ಉಕ್ರೇನ್ – ರಷ್ಯಾ ಬಿಕ್ಕಟ್ಟು: ಯುಕೆಯಲ್ಲಿ ನಡೆಯಲಿರುವ ವಾಯು ತಾಲೀಮಿನಿಂದ ಹೊರಬಂದ ಭಾರತ…
ಉಕ್ರೇನ್-ರಷ್ಯಾ ಬಿಕ್ಕಟ್ಟಿನಿಂದಾಗಿ ಮುಂದಿನ ತಿಂಗಳು ಯುಕೆಯಲ್ಲಿ ನಡೆಯಲಿರುವ ಬಹು-ರಾಷ್ಟ್ರಗಳ ವಾಯು ತಾಲೀಮಿನಲ್ಲಿ ಜೆಟ್ ಪೈಟರ್ ಗಳನ್ನ ನಿಯೋಜಿಸದಿರಲು ಭಾರತ ನಿರ್ಧರಿಸಿದೆ. ಯುಕೆಯಲ್ಲಿ ಏರ್ ತಾಲೀಮಿನಲ್ಲಿ ಕೋಬ್ರಾ ವಾರಿಯರ್ 2022 ಗಾಗಿ ಭಾರತೀಯ ವಾಯುಪಡೆಯು ತನ್ನ ವಿಮಾನವನ್ನು ನಿಯೋಜಿಸುವುದಿಲ್ಲ. ಎಂದು ತಿಳಿಸಿದೆ. ವಾಯುಪಡೆಯು ಐದು LCA ತೇಜಸ್ ಯುದ್ಧ ವಿಮಾನಗಳನ್ನು ವ್ಯಾಯಾಮಕ್ಕಾಗಿ ಕಳುಹಿಸಬೇಕಿತ್ತು. ಯುಕೆ, ಬೆಲ್ಜಿಯಂ, ಸೌದಿ ಅರೇಬಿಯಾ, ಸ್ವೀಡನ್ ಮತ್ತು ಯುಎಸ್ ವಾಯುಪಡೆಗಳು ತಾಲೀಮಿನ ಭಾಗವಾಗಿದ್ದಾವೆ.
ಮಾರ್ಚ್ 6 ರಿಂದ 27 ರವರೆಗೆ ಜೆಟ್ ಪೈಟರ್ ಗಳ ಕಸರತ್ತು ನಡೆಯಬೇಕಿತ್ತು.ಇದರ ಜೊತೆಗೆ ಕಸರತ್ತು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ಭಾರತದ ಸ್ವದೇಶಿ ನಿರ್ಮಿತ ತೇಜಸ್ ಸಿಂಗಾಪುರದ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿತ್ತು. ಭಾರತವು ತೇಜಸ್ ಅನ್ನು ಸಂಭಾವ್ಯ ರಫ್ತು ವಸ್ತುವಾಗಿ ಪ್ರದರ್ಶಿಸುತ್ತಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಏರ್ಕ್ರಾಫ್ಟ್ ಡೆವಲಪ್ಮೆಂಟ್ ಏಜೆನ್ಸಿ (ADA) ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಂದ ತಯಾರಿಸಲ್ಪಟ್ಟ LCA ತೇಜಸ್, ಭವಿಷ್ಯದಲ್ಲಿ ಭಾರತೀಯ ವಾಯುಪಡೆಯ ಬೆನ್ನೆಲುಬಾಗಲಿದೆ ಎಂದು ನಿರೀಕ್ಷಿಸಲಾಗಿದೆ.








