Ukraine : ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ಆರೋಪ ಸುಳ್ಳು : ಪುಟಿನ್
ಉಕ್ರೇನ್ ನಲ್ಲಿ ರಷ್ಯಾ ದಾಳಿಯಿಂದಾಗಿ ಅಲ್ಲಿನ ಸ್ಥಿತಿ ಭೀಭತ್ಸವಾಗಿದೆ.. ಅಲ್ಲಿನ ಜನರ ಸ್ಥಿತಿ ಶೋಚನೀಯವಾಗಿದೆ.. ಬಾರತೀಯ ವಿದ್ಯಾರ್ಥಿಗಳು ಸಹ ಯುದ್ಧ ಪೀಡಿತ ದೇಶದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.. ಎಲ್ಲಿ ನೋಡಿದ್ರೂ ಬಾಂಬ್ ಸ್ಪೋಟ , ಕುಸಿದು ಬಿದ್ದು ಕಟ್್ಟಡಗಳ ಅವಶೇಷಗಳು ಹೀಗೆ ಅಲ್ಲಿನ ಚಿತ್ರಣ ಭಯಂಕರವಾಗಿದೆ.. ಸಾವಿರಾರು ಜನರ ಜೀವ ಹೋಗಿದೆ.. ಭಾರತದ ಇಬ್ಬರು ಅದ್ರಲ್ಲೂ ಆ ಪೈಕಿ ಒಬ್ಬ ಕರ್ನಾಟಕದ ಹಾವೇರಿ ಮೂಲದವರ ಜೀವ ಹೋಗಿದೆ.. ಮತ್ತೊಬ್ಬ ಭಾರತೀಯನಿಗೆ ಗುಂಡು ತಾಕಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇಷ್ಟೆಲ್ಲಾ ಸ್ಥಿತಿ ಹದಗೆಡಲು ಕಾರಣೀಭೂತರಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಾರ್ ಪುಟಿನ್ ಈಗ ಉಕ್ರೇನ್ ಮಾಡಿರುವ ಆರೋಪ ತಳ್ಳಿ ಹಾಕಿದ್ದು , ಉಕ್ರೇನ್ ನಗರಗಳ ಮೇಲೆ ನಾವು ಬಾಂಬ್ ದಾಳಿ ನಡೆಸಿಲ್ಲ ಎಂದಿದ್ದಾರೆ.. ಜರ್ಮನಿಯ ಚಾನ್ಸೆಲರ್ ಒಲಾಫ್ ಶೋಲ್ಜ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪುಟಿನ್, ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ಅಲ್ಲದೇ ರಷ್ಯಾ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಉಕ್ರೇನ್ ಜೊತೆ ಮಾತುಕತೆ ಸಾಧ್ಯ ಎಂದು ಪುಟಿನ್ ಹೇಳಿದ್ದಾರೆ. ಉಕ್ರೇನ್ ಜೊತೆಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ. ಉಕ್ರೇನ್ ನಲ್ಲಿ ಶಾಂತಿ ಬಯಸುವ ಎಲ್ಲರೊಂದಿಗೂ ಮಾತುಕತೆ ನಡೆಸಲು ರಷ್ಯಾ ತಯಾರಾಗಿದೆ. ಆದರೆ ರಷ್ಯಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂಬ ಷರತ್ತು ಒಪ್ಪಿಕೊಳ್ಳಬೇಕು ಎಂದು ಪುಟಿನ್ ಹೇಳಿದ್ದಾರೆ..