ ಅವರ ತಂದೆ ಸುರೇಶ್ ಗಂಗ್ವಾಲ್ ಅವರು ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಸಣ್ಣ ಚಹಾ ಅಂಗಡಿಯನ್ನು ಹೊಂದಿದ್ದಾರೆ. ಆಂಚಲ್ ಅವರು ಕಂಡಿದ್ದ ಕನಸನ್ನು ನನಸಾಗಿಸಿರುವ ಸಾಧನೆಯ ಹಿಂದೆ ಅವರ ತಂದೆಯ ಕಠಿಣ ಪರಿಶ್ರಮವೂ ಅಡಗಿದೆ. ಮಗಳು ಏರೋನಾಟಿಕಲ್ ಎಂಜಿನಿಯರಿಂಗ್‌ ಗೆ ಸೇರುತ್ತೇನೆ ಎಂದಾಗ ಅವರ ತಂದೆ ಬಳಿ ಶಿಕ್ಷಣ ಶುಲ್ಕವನ್ನು ಪಾವತಿಸಲು ಸಹ ಹಣವಿರಲಿಲ್ಲ. ಆದರೆ ಸುರೇಶ್ ಗಂಗ್ವಾಲ್ ಮಾತ್ರ ಚಹ ಮಾರುತ್ತಲೇ ಕಷ್ಟ ‌ಪಟ್ಟು ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿ ಪೈಲಟ್ ಮಾಡಿದ್ದಾರೆ.
ಪ್ರಯಾಣದ ನಿರ್ಬಂಧದಿಂದಾಗಿ ಆಂಚಲ್ ಅವರ ಪೋಷಕರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ‌ಆದರೆ ಮಗಳು ವಾಯು ಸೇನೆಯಲ್ಲಿ ಪೈಲಟ್​​ ಆಗಿ ನೇಮಕಗೊಂಡದನ್ನು ಟಿವಿಯಲ್ಲಿ ನೋಡಿ ಆನಂದಬಾಷ್ಪ ಸುರಿಸಿದ್ದಾರೆ.
ಪದವಿ ಸಮಾರಂಭದಲ್ಲಿ ಆಂಚಲ್ ಗಂಗ್ವಾಲ್ ನಾನು ಪ್ರತಿದಿನ ರಾತ್ರಿ ಈ ದಿನದ ಕನಸು ಕಾಣುತ್ತಿದ್ದೆ. ನಾನು ಇಂದು  ‌ಈ ಸಮವಸ್ತ್ರವನ್ನು ಧರಿಸಿ ಇಲ್ಲಿ ನಿಲ್ಲುವಾಗ ನನಗಾಗಿ ಬಹಳಷ್ಟು ತೊಂದರೆಗಳನ್ನು ಎದುರಿಸಿರುವ ನನ್ನ ತಂದೆ ತಾಯಿ ಎದುರು ಇರಬೇಕು ಎಂದು ಬಯಸಿದ್ದೆ.‌ ಆದರೆ ಕೊರೊನಾ‌ ಸಮಯದಿಂದಾಗಿ ಅದು ಸಾಧ್ಯವಾಗಿಲ್ಲ ಎಂದರು.‌


ಅವರ ತಂದೆ ಮಗಳ ಸಾಧನೆಯ ಬಗ್ಗೆ, ಪೈಲಟ್​ ಆಗುವುದು ಮಗಳ ಕನಸಾಗಿತ್ತು. ಅವಳು ವಾಯಸೇನೆಯ ಪೈಲಟ್ ಆಗಿ ನೇಮಕವಾಗಿದ್ದು ನಮಗೆ ತುಂಬಾ ಹೆಮ್ಮೆ ತಂದಿದೆ. ಈ ಸಂತೋಷವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. 2013ರ ಕೇದಾರನಾಥ ಮೇಘಸ್ಪೋಟದ ಅವಘಡದಲ್ಲಿ ಭಾರತೀಯ ವಾಯುಸೇನೆ‌ ನಿರ್ವಹಿಸಿದ ಕಾರ್ಯದಿಂದ ಪ್ರೇರಣೆಗೊಂಡು ಭಾರತೀಯ ವಾಯುಪಡೆಗೆ ಸೇರುವ ಕನಸು ಕಂಡಿದ್ದಳು. ಆದರೆ ಅವಳ ಕನಸನ್ನು ನನಸಾಗಿಸುವುದು ನಮಗೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ಅವಳು ಅದನ್ನು ದೃಢ ಸಂಕಲ್ಪದಿಂದ ಸಾಧಿಸಿ ತೋರಿಸಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಮಧ್ಯಪ್ರದೇಶದ ಸಿಎಂ ಶಿವರಾಜ್​ ಸಿಂಗ್ ಚೌವ್ಹಾಣ್​ ಅವರು ಅಂಚಲ್ ಗಂಗ್ವಾಲ್ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅಂಚಲ್ ಗಂಗ್ವಾಲ್ ಸಾಧನೆ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದೆ.‌ ನೀಮುಚ್‌ನಲ್ಲಿ ಚಹಾ ಅಂಗಡಿಯನ್ನು ಹೊಂದಿರುವ ಸುರೇಶ್ ಗಂಗ್ವಾಲ್ ಅವರ ಪುತ್ರಿ ಅಂಚಲ್ ಈಗ ವಾಯುಸೇನೆಯಲ್ಲಿ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆ. ಮಧ್ಯಪ್ರದೇಶದ ಹೆಮ್ಮೆಯ ಮಗಳು ಅಂಚಲ್ ಆಕಾಶದ ಎತ್ತರದಲ್ಲಿ ಹಾರಲಿದ್ದಾರೆ.
ಮಧ್ಯಪ್ರದೇಶಕ್ಕೆ ಹೆಮ್ಮೆ ತಂದ ಮಗಳಿಗೆ ಅಭಿನಂದನೆಗಳು, ಆಶೀರ್ವಾದ ಮತ್ತು ಶುಭಾಶಯಗಳು ಎಂದು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

Tags: #ಕರ್ನಾಟಕAnchal gangwalindiaIndian air forceInspirekarnatakaMadhya PradeshShivaraj singhಭಾರತ
ShareTweetSendShare
Join us on:

Related Posts

ದೇವಸ್ಥಾನಗಳ ಟನ್ ಗಟ್ಟಲೆ ಚಿನ್ನ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಲಿ ಫಾದರ್ ಪೌಲ್ ಥೆಲಕ್ಕಟ್ ವಿವಾದಾತ್ಮಕ ಹೇಳಿಕೆ

ದೇವಸ್ಥಾನಗಳ ಟನ್ ಗಟ್ಟಲೆ ಚಿನ್ನ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಲಿ ಫಾದರ್ ಪೌಲ್ ಥೆಲಕ್ಕಟ್ ವಿವಾದಾತ್ಮಕ ಹೇಳಿಕೆ

by Shwetha
April 17, 2026
0

ಲೋಕಸಭೆಯಲ್ಲಿ ಮಂಡನೆಯಾಗಿರುವ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಅಂದರೆ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕ್ಯಾಥೋಲಿಕ್ ಪಾದ್ರಿ ಫಾದರ್ ಪೌಲ್ ಥೆಲಕ್ಕಟ್ ನೀಡಿರುವ...

ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

ರಾಮ ಉತ್ತರ ಭಾರತದವನು, ರಾವಣ ದಕ್ಷಿಣದ ಆದಿವಾಸಿ ಎಂದ ಪ್ರಕಾಶ್ ರಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಟ್ರೋಲ್ ಸುರಿಮಳೆ

by Shwetha
April 17, 2026
0

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಅವರು ರಾಮಾಯಣದ ಕುರಿತು ನೀಡಿದ ಹೇಳಿಕೆಯ ವಿಡಿಯೋ ಈಗ...

ಕಾಂಗ್ರೆಸ್ ಕೋಟೆಗೆ ಮುಸ್ಲಿಂ ಮುಖಂಡರ ಮುತ್ತಿಗೆ ಒಂದು ಕುಟುಂಬಕ್ಕಾಗಿ ಸಮುದಾಯವನ್ನೇ ಬಲಿಕೊಟ್ಟರೇ ಸಿದ್ದರಾಮಯ್ಯ

ಕಾಂಗ್ರೆಸ್ ಕೋಟೆಗೆ ಮುಸ್ಲಿಂ ಮುಖಂಡರ ಮುತ್ತಿಗೆ ಒಂದು ಕುಟುಂಬಕ್ಕಾಗಿ ಸಮುದಾಯವನ್ನೇ ಬಲಿಕೊಟ್ಟರೇ ಸಿದ್ದರಾಮಯ್ಯ

by Shwetha
April 17, 2026
0

ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳಿಂದ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಂತಿದ್ದ ಮುಸ್ಲಿಂ ಸಮುದಾಯ ಈಗ ಅದೇ ಪಕ್ಷದ ವಿರುದ್ಧ ಯುದ್ಧ ಸಾರಿದೆ. ದಾವಣಗೆರೆ ಉಪಚುನಾವಣೆ...

ಅಕ್ಷಯ ತೃತೀಯದಂದು ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿ ಈ ವರ್ಷದ ಅತ್ಯಂತ ಶುಭ ದಿನ ಯಾವುದು ಗೊತ್ತೇ.?

ಅಕ್ಷಯ ತೃತೀಯದಂದು ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿ ಈ ವರ್ಷದ ಅತ್ಯಂತ ಶುಭ ದಿನ ಯಾವುದು ಗೊತ್ತೇ.?

by Shwetha
April 17, 2026
0

ಸನಾತನ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಹಿಂದೂ ಸಂಪ್ರದಾಯದ ಪ್ರಕಾರ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಅಕ್ಷಯ ತೃತೀಯವೂ ಒಂದು. ಈ ದಿನವನ್ನು ಕೇವಲ ಹಬ್ಬವಾಗಿ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 17, 2026
0

ದಿನ ಭವಿಷ್ಯ: 17-04-2026 ಮೇಷ ರಾಶಿ ಇಂದು ನಿಮಗೆ ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮೇಲಧಿಕಾರಿಗಳೊಂದಿಗೆ ಸೌಮ್ಯವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram