ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಟೀಮ್ ಇಂಡಿಯಾದ ಪರಿಸ್ಥಿತಿ ತೀರಾ “ಗಂಭೀರ”..!

admin by admin
December 8, 2025
in Sports, Newsbeat, ಕ್ರಿಕೆಟ್
Share on FacebookShare on TwitterShare on WhatsappShare on Telegram

ಗೌತಮ್ ಗಂಭೀರ್.. ಬಹುಶಃ ಆತ ಬಿಜೆಪಿಯ ಮಾಜಿ ಸಂಸದನಾಗದೇ ಇರುತ್ತಿದ್ರೆ ಆತನ ವಿರುದ್ಧ ಟೀಕೆಗಳು ಬರುತ್ತಿರಲಿಲ್ಲವೇನೋ..!? ಹಾಗೇ ರೋಹಿತ್ – ವಿರಾಟ್ ಜೊತೆ ಉತ್ತಮ ಒಡನಾಡವಿರುತ್ತಿದ್ರೆ ಆತನನ್ನು ಯಾರು ಕೂಡ ಪ್ರಶ್ನೆ ಮಾಡುತ್ತಿರಲಿಲ್ಲ ಅನಿಸುತ್ತೆ..!
ಹಾಗೇ ನೋಡಿದ್ರೆ ಭಾರತ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ನೀಡಿದಾಗಲೆಲ್ಲಾ ಮೊದಲು ಬಲಿಯಾಗಿದ್ದು ಹೆಡ್ ಕೋಚ್‍ಗಳೇ.. ಯಾವಾಗ ಹೆಡ್‍ಕೋಚ್‍ಗಳು ಹೆಡ್ ಮಾಸ್ಟರ್ ರೀತಿಯಲ್ಲಿ ವರ್ತಿಸಿದಾಗ ಸೀನಿಯರ್ ಪ್ಲೇಯರ್ ಗಳು ಅಸಮಾಧಾನಗೊಳ್ಳುವುದು ಕೂಡ ಸಹಜ. ಸದ್ಯ ಟೀಮ್ ಇಂಡಿಯಾದಲ್ಲಿ ಆಗುತ್ತಿರುವುದು ಕೂಡ ಅದೇ. ಯಾಕಂದ್ರೆ ತಂಡದ ಸೀನಿಯರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೆಡ್ ಕೋಚ್ ಜೊತೆ ಆಡಿದ್ದಾರೆ. ಅಷ್ಟೇ ಅಲ್ಲ ಗೌತಮ್ ಗಂಭೀರ್ ಗಿಂತಲೂ ಉತ್ತಮ ಸಾಧನೆ, ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಗೌತಮ್ ಗಂಭೀರ್ ನಮಗೆ ಏನು ಸಲಹೆ, ಮಾರ್ಗದರ್ಶನ ನೀಡುವುದು ಎಂಬ ಭಾವನೆ ಮೂಡುವುದು ಸಹಜವೇ. ಗಂಭೀರ್ ಗೆ ತಾನು ಹೆಡ್‍ಕೋಚ್ ಎಂಬ ಅಹಂ ಇದ್ರೆ, ವಿರಾಟ್ ಮತ್ತು ರೋಹಿತ್‍ಗೆ ಸೀನಿಯರ್ ಪ್ಲೇಯರ್ಸ್ ಎಂಬ ಟ್ಯಾಗ್ ಲೈನ್ ಇದೆ. ಇದು ಇಡೀ ತಂಡದ ಅಧಃಪತನಕ್ಕೆ ಕಾರಣವಾಗುತ್ತಿದೆ.
ಹೌದು, 2000ದಲ್ಲಿ ಭಾರತೀಯ ಕ್ರಿಕೆಟ್‍ನಲ್ಲಿ ಮ್ಯಾಚ್ ಫಿಕ್ಸಿಂಗ್ ಭೂತದಿಂದ ಹೊರಬರಲು ವಿದೇಶಿ ಕೋಚ್‍ಗಳ ಮೊರೆ ಹೋಗಿದ್ದು ಈಗ ಇತಿಹಾಸ. ಆದ್ರೆ ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತವರ್ಯಾರಿಗೂ ಶಿಕ್ಷೆಯಾಗಿಲ್ಲ. ಶಿಕ್ಷೆಯಾದ್ರೂ ಕಳಂಕ ಹೊತ್ತವರು ಕಾನೂನು ಸಮರ ಮಾಡಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಕ್ಲೀನ್ ಆಗಿ ಹೊರಬಂದಿದ್ದಾರೆ. ಆದ್ರೆ ಇಂದಿಗೂ ತನಿಖೆ ಮಾಡಿದ ಸಂಸ್ಥೆಯ ಅಧಿಕಾರಿಗಳು ಕೆಲವು ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಮಾತಿಗೆ ಬದ್ಧವಾಗಿದ್ದಾರೆ. ಆದ್ರೆ ತಾಂತ್ರಿಕ ಕಾರಣಗಳಿಂದ ಮ್ಯಾಚ್ ಫಿಕ್ಸಿಂಗ್ ಮಾಡಿರೋದು ಪ್ರೂವ್ ಮಾಡೋಕೆ ಆಗಿಲ್ಲ ಎಂಬುದು ಮಾತ್ರ ದುರಂತ.
ಹಾಗೇ ನೋಡಿದ್ರೆ, ಟೀಮ್ ಇಂಡಿಯಾದ ಮೊದಲ ವಿದೇಶಿ ಕೋಚ್ ಜಾನ್ ರೈಟ್‍ ರಿಂದ ಹಿಡಿದು, ಗ್ರೇಗ್ ಚಾಪೆಲ್ , ಡಂಕನ್ ಫ್ಲೇಚರ್ ತನಕ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಅದರಲ್ಲೂ ಯಂಗ್ ಟೀಮ್ ಇಂಡಿಯಾ ಕಟ್ಟಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಿದ್ದ ಗ್ರೇಗ್ ಚಾಪೆಲ್‍ ಗೆ ರಿಂಗ್ ಮಾಸ್ಟರ್ ಎಂಬ ಕುಖ್ಯಾತಿ ಅಂಟಿಕೊಂಡಿತ್ತು. ಆದ್ರೆ ವಿದೇಶಿ ಕೋಚ್‍ ಗಳ ಪೈಕಿ ಜಾನ್ ರೈಟ್ ಮತ್ತು ಗ್ಯಾರಿ ಕಸ್ಟರ್ನ್ ಸೀನಿಯರ್ ಮತ್ತು ಜೂನಿಯರ್ ಆಟಗಾರರನ್ನು ಒಂದೇ ತಕ್ಕಡಿಯಲ್ಲಿಟ್ಟುಕೊಂಡು ಮುನ್ನಡೆಸಿರುವುದರಿಂದ ತಂಡಕ್ಕೆ ಹೆಚ್ಚು ಹಾನಿಯಾಗಿಲ್ಲ. ಜಾನ್ ರೈಟ್ ನ್ಯೂ ಟೀಮ್ ಇಂಡಿಯಾಗೆ ಬುನಾದಿ ಹಾಕಿಕೊಟ್ರೆ, ಗ್ಯಾರಿ ಕಸ್ಟರ್ನ್ ಎಚ್ಚರಿಕೆಯ ಹೆಜ್ಜೆಯನ್ನಿಟ್ಟುಕೊಂಡು ಮುನ್ನಡೆದ್ರು. ಬಳಿಕ ಡಂಕನ್ ಫ್ಲೆಚರ್ ಕೂಡ ಯಂಗ್ ಟೀಮ್ ಇಂಡಿಯಾವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಈ ನಡುವೆ, ರವಿಶಾಸ್ತ್ರಿ ಮತ್ತು ಲಾಲ್‍ಚಾಂದ್ ರಜಪೂತ್ ಅರೆಕಾಲಿಕ ಕೋಚ್ ಆಗಿ ಟೀಮ್ ಇಂಡಿಂಯಾಗೆ ಅಚ್ಚರಿಯ ಫಲಿತಾಂಶವನ್ನು ನೀಡಿದ್ದರು.
ಇನ್ನೊಂದೆಡೆ ಅನಿಲ್ ಕುಂಬ್ಳೆ ಹೆಡ್ ಕೋಚ್ ಆಗಿದ್ದಾಗ ಟೀಮ್ ಇಂಡಿಯಾ ಯಶ ಸಾಧಿಸಿದ್ರೂ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಹೀಗಾಗಿಯೇ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯನ್ನೇ ತ್ಯಾಗ ಮಾಡಬೇಕಾಯ್ತು.
ಆದ್ರೆ ಚತುರ ರವಿಶಾಸ್ತ್ರಿಗೆ ಮ್ಯಾನ್ ಮ್ಯಾನೇಜ್‍ಮೆಂಟ್ ಚೆನ್ನಾಗಿ ಗೊತ್ತಿತ್ತು. ಅಲ್ಲದೆ ವಿರಾಟ್ ಕೊಹ್ಲಿಯ ಫಾರ್ಮ್ ಕೂಡ ಪ್ಲಸ್ ಪಾಯಿಂಟ್ ಆಗಿತ್ತು. ಹಾಗೇ ನೀಲಿಗಣ್ಣಿನ ಹುಡುಗ ಕೊಹ್ಲಿ ಮತ್ತು ರೋಹಿತ್ ನಡುವಿನ ಮನಸ್ತಾಪಕ್ಕೆ ಬ್ರೇಕ್ ಹಾಕಿದ್ದ ರವಿಶಾಸ್ತ್ರಿ ತಂತ್ರಗಾರಿಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು.
ಆದ್ರೆ ರವಿಶಾಸ್ತ್ರಿ ಬಳಿಕ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾಗ ಸೌರವ್ ಗಂಗೂಲಿ ಮೊದಲು ಮಾಡಿದ್ದ ಕೆಲಸವೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು. ತಾಳ್ಮೆಯ ಪ್ರತೀಕ ದ್ರಾವಿಡ್ ಮತ್ತು ಆಕ್ರಮಣಕಾರಿ ಪ್ರವೃತ್ತಿಯ ಕೊಹ್ಲಿ ಜೊಡೆತ್ತಿನ ರೀತಿಯಲ್ಲಿ ಕೆಲಸ ಮಾಡ್ತಾರೆ ಅಂತ ನಂಬಿಕೆ ಇಲ್ಲ. ಹೀಗಾಗಿಯೇ ಸೌರವ್ ಗಂಗೂಲಿ ಆದೇಶದ ಮೇರೆಗೆ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ನಾಯಕನಾಗಿದ್ದರು. ಅಲ್ಲದೆ ರೋಹಿತ್‍ಗೂ ಒಂದು ರೀತಿಯ ಪ್ರೀತಿ ಇತ್ತು. ದ್ರಾವಿಡ್ ನಾಯಕತ್ವದಲ್ಲೇ ತಾನು ಟೀಮ್ ಇಂಡಿಯಾಗೆ ಎಂಟ್ರಿಯಾಗಿದ್ದು ಎಂಬ ಮಮತೆ ಇತ್ತು. ಹೀಗಾಗಿಯೇ ರೋಹಿತ್ ಮತ್ತು ದ್ರಾವಿಡ್ ಕಾಂಬಿನೇಷನ್ ಯಶಸ್ವಿಯಾಗಿ ವರ್ಕ್ ಔಟ್ ಆಯ್ತು.
ಆದ್ರೆ ಗಂಭೀರ್ ಗೆ ಹಾಗಿಲ್ಲ. ರೋಹಿತ್ ಮತ್ತು ಕೊಹ್ಲಿ ಜೊತೆಗೆ ಆಡಿದ್ರು. ಅಲ್ಲದೆ ಕೊಹ್ಲಿ ಜೊತೆ ಎರಡು ಮೂರು ಬಾರಿ ಜಟಾಪಟಿ ಕೂಡ ನಡೆದಿದೆ. ಹಾಗೇ ಗಂಭೀರ್ ಸಾಧನೆಯನ್ನು ನೋಡಿದ್ರೆ, ರೋಹಿತ್ ಮತ್ತು ಕೊಹ್ಲಿ ಹೆಚ್ಚು ಯಶ ಸಾಧಿಸಿದ್ರು. ಇದ್ರಿಂದ ಗಂಭೀರ್ ಮಾತು ಯಾಕೆ ಕೇಳಬೇಕು ಎಂಬುದು ರೋಕೋ ವಾದವಾದ್ರೆ, ತಾನು ಹೆಡ್ ಕೋಚ್ ತನ್ನ ಮಾತೇ ಅಂತಿಮ ಎಂಬುದು ಗಂಭೀರ್ ಪ್ರತಿವಾದವಾಗಿದೆ.
ಇನ್ನೊಂದೆಡೆ ಭವಿಷ್ಯದ ಟೀಮ್ ಇಂಡಿಯಾದ ದೃಷ್ಟಿಯಿಂದ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬುದು ಗಂಭೀರ್ ಯೋಚನೆ ಆಗಿರುತ್ತದೆ. ಭವಿಷ್ಯದ ತಂಡ ಕಟ್ಟಬೇಕಾಗಿರುವುದರಿಂದ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದೂ ಅಲ್ಲದೆ ಈ ಹಿಂದೆ ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಕಠಿಣ ನಿರ್ಧಾರವನ್ನೇ ತೆಗೆದುಕೊಂಡಿದೆ. ಸೆಹ್ವಾಗ್, ಗಂಭೀರ್, ಗಂಗೂಲಿ, ಕುಂಬ್ಳೆ, ಸಚಿನ್, ರಾಹುಲ್ ದ್ರಾವಿಡ್, ಜಹೀರ್ ಖಾನ್, ಇರ್ಫಾನ್ ಪಠಾನ್, ಲಕ್ಷಣ್ ಸೇರಿದಂತೆ ಅನೇಕ ಆಟಗಾರರಿಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಗೇಟ್ ಪಾಸ್ ನೀಡಿರುವುದನ್ನು ಯಾರೂ ಮರೆತಿಲ್ಲ.
ಆದ್ರೆ ಆಗ ಪರಿಸ್ಥಿತಿ ಬೇರೆನೇ ಇತ್ತು. ಹಿರಿಯ ಆಟಗಾರರು ತೆರೆಮರೆಗೆ ಸರಿದಾಗ ಯುವ ಆಟಗಾರರು ಆ ಜವಾಬ್ದಾರಿಯನ್ನು ನಿಭಾಯಿಸಲು ರೆಡಿಯಾಗಿದ್ದರು. ಗವಾಸ್ಕರ್ ನಂತರ ಸಚಿನ್, ಸಚಿನ್ ನಂತರ ಕೊಹ್ಲಿ ಹೀಗೆ ಅದ್ಭುತ ಆಟಗಾರರಿಗೆ ಇನ್ನೊಬ್ಬ ಬ್ಯಾಕ್ ಅಪ್ ಆಟಗಾರ ರೆಡಿಯಾಗಿದ್ದ. ಆಗ ಯಾವುದೇ ಸಮಸ್ಯೆ ಇರಲಿಲ್ಲ.
ಆದ್ರೆ ಈಗ ಸಮಸ್ಯೆ ಎದುರಾಗಿದ್ದು ಟೆಸ್ಟ್ ತಂಡಕ್ಕೆ ಮಾತ್ರ. ಏಕದಿನ ಮತ್ತು ಟಿ-20 ಕ್ರಿಕೆಟ್‍ನಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಆದ್ರೂ ಕೆಲವೊಂದು ಆಯ್ಕೆಗಳಲ್ಲಿ ಆಯ್ಕೆ ಸಮಿತಿ ಮತ್ತು ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಎಡವಿರುವುದು ಸ್ಪಷ್ಟವಾಗಿದೆ. ಕೇವಲ ಐಪಿಎಲ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಇಡೀ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.
ಹೌದು, ಸದ್ಯ ಭಾರತದಲ್ಲಿ ಟೆಸ್ಟ್ ತಂಡದ ಕ್ವಾಲಿಟಿ ಕಡಿಮೆಯಾಗುತ್ತಿದೆ. ಯುವ ಆಟಗಾರರಲ್ಲಿ ತಾಳ್ಮೆಯೇ ಇಲ್ಲ. ಹೊಡಿಬಡಿ ಆಟ. ಪಂದ್ಯ ಮೂರು ನಾಲ್ಕು ದಿನಗಳಲ್ಲಿ ಮುಗಿಯಬೇಕು ಎಂಬ ತುಡಿತ. ಈ ಕಾರಣದಿಂದಲೇ ಭಾರತದಲ್ಲಿ ಟೆಸ್ಟ್ ಪಂದ್ಯದ ಮೌಲ್ಯಗಳು ಕಡಿಮೆಯಾಗುತ್ತಿವೆ.
ಒಟ್ಟಿನಲ್ಲಿ ಇಲ್ಲಿ ಯಾರನ್ನೂ ದೂಷಣೆ ಮಾಡುವುದು ಸರಿಯಲ್ಲ. ಆದ್ರೂ ಗಂಭೀರ್, ಮಹಮ್ಮದ್ ಸಮಿ ಮತ್ತು ಮಹಮ್ಮದ್ ಸಿರಾಜ್ ಅವರನ್ನು ಕಡಗಣನೆ ಮಾಡುತ್ತಿರುವುದು ಟೀಕೆಗೆ ಪ್ರಮುಖ ಕಾರಣವಾಗಿದೆ.
ಏನೇ ಆದ್ರೂ ಯಾವ ಭಾರತೀಯ ಕೋಚ್ ಕೂಡ ಟೀಮ್ ಇಂಡಿಯಾವನ್ನು ಹಾಳು ಮಾಡಬೇಕು, ನಾಶ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿರುವುದಿಲ್ಲ. ಆದ್ರೆ ಸೀನಿಯರ್ ಆಟಗಾರರು ತಮ್ಮ ಮಾತಿಗೆ ಬೆಲೆ ಕೊಡದೆ ಇದ್ದಾಗ ಕೋಚ್ ಸಿಟ್ಟು ಆಗೋದು ಸಹಜ. ಅದೇ ಈಗ ಆಗುತ್ತಿರುವುದು. ಯಾಕಂದ್ರೆ, ನಾಯಕನಾಗಿ ಕೊಹ್ಲಿ, ರೋಹಿತ್ ತಮಗೆ ಬೇಕಾದ ತಂಡವನ್ನು ಆಯ್ಕೆ ಮಾಡಿಕೊಂಡಾಗ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಯಾಕಂದ್ರೆ ಆಗ ತಂಡದ ಅದೃಷ್ಟ, ಫಲಿತಾಂಶ ಬರುತ್ತಿತ್ತು. ಈಗ ಫಲಿತಾಂಶ, ಪ್ರದರ್ಶನ ಬರುತ್ತಿಲ್ಲ. ಸೀನಿಯರ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ರೂ ತಂಡದಲ್ಲಿ ಒಗ್ಗಟ್ಟಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಒಂದು ನೆನಪಿಟ್ಟುಕೊಳ್ಳಲೇಬೇಕು. ಟೀಮ್ ಇಂಡಿಯಾಗೆ ಯಾರೂ ಅನಿವಾರ್ಯ ಅಲ್ಲ. ಇಲ್ಲಿ ವ್ಯಕ್ತಿಗಿಂತ ತಂಡ ಮುಖ್ಯ. ಗಂಭೀರ್ ಹೆಡ್ ಕೋಚ್ ಆಗಿರಬಹುದು.. ವಿರಾಟ್ ಕೊಹ್ಲಿ ದಾಖಲೆ ವೀರನಾಗಿರಬಹುದು.. ರೋಹಿತ್ ಪಂಟರ್ ಆಗಿರಬಹುದು.. ಆದ್ರೆ ಭಾರತೀಯ ಅಭಿಮಾನಿಗಳಿಗೆ ಟೀಮ್ ಇಂಡಿಯಾವೇ ಮುಖ್ಯ ಹೊರತು, ವ್ಯಕ್ತಿಗತ ಆಟಗಾರರಲ್ಲ. ಇದನ್ನು ಈ ಮೂವರು ಅರ್ಥ ಮಾಡಿಕೊಂಡ್ರೆ ಟೀಮ್ ಇಂಡಿಯಾದ ಭವಿಷ್ಯ ಉಜ್ಜಲವಾಗಬಹುದು. ಇಲ್ಲಿ ಎಷ್ಟೇ ಮನಸ್ತಾಪಗಳಿದ್ರೂ ಅದು ಅವರ ವೈಯಕ್ತಿಕ ವಿಚಾರ. ಟೀಮ್ ಇಂಡಿಯಾದ ಮೇಲೆ ಪರಿಣಾಮ ಬೀರೋದು ಬೇಡ. ಹಲವು ಆಟಗಾರರ ಬೆವರಿನ ಹನಿ, ಹಲವು ನಾಯಕರ ದೂರದೃಷ್ಟಿ, ಹಲವು ಕೋಚ್‍ಗಳ ಪರಿಶ್ರಮವನ್ನು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಭಿಮಾನವನ್ನು ಯಾರದ್ದೋ ವೈಯಕ್ತಿಕ ಕಾರಣಕ್ಕೆ ಇಡೀ ತಂಡವನ್ನು ಮನೆಯೊಂದು ಮೂರು ಬಾಗಿಲು ಮಾಡೋದು ಬೇಡ ಅಷ್ಟೇ.

ಸನತ್ ರೈ

Related posts

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

December 15, 2025
ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

December 15, 2025
Source: Team India's situation is very "serious"..!
Via: Team India's situation is very "serious"..!
Tags: #gouthamgambhir#saakshatvrohithsharmateamindiaviratkohli
ShareTweetSendShare
Join us on:

Related Posts

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

by admin
December 15, 2025
0

ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್...

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

by admin
December 15, 2025
0

ಶಿವನ ದೇವಸ್ಥಾನ ಮಾತ್ರವಲ್ಲ, ಯಾವ ದೇವಸ್ಥಾನಕ್ಕೆ ಭೇಟಿ ನೀಡಿದರೂ ನಮ್ಮೊಳಗೆ ಒಂದು ಶಕ್ತಿ ಬರುತ್ತದೆ. ಆ ಧನಾತ್ಮಕ ಶಕ್ತಿಯು ನಮ್ಮ ಜೀವನದಲ್ಲಿ ಕೆಲವು ತಿರುವುಗಳನ್ನು ತರುತ್ತದೆ. ಆದರೆ, ಶಿವನ ದೇವಸ್ಥಾನಕ್ಕೆ...

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

by Shwetha
December 15, 2025
0

ಹಳಿಯಾಳ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಶಿಕ್ಷಕನೇ, ತನ್ನ ಮಗನ ವ್ಯಾಮೋಹದಲ್ಲಿ ಪರೀಕ್ಷಾ ಅಕ್ರಮಕ್ಕೆ ಇಳಿದು ಸಿಕ್ಕಿಬಿದ್ದಿರುವ ಲಜ್ಜೆಗೆಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ. ಕೇಂದ್ರ...

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

by Shwetha
December 15, 2025
0

ತಿರುವನಂತಪುರಂ: ಕೇರಳದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವೊಂದಕ್ಕೆ ಸಾಕ್ಷಿಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ರಾಜಧಾನಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಐತಿಹಾಸಿಕ...

ಹೊಂದಾಣಿಕೆ ಆರೋಪಕ್ಕೆ ಕೆಂಡಾಮಂಡಲ:1 ರೂಪಾಯಿಯೋ ಅಥವಾ 1 ಕೋಟಿಯೋ? ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಫಿಕ್ಸ್ ಎಂದ ವಿಜಯೇಂದ್ರ!

ಹೊಂದಾಣಿಕೆ ಆರೋಪಕ್ಕೆ ಕೆಂಡಾಮಂಡಲ:1 ರೂಪಾಯಿಯೋ ಅಥವಾ 1 ಕೋಟಿಯೋ? ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಫಿಕ್ಸ್ ಎಂದ ವಿಜಯೇಂದ್ರ!

by Shwetha
December 15, 2025
0

ಶಿವಮೊಗ್ಗ: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿರಂತರ ವಾಗ್ದಾಳಿ ಮತ್ತು ಹೊಂದಾಣಿಕೆ ರಾಜಕಾರಣದ ಆರೋಪಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಆಕ್ರೋಶ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram