ಧಾರವಾಡ : ಬೆಚ್ಚಿ ಬೀಳಿಸುವಂತಿದೆ P-589 ದೈನಂದಿನ ಚಟುವಟಿಕೆ. ಬೆಳಗ್ಗೆ ವಾಯು ವಿಹಾರಕ್ಕೆ ಹೋಗುತ್ತಿದ್ದ. ಗಣ್ಯರ ಸಂಪರ್ಕ, ಧಾನ್ಯ ವಿತರಣೆಯಲ್ಲಿ ಭಾಗಿ? ಕೇಶ್ವಾಪುರ ಶಾಂತಿ ನಗರ ನಿವಾಸಿಯೊಬ್ಬನಲ್ಲಿ ನಿನ್ನೆ ಕರೊನಾ ವೈರಾಣು ಪತ್ತೆ. 57 ವರ್ಷದ ವ್ಯಕ್ತಿ ಆರ್ಥಿಕವಾಗಿ ಸ್ಥಿತಿವಂತ, ತನ್ನ ಸಮಾಜದ ಗಣ್ಯರ ಸಾಲಿನಲ್ಲಿ ಗುರುತಿಸಿಕೊಂಡಿರುವ. ಮೂಲತಃ ಅರವಿಂದ ನಗರ ಕಡೆಯನು. 20-25 ವರ್ಷದಿಂದ ಶಾಂತಿ ನಗರದ ಸ್ವಂತ ಮನೆಯಲ್ಲಿ ಪರಿವಾರದೊಂದಿಗೆ ನೆಲೆಸಿದ್ದ. ಸ್ಥಳೀಯ ಮೂಲಗಳ ಪ್ರಕಾರ ಲಾಕ್ಡೌನ್ ಘೋಷಣೆಯಾದ ಮೇಲೆ ಆತ ಹೊರ ಊರಿಗೆ ಹೋಗಿ ಬಂದಿರುವ ಸಾಧ್ಯತೆ ಕಡಿಮೆ. ಲಾಕ್ಡೌನ್ ಆದೇಶವನ್ನು ಗೌರವಿಸಿ ವ್ಯಕ್ತಿಯು ಸಾಕಷ್ಟು ಕಾಲ ಮನೆಯಲ್ಲೇ ಇದ್ದನಾದರೂ, ಆಗಾಗ ಕೆಲಸದ ಮೇಲೆ ಮಾರುಕಟ್ಟೆ ಕಡೆ ಹೋಗುತ್ತಿದ್ದ. ಶಾಂತಿನಗರ ಪ್ರದೇಶದ ಸೋಂಕಿತ ಆರ್ಥಿಕವಾಗಿ ಸ್ಥಿತಿವಂತ. ಸಂಕಷ್ಟದಲ್ಲಿ ಸಿಲುಕಿರುವ ತಮ್ಮ ಸಮಾಜದ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದ್ದ. ಆತ ಎಲ್ಲೆಲ್ಲಿ ಯಾರ್ಯಾರಿಗೆ ನೆರವು ನೀಡಿದ್ದಾನೆ, ಯಾವಾಗ ಜನರನ್ನು ಭೇಟಿಯಾಗಿದ್ದಾನೆ, ಆಗೆಲ್ಲ ಮಾಸ್ಕ್ ಧರಿಸಿದ್ದನೆ ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿರುವ ಆರೋಗ್ಯ ಇಲಾಖೆ. ಸೋಂಕಿತನು ತಮ್ಮ ಸಮಾಜದ ವಿವಿಧ ರಾಜಕೀಯ ವ್ಯಕ್ತಿಗಳು ಹಾಗೂ ಗಣ್ಯರನ್ನೂ ಸಾಂದರ್ಭಿಕವಾಗಿ ಭೇಟಿಯಾಗಿರುವ ಸಾಧ್ಯತೆ. ದೊಡ್ಡ ತಲೆನೋವಿನಲ್ಲಿ ಸೊಂಕಿತನೊಂದಿಗೆ ಭೇಟಿಯಾದವರು ಸಚಿವ ಜಗದೀಶ ಶೆಟ್ಟರ್ ಮನೆ ತೀರ ಹತ್ತಿರವೇ ಈ ವ್ಯಕ್ತಿಯ ಮನೆ.
ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ
ಜಾಮ್ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...








