ನಿಧಿ ಆಸೆಗೆ ಶ್ರೀ ಕೃಷ್ಣನ ವಿಗ್ರಹ ಕಿತ್ತೆಸೆದ ದುಷ್ಕರ್ಮಿಗಳು Sri Krishna saaksha tv
ರಾಯಚೂರು : ನಿಧಿ ಆಸೆಗಾಗಿ ದುಷ್ಕರ್ಮಿಗಳು ಶ್ರೀ ಕೃಷ್ಣನ ವಿಗ್ರಹವನ್ನು ಕಿತ್ತು ಎಸೆದಿರುವ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದಲ್ಲಿ ನಡೆದಿದೆ.
ಯಾಟಗಲ್ ಗ್ರಾಮದಲ್ಲಿ ಶ್ರೀ ಕೃಷ್ಣನ ದೇಗುಲ ಇದ್ದು, ನಿಧಿಯ ಆಸೆಗೆ ದುಷ್ಕರ್ಮಿಗಳು ದೇವರ ವಿಗ್ರಹವನ್ನು ಕಿತ್ತು ಎಸೆದಿದ್ದಾರೆ. ಅಲ್ಲದೇ ವಿಗ್ರಹ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿ ಸುಮಾರು ಐದು ಅಡಿ ಗುಂಡಿ ತೋಡಿ ದೇಗುಲವನ್ನು ಹಾಳು ಮಾಡಿದ್ದಾರೆ.
ಈ ದೇಗುಲದಲ್ಲಿ ನಿಧಿ ಎಂದು ಗ್ರಾಮದಲ್ಲಿ ಸಾಕಷ್ಟು ವರ್ಷಗಳಿಂದ ಸುದ್ದಿ ಹರಿದಾಡುತ್ತಿತ್ತು. ಇದನ್ನ ನಂಬಿ ಕೆಲ ದುಷ್ಕರ್ಮಿಗಳು ನಿನ್ನೆ ರಾತ್ರಿ ದೇಗುಲದಲ್ಲಿದ್ದ ವಿಗ್ರಹವನ್ನು ಕೆಡವಿದ್ದಾರೆ. ಇನ್ನು ಈ ಕೃತ್ಯವೆಸಗಿದವರ ವಿರುದ್ಧ ಸ್ಥಳೀಯ ಆಕ್ರೋಶ ಹೊರಹಾಕಿದ್ಧಾರೆ. ಅಲ್ಲದೇ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.