Ukraine : ಉಕ್ರೇನ್ ನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಕಾರ್ಯ ನೆರವೇರಿಸಿದ ಕುಟುಂಬ
ಹಾವೇರಿ : ಉಕ್ರೇನ್ ನಲ್ಲಿ ರಷ್ಯಾ ದಾಳಿ ನಡೆಸಿದ್ದು ಅಲ್ಲಿನ ಪರಿಸ್ಥಿತಿ ಭೀಭತ್ಸವಾಗಿದೆ.. ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.. ಆದ್ರೆ ಭಾರತೀಯ ಮೂಲದ ವಿದ್ಯಾರ್ಥಿಗಳು ಅದ್ರಲ್ಲೂ ನಮ್ಮ ಕರ್ನಾಟಕದವರು ಉಕ್ರೇನ್ ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.. ಈ ನಡುವೆ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಉಕ್ರೇನ್ ನಲ್ಲಿ ಶೋಚನೀಯವಾಗಿದೆ ಎನ್ನಲಾಗ್ತಿದೆ.. ಮತ್ತೊಂದೆಡೆ ಈಗಾಗಲೇ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ ಹಾವೇರಿ ಮೂಲದದ ನವೀನ್ ರಷ್ಯಾ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.. ಇದರಿಂದಾಗಿ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಆತಂಕ ದುಪ್ಪಟ್ಟಾಗಿ..
ಇದೀಗ ನವೀನ್ ಅಂತ್ಯಕ್ರಿಯೆ ನಡೆಯದಿದ್ದರೂ ಅವರ ಕುಟುಂಬದವರು ಮೂರು ದಿನಗಳ ಕಾರ್ಯ ಪೂರೈಸಸಿದ್ದಾರೆ. ಮನೆಯ ಆವರಣದಲ್ಲಿ ಮೂರು ದಿನಗಳ ಕಾರ್ಯದ ವಿಧಿವಿಧಾನ ಪೂರೈಸಸಿದ್ದಾರೆ. ವೀರಶೈವ ಧರ್ಮದ ವಿಧಿವಿಧಾನಗಳ ಅನ್ವಯ ಕಾರ್ಯ ನೆರವೇರಿಸಿದ್ಧಾರೆ. ನವೀನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ವೇಳೆ ಕುಟುಂಬಸ್ಥರು ಭಾವುಕರಾಗಿದ್ದು , ಈ ದೃಶ್ಯ ಮನಕಲುಕುವಂತಿತ್ತು. ನವೀನ್ ಸಹೋದರ ಹರ್ಷ , ಸ್ನೇಹಿತರು ನವೀನ್ ನನ್ನ ನೆನದು ಭಾವುಕರಾದರು. ಗ್ರಾಮಸ್ಥರೆಲ್ಲ ಸೇರಿ ನವೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.