ಉಡುಪಿ – ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದ ಡಿಸಿ ಜಗದೀಶ್ ವಿರುದ್ಧ ಸಾರ್ವಜನಿಕರು ಗರಂ
ಏಪ್ರಿಲ್ 23 ರ ಶುಕ್ರವಾರ ಸಂಜೆ ಎಎಸ್ಪಿ ಮಗಳ ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಜಿಲ್ಲಾಧಿಕಾರಿ (ಡಿಸಿ) ಜಿ ಜಗದೀಶ್ ಮಾಸ್ಕ್ ಧರಿಸಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆದೇಶಿಸಿರುವ ಡಿಸಿ ಯವರ ಈ ನಡೆ ಸರಿಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಡಿಸಿ ಜಗದೀಶ ಅವರು ಇತ್ತೀಚೆಗೆ ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ಬಸ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಬಸ್ ನಿಂದ ನಡು ದಾರಿಯಲ್ಲಿ ಕೆಳಗಿಳಿಸಿದ್ದರು ಮತ್ತು ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಒದಗಿಸದಿರುವುದಕ್ಕೆ ಜಿಲ್ಲೆಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯ ಕಷ್ಟದ ಸಮಯದಲ್ಲಿ ಡಿಸಿ ಜಗದೀಶ್ ಸರ್ಕಾರಿ ಪ್ರಮುಖ ಪ್ರಾಧಿಕಾರವಾಗಿ ವರ್ತಿಸಿದ್ದಕ್ಕಾಗಿ ಸಾರ್ವಜನಿಕರಿಂದ ಪ್ರಶ್ನಿಸಲಾಗುತ್ತಿರುವ ಎರಡನೇ ನಿದರ್ಶನ ಇದು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್, “ಇಂದು ಎಎಸ್ಪಿ ಅವರ ಮನೆಯಲ್ಲಿ ಮೆಹಂದಿ. ನೂರಾರು ಜನರು ಭಾಗವಹಿಸಿದ್ದಾರೆ. ಡಿಸಿ ಮಾಸ್ಕ್ ಧರಿಸಿಲ್ಲ. ಭಾನುವಾರ ಮದುವೆಯಲ್ಲಿ ಸುಮಾರು 600 ಜನರು ಭಾಗವಹಿಸಬಹುದು ಎಂದು ತೋರುತ್ತದೆ. ಅನೇಕ ಬಡ ಜನರು ಕಾನೂನಿನ ಭಯದಿಂದಾಗಿ ತಮ್ಮ ವಿವಾಹ ಕಾರ್ಯಗಳನ್ನು ಮುಂದೂಡಿದ್ದಾರೆ. ಅನೇಕರು ಪಾಸ್ಗಳನ್ನು ಪಡೆಯಲು ತಹಶೀಲ್ದಾರ್ ಕಚೇರಿಯಲ್ಲಿ ಗಂಟೆಗಳ ಕಾಲ ಕಳೆದಿದ್ದಾರೆ. ಈ ಜಿಲ್ಲೆಯ ಸಾಮಾನ್ಯರಿಗೆ ಯಾವುದೇ ಮೌಲ್ಯವಿಲ್ಲವೇ? ಎಂದು ಪ್ರಶ್ನಿಸಿದೆ.
ಮಾಸ್ಕ್ ಇಲ್ಲದೆ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಮಾಧ್ಯಮಗಳು ಡಿಸಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.
ಆರೋಗ್ಯಕರ ಶಕ್ತಿಯುತ ಲಿವರ್/ಶ್ವಾಸಕೋಶಕ್ಕಾಗಿ ಮನೆಮದ್ದುಗಳು#Saakshatv #healthtips #Homeremedies https://t.co/N9Q4oC4hwR
— Saaksha TV (@SaakshaTv) April 20, 2021
ದರ್ಶನ್ ಮೇಲೆ ನಾನು ಬಹಳ ಕ್ರಶ್ ಹೊಂದಿದ್ದೇನೆ – ನಟಿ ಗಾಯತ್ರಿ ಐಯ್ಯರ್#Darshan #VinodhPrabhakar #gayathri #sandalwood https://t.co/ovvgICjjcW
— Saaksha TV (@SaakshaTv) April 20, 2021
ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್#Saakshatv #cookingrecipe #chocolate #milkshake https://t.co/JCAQoyp8GI
— Saaksha TV (@SaakshaTv) April 20, 2021
ಕೋವಿಡ್ -19 ಎರಡನೇ ಅಲೆ ಪ್ರಕರಣಗಳು ಭಾರತದಲ್ಲಿ ಎಷ್ಟು ಸಮಯದ ಬಳಿಕ ಇಳಿಮುಖ ಕಾಣಲಿದೆ ?#covid19 #secondwave https://t.co/ViqnbxhzTN
— Saaksha TV (@SaakshaTv) April 20, 2021
#UdupiDC #mehandievent #withoutmask