ಹಿಜಬ್ – ಕೇಸರಿ ಸಂಘರ್ಷ , ಹೈಕೋರ್ಟ್ ವಿಚಾರಣೆ ಮುಂದೂಡಿದೆ..
ಹಿಜಬ್ – ಕೇಸರಿ ಶಾಲು ವಿವಾದದ ಸಂಬಂಧ ಹೈಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.. ಆದ್ರೆ ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ಗುರುತುಗಳನ್ನೂ ಯಾವ ವಿದ್ಯಾರ್ಥಿಗಳು ಧರಿಸುವಂತಿಲ್ಲ ಎಂದು ಸೂಚಿಸಿದೆ..
ಹಿಜಾಬ್ – ಕೇಸರಿ ಸಂಘರ್ಷದ ಬಗ್ಗೆ ಮೋದಿ ಪ್ರತಿಕ್ರಿಯೆ
ಬಿಜೆಪಿ ಅವರಿಗೆ ಮುಸ್ಲಿಂ ಮಹಿಳೆಯರ ಮೇಲೆ ಗೌರವವಿದೆ. ನಾವು ಮುಸ್ಲಿಂ ಹೆಣ್ಣು ಮಕ್ಕಳ ಪರವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯಕ್ಕೆ ಕಿಚ್ಚು ಹೊತ್ತಿಸಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ದೇಶದಾದ್ಯಂತ ಹಬ್ಬಿದೆ. ಇದೀಗ ಈ ಕುರಿತು ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
2020 ರಲ್ಲಿ 106 ಹುಲಿಗಳ ಸಾವು, 2021 ರಲ್ಲಿ 127 ಕ್ಕೆ ಏರಿಕೆ
ವೃದ್ಧಾಪ್ಯ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹುಲಿಗಳ ಸಾವು ಕಳೆದ ವರ್ಷಕ್ಕಿಂತ ಏರಿಕೆಯಾಗಿದೆ. ಕಳೆದ ವರ್ಷ ಸಂಖ್ಯೆ 106 ರಿಂದ 127 ಕ್ಕೆ ಏರಿಕೆಯಾಗಿದೆ ಎಂದು ಕೆಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ. 2019 ರಲ್ಲಿ ಹುಲಿಗಳ ಸಾವಿನ ಸಂಖ್ಯೆ 96 ರಷ್ಟಿತ್ತು ಎಂದು ಸರ್ಕಾರ ಹೇಳಿದೆ.
ದಲಿಪ್ ಸಿಂಗ್ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ…
ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ (wwe ) ನ ಸ್ಟಾರ್ ಆಟಗಾರ ಎಂದೆ ಗುರುತಿಸಿಕೊಂಡಿರುವ ದಲಿಪ್ ಸಿಂಗ್ ರಾಣಾ ಆಲಿಯಾಸ್ ದಿ ಗ್ರೇಟ್ ಖಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ..
ಲಖೀಂಪುರ ಖೇರಿ ಹಿಂಸಾಚಾರ : ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ‘ತೇನಿ’ ಅವರ ಪುತ್ರ ಆಶಿಶ್ ಮಿಶ್ರಾ ಗೆ ಅಲಹಾಬಾದ್ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಕೋವಿಡ್ ಅಪ್ ಡೇಟ್
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 67,084 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇನ್ನೂ ಸಕ್ರಿಯ ಪ್ರಕರಣಗಳು 7,90,789 ಇದೆ. 1,67,882 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 1,241 ಜನರು ಸಾವನ್ನಪ್ಪಿದ್ದಾರೆ.
‘ಮೋದಿ ಅವರ ಮಾತುಗಳನ್ನ ಕೇಳಿ ಭಯವಾಗ್ತಿಲ್ಲ ‘
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ಮಾಡಿದ ಭಾಷಣಗಳು ಮತ್ತು ನಂತರ ರಾಷ್ಟ್ರೀಯ ಮಾಧ್ಯಮಕ್ಕೆ ಅವರು ನೀಡಿದ ವಿಶೇಷ ಸಂದರ್ಶನದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದಾರೆ… ಈ ವೇಳೆ ಮೋದಿ ಅವರು ಕೇವಲ ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕಾಗಿಯೇ ತಮ್ಮ ಸಮಯ ವ್ಯರ್ಥ ಮಾಡಿದರು ಮೋದಿ ಅವರ ಮಾತುಗಳನ್ನ ಕೇಳಿ ನನಗೆ ಭಯವಾಗ್ತಿಲ್ಲ , ನಗು ಬರುತ್ತಿದೆ ಎಂದಿದ್ದಾರೆ..
ನಾಳೆ ಜೇಮ್ಸ್ ಟೀಸರ್…
ನಾಳೆ ಅಂದ್ರೆ ಫೆಬ್ರವರಿ 11 ಗಂಟೆ 11 ನಿಮಿಷಕ್ಕೆ ಸರಿಯಾಗಿ ಅಪ್ಪು ಅಭಿನಯದ ಜೇಮ್ಸ್ ಸಿನಿಮಾದ ಫಸ್ಟ್ ಟೀಸರ್ ರಿಲೀಸ್ ಆಗ್ತಿದೆ… ಈಗಿನಿಂದಲೇ ಅಪ್ಪು ಅಭಿಮಾನಿಗಳು ಕಾತರರಾಗಿದ್ದು , ಟೀಸರ್ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿಬಿಟ್ಟಿದೆ…
ಮುಂದಿನ ಪಂದ್ಯಕ್ಕೆ ಶಿಖರ್ ಧವನ್
‘‘ಮುಂದಿನ ಪಂದ್ಯಕ್ಕೆ ಶಿಖರ್ ಧವನ್ ಅಂತಿಮ ತಂಡದಲ್ಲಿರುತ್ತಾರೆ. ಕೆಲವು ಪಂದ್ಯಗಳಲ್ಲಿ ಸೋತರೂ ಪರವಾಗಿಲ್ಲ ಆದರೆ… ಕೆಲವು ಪ್ರಯೋಗಗಳನ್ನು ಮಾಡಬೇಕು ಎಂದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಕೆ.ಎಲ್ ರಾಹುಲ್ ವಾಪಸ್ ಆದ್ರೂ. ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಂತ್ ಗೆ ಓಪನರ್ ಆಗಿ ಬಡ್ತಿ ನೀಡಲಾಗಿತ್ತು.
‘ರಿಷಬ್ ಪಂತ್ ಆರಂಭಿಕರಾಗಿದ್ದು ನನಗೆ ಇಷ್ಟು ಆಗಲಿಲ್ಲ’
ವೆಸ್ಟ್ ಇಂಡಿಸ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ರಿಷಬ್ ಪಂತ್ ಭಾರತದ ಪರ ಇನ್ನಿಂಗ್ಸ್ ಓಪನ್ ಮಾಡಿದ್ದರು. ಇದಕ್ಕೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು, ವಿಕೆಟ್ ಕೀಪರ್ ರಿಷಬ್ ಪಂತ್ ಆರಂಭಿಕರಾಗಿದ್ದು ನನಗೆ ಇಷ್ಟು ಆಗಲಿಲ್ಲ. ಅವರು ಆರು ಅಥವಾ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.










