ರಾಜ್ಯದ ಟಾಪ್ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!
ತೈಲ ದರ ಏರಿಕೆ ಎಫೆಕ್ಟ್ : ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಚಿಂತನೆ..!
ತೈಲ ದರ ಏರಿಕೆ ಎಫೆಕ್ಟ್ : ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಚಿಂತನೆ..!
ಬೆಂಗಳೂರು : ಕೊರೊನಾ ಸಂಕಷ್ಟದಿಂದ ಜನರು ಈಗಾಗಲೇ ಕಂಗಾಲಾಗಿ ಹೋಗಿದ್ದಾರೆ. ಈ ಮಧ್ಯೆ ದಿನ ಬಳಕೆ ವಸ್ತುಗಳು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ಸರ್ಕಾರ ಆ ಬರೆಗೆ ಖಾರದ ಪುಡಿ ಹಾಕಲು ಹೊರಟಂತಿದೆ.
ಹೌದು..! ಕೊರೊನಾ ಹೊಡೆತಕ್ಕೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬಿಎಂಟಿಸಿ ನಿಗಮ ಪ್ರಯಾಣಿಕರಿಗೆ ಶಾಕ್ ನೀಡಲು ಮುಂದಾಗುತ್ತಿದೆ. ಒಂದು ಕಡೆ ಪ್ರಯಾಣಿಕರ ಸಂಖ್ಯೆ ಇಳಿಕೆ, ಇನ್ನೊಂದು ಕಡೆ ತೈಲ ದರ ಏರಿಕೆಯಿಂದ ಇಕ್ಕಟ್ಟಿಗೆ ಸಿಲುಕಿರುವ ನಿಗಮ ಇದೀಗ ಮತ್ತೊಮ್ಮೆ ಟಿಕೆಟ್ ದರ ಏರಿಕೆಗೆ ಚಿಂತನೆ ನಡೆಸಿದೆ.
ಬೆಂಗಳೂರು | ವರನಟನಿಗೆ ಅವಮಾನ, ಸ್ಥಳೀಯರಿಂದ ಆಕ್ರೋಶ
ಬೆಂಗಳೂರು | ವರನಟನಿಗೆ ಅವಮಾನ, ಸ್ಥಳೀಯರಿಂದ ಆಕ್ರೋಶ
ಬೆಂಗಳೂರು : ವರನಟ ಡಾ.ರಾಜ್ ಕುಮಾರ್ ಕನ್ನಡದ ಹೆಮ್ಮೆ. ತಲೆ ತಲೆಮಾರುಗಳು ಉರುಳಿದರೂ ನಮ್ಮ `ಮುತ್ತು’ ಎಂದೆಂದಿಗೂ ಕೊಟ್ಯಾಂತರ ಅಭಿಮಾನಿಗಳ ಮನೆಮನಗಳಲ್ಲಿ ವಿರಾಜಮಾನವಾಗಿ ಇರ್ತಾರೆ.
ಆದ್ರೆ ಇದೀಗ ಬೆಂಗಳೂರಿನಲ್ಲಿ ಡಾ ರಾಜ್ ಗೆ ಅವಮಾನ ಮಾಡಲಾಗಿದೆ.
ಹೌದು..! ಬೆಂಗಳೂರಿನಲ್ಲಿ ರಾಜ್ ಪ್ರತಿಮೆ ಉದ್ಘಾಟನೆಗೆ ಅಡ್ಡಿ ಮಾಡಲಾಗಿದೆ. ರಾಜ್ ಪ್ರತಿಮೆ ಇಡಲು ಸಿದ್ಧವಾಗಿದ್ದ ಮಂಟಪವನ್ನ ಕೆಲ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಮೈಸೂರು | 50 ಅಂಗಡಿಗಳ ತೆರವು ಕಾರ್ಯಾಚರಣೆ
ಮೈಸೂರು : ನಂಜನಗೂಡು ಪಟ್ಟಣದಲ್ಲಿ ರಸ್ತೆ ಅತಿಕ್ರಮ ಮಾಡಿಕೊಂಡಿದ್ದ 50 ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಬ್ರಾಡ್ ವೇ ರಸ್ತೆ ಅಗಲೀಕರಣಕ್ಕಾಗಿ ಅಂಗಡಿಗಳನ್ನು ತೆರವು ಮಾಡಲಾಗಿದೆ.
ತೆರವುಗೂ ಮುನ್ನ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದರು.ಇದಕ್ಕೆ ಅಂಗಡಿ ಮಾಲೀಕರು ಸ್ಪಂದಿಸದ ಹಿನ್ನೆಲೆಯಲ್ಲಿ, ನಗರಸಭೆ ಅಧಿಕಾರಿಗಳ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಂಗಡಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ರದ್ದು : ಗಡ್ಕರಿ ಜೊತೆ ಕಟೀಲ್ ಚರ್ಚೆ
ಸುರತ್ಕಲ್ ಟೋಲ್ ಗೇಟ್ ರದ್ದು : ಗಡ್ಕರಿ ಜೊತೆ ಕಟೀಲ್ ಚರ್ಚೆ
ಮಂಗಳೂರು : ಹೆಜಮಾಡಿ ಟೋಲ್ ಗೇಟ್ ನ ಕೆಲವೆ ಕಿಲೋ ಮೀಟರ್ ದೂರದಲ್ಲಿರುವ ಸುರತ್ಕಲ್ ಬಳಿ ಟೋಲ್ ಗೇಟ್ ನಿರ್ಮಾಣವಾಗುತ್ತಿದ್ದು, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಈಗಾಗಲೇ ಹೆಜಮಾಡಿ ಟೋಲ್ ಗೇಟ್ ಇದೆ, ಇದಕ್ಕೆ ಕೆಲವೇ ದೂರದಲ್ಲಿ ಮತ್ತೊಂದು ಟೋಲ್ ಗೇಟ್ ನಿರ್ಮಾಣ ಸರಿಯಲ್ಲ.
ಇದನ್ನ ರದ್ದು ಪಡಿಸಬೇಕೆಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರು ಹಲವು ಭಾರಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಕೂಡ ಮನವಿ ಮಾಡಿದ್ದರು.
ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯ ಪೂರ್ಣಗೊಳ್ಳಲು ಮಾರ್ಚ್ 2021 ರ ವರೆಗೆ ಗಡುವು
ಮಂಗಳೂರು, ಫೆಬ್ರವರಿ13: ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯಗಳನ್ನು ಪೂರ್ಣಗೊಳಿಸಲು ಮಾರ್ಚ್ 2021 ರ ವರೆಗೆ ಗಡುವು ಇದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಕೆ.ಸಿ.ರಾಮಮೂರ್ತಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಂದಾಜು 98 ಕೋಟಿ ರೂ. ಕೋಟಿ ರೂ. ವೆಚ್ಚದ ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ – II ಮತ್ತು ಏರೋಬ್ರಿಡ್ಜ್ಗಳ ವಿಸ್ತರಣೆಯನ್ನು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು.
ಕೊಪ್ಪಳ | ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಓರ್ವ ಸಾವು
ಕೊಪ್ಪಳ | ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಓರ್ವ ಸಾವು
ಕೊಪ್ಪಳ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮೂರು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಘಟನೆಯಲ್ಲಿ ಅಂಗಡಿಯಲ್ಲಿ ಮಲಗಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 18 ವರ್ಷದ ವೀರೇಶ ಮುಂಡರಗಿ ಮೃತ ಯುವಕನಾಗಿದ್ದಾನೆ.
ಕೊಪ್ಪಳ ನಗರದ ನಗರಸಭೆ ಎದುರಿನ ಶಾಸಕರ ಮಾದರಿಯ ಶಾಲೆಯ ಕಂಪೌಂಡಿನ ಅಂಗಡಿಗಳಲ್ಲಿ ಶಾಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.
ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದು ಕಾರ್ಯಪ್ರೌರುತ್ತರಾಗಿದ್ದಾರೆ.
ಪ್ರೇಮಿಗಳ ದಿನ ಆಚರಿಸಿದ್ರೆ ಸ್ಥಳದಲ್ಲೇ ಮದುವೆ : ಹಿಂದೂ ಜಾಗೃತಿ ಸೇನೆ ವಾರ್ನಿಂಗ್
ಕಲಬುರಗಿ : ವ್ಯಾಲೆಂಟೈನ್ಸ್ ಡೇ ಭಾರತದ ಸಂಸ್ಕøತಿ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ದಿನಾಚರಣೆ ಮಾಡುವ ಯುವಕ ಯುವತಿಯರನ್ನು ಹಿಡಿದು ಸ್ಥಳದಲ್ಲಿಯೇ ಮಾಂಗಲ್ಯ ಕಟ್ಟಿಸಿ ಮದುವೆ ಮಾಡುವದಾಗಿ ಹಿಂದೂ ಜಾಗೃತಿ ಸೇನೆ ಎಚ್ಚರಿಕೆ ನೀಡಿದೆ.
ನಾಳೆ ಪ್ರೇಮಿಗಳ ದಿನ. ಪ್ರೇಮಿಗಳಿಗಾಗಿಯೇ ಮೀಸಲಿರುವ ದಿನ. ಈಗಾಗಲೇ ಸೋಶಿಯಲ್ ಮೀಡಯಾದಲ್ಲಿ ಪ್ರೇಮಿಗಳು ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿದ್ದಾರೆ. ಈ ಮಧ್ಯೆ ಕಲಬುರಗಿ ಹಿಂದೂ ಜಾಗೃತಿ ಸೇನೆ ಪ್ರೇಮಿಗಳಿಗೆ ಖಡತ್ ಎಚ್ಚರಿಕೆ ನೀಡಿದೆ. ಅದೇನಂದರೇ.. ವ್ಯಾಲೆಂಟೈನ್ ಡೇ ಆಚರಣೆ ಭಾರತದ ಸಂಸ್ಕøತಿ ಅಲ್ಲ, ಇದೊಂದು ಪಾಶ್ಯಾತ್ಯ ಸಂಸ್ಕೃತಿಯಾಗಿದೆ. ವಿದ್ಯಾರ್ಥಿಗಳು, ಯುವಕರು ಇಂತಹ ಅನಿಷ್ಟ ಪದ್ದತಿಗೆ ಮಾರು ಹೋಗದೇ ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕೃತಿ ನೆಲೆಗಟ್ಟಿನ ಮೇಲೆ ನಡೆಯಬೇಕು. ಇದಕ್ಕೂ ಮೀರಿ ಸಾರ್ವಜನಿಕರ ಪ್ರದೇಶಗಳಲ್ಲಿ ಪ್ರೇಮಿಗಳ ದಿನ ಆಚರಣೆ ಮಾಡುವುದು ಕಂಡುಬಂದರೆ ಅಂತಹ ಹುಡುಗ ಹುಡುಗಿಯರನ್ನು ಸ್ಥಳದಲ್ಲಿಯೇ ಮಾಂಗಲ್ಯ ಕಟ್ಟಿಸಿ ಮದುವೆ ಮಾಡಿಸುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ.
ಬೆಳಗಾವಿ | ಯಡೂರ ವೀರಭದ್ರೇಶ್ವರನ ಅದ್ಧೂರಿ ರಥೋತ್ಸವ
ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಪ್ರಖ್ಯಾತ ದೇವರಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಈ ರಥೋತ್ಸದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ರಥೋತ್ಸವವು ಯಡೂರು ದೇವಸ್ಥಾನದಿಂದ ಪ್ರಾರಂಭವಾಗಿ ಚೆನ್ನಮ್ಮ ವೃತ್ತದ ಮೂಲಕ ಹಳೆಯಡೂರಿನ ರುದ್ರಪಾದ ಬಸವೇಶ್ವರ ದೇವಸ್ಥಾನದ ಮೂಲಕ ಮತ್ತೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ಈ ವೇಳೆ ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel