ಶಿವಮೊಗ್ಗ: ಮೂಢ ನಂಬಿಕೆ ನಂಬಿದ್ದ ಪೋಷಕರು ಮಗುವಿನ ಜೀವಕ್ಕೆ ಸಂಚಕಾರ ತಂದ ಘಟನೆಯೊಂದು ನಡೆದಿದೆ.
ದಾವಣಗೆರೆ(Davanagere) ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್ ಅವರ 11 ತಿಂಗಳ ಮಗು ಪ್ರತೀಕ್ ಗೆ ಜೊಲ್ಲು ಹೆಚ್ಚು ಬರುತ್ತದೆ ಎಂಬ ಕಾರಣಕ್ಕೆ ಮೂಢನಂಬಿಕೆ(Superstition)ಯಿಂದ ಬಾಯಿಗೆ ಜೀವಂತ ಮೀನು ಇಟ್ಟಿದ್ದಾರೆ.
ಆಗ ಮಗು ಮೀನು ನುಂಗಿದ್ದು, ಗಂಟಲಿನಲ್ಲಿ ಸಿಲುಕಿಕೊಂಡಿದೆ. ಕೂಡಲೇ ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು, ತೀವ್ರ ನಿಗಾ ಘಟಕದಲ್ಲಿರಿಸಿ, ಗಂಟಲಲ್ಲಿ ಸಿಕ್ಕಿಕೊಂಡಿದ್ದ ಮೀನನ್ನು ಹೊರ ತೆಗೆದಿದ್ದಾರೆ.