ಬೆಂಗಳೂರು: ಇಲ್ಲಿಯ ಸೋಲದೇವನಹಳ್ಳಿ(Soladevanahalli) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಂದಿ (Pig) ಕಳ್ಳತನವಾಗುತ್ತಿರುವ ಘಟನೆ ಹೆಚ್ಚಾಗಿ ನಡೆಯುತ್ತಿವೆ.
ಸಾಕಾಣಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ರೈತರಿಗೆ ಖದೀಮರು ಭಯ ಹುಟ್ಟಿಸುತ್ತಿದ್ದಾರೆ. ಚಿಕ್ಕಬ್ಯಾಲಕೆರೆಯ ಮುನಿರಾಜು ಎಂಬುವವರ 130 ಸಾಕು ಹಂದಿ, ಹೆಸರಘಟ್ಟದ ನಿವಾಸಿ ಮಹೇಶ್ ಎಂಬುವವರ 40 ಹಂದಿಗಳು ಸೇರಿ ಕಳೆದೆರಡು ತಿಂಗಳಲ್ಲಿ ಬರೋಬ್ಬರಿ 300ಕ್ಕೂ ಅಧಿಕ ಹಂದಿಗಳನ್ನು ಕಳ್ಳತನ ಮಾಡಿದ್ದಾರೆ.
ಈ ಕುರಿತು ದೂರು ನೀಡಿದರೂ ಸೋಲದೇವನಹಳ್ಳಿ ಪೊಲೀಸರು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಖದೀಮರು ಹಂದಿಗಳನ್ನು ಕಳ್ಳತನ ಮಾಡುತ್ತಿರುವ ಗೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೂ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿಲ್ಲ. ನಿರಂತರವಾಗಿ ಹಂದಿ ಕಳ್ಳತನದಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದು, ಕ್ರಮ ಕೈಗೊಳ್ಳದ ಸೋಲದೇವನಹಳ್ಳಿ ಠಾಣೆಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.