ADVERTISEMENT
Tuesday, March 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಸಾಮಾನ್ಯ ಜನರಿಗಾಗಿ ಓಪನ್ ಲೆಟರ್ ಬರೆದ ಉಪ್ಪಿ

admin by admin
October 3, 2020
in Newsbeat, Politics, ರಾಜಕೀಯ
Upendra Prajakiya
Share on FacebookShare on TwitterShare on WhatsappShare on Telegram

ಸೂಪರ್ ಸ್ಟಾರ್ ಉಪೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೆ ಪರ್ಯಾಯವನ್ನು ಹುಡುಕುವ ಯತ್ನದಲ್ಲಿದ್ದಾರೆ.

ಪ್ರಜಾಕೀಯ ಪರಿಕಲ್ಪನೆ ಉತ್ತಮವಾಗಿದ್ದರೂ ಜನರಿಗೆ ಅರ್ಥವಾಗುತ್ತಿಲ್ಲ. ಹೀಗಾಗಿ ಜನರಿಗೆ ತಮ್ಮ ಅಲೋಜನೆಗಳನ್ನು ಅರ್ಥ ಮಾಡಿಸಲೇಬೇಕೆಂದು ಪಣತೊಟ್ಟಿರುವ ಉಪ್ಪಿ, ಈಗ ಅಸಾಮಾನ್ಯ ಜನರಿಗಾಗಿಯೇ ಒಂದು ಓಪನ್ ಲೆಟರ್ ಬರೆದಿದ್ದಾರೆ.

Related posts

ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ

ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ

March 31, 2026
EPFO UPDATE : ಇನ್ಮುಂದೆ ಎಟಿಎಂ ಮತ್ತು ಯುಪಿಐ ಮೂಲಕವೇ ಪಿಎಫ್ ಹಣ ಡ್ರಾ ಮಾಡಬಹುದು ಏಪ್ರಿಲ್ 1 ರಿಂದಲೇ ಇಪಿಎಫ್ಒ ಹೊಸ ನಿಯಮ ಜಾರಿ

EPFO UPDATE : ಇನ್ಮುಂದೆ ಎಟಿಎಂ ಮತ್ತು ಯುಪಿಐ ಮೂಲಕವೇ ಪಿಎಫ್ ಹಣ ಡ್ರಾ ಮಾಡಬಹುದು ಏಪ್ರಿಲ್ 1 ರಿಂದಲೇ ಇಪಿಎಫ್ಒ ಹೊಸ ನಿಯಮ ಜಾರಿ

March 31, 2026

ಉಪೇಂದ್ರ ಬರೆದಿರುವ ಲೆಟರ್ ನಲ್ಲಿ…

ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು ನಿನಗೊಬ್ಬನಿಗೆ ಮಾತ್ರ ಬರಲಿಲ್ಲ ನಿದ್ರೆ…

ಬ್ರಿಟಿಷರಿಗಿಂತಾ ಅಪಾಯಕಾರಿ ಈ ರಾಜಕೀಯ..

ಆಗ ನಮ್ಮನ್ನು ದೋಚುತ್ತಿರುವ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ವೈರಿ ಯಾರು ಎಂದು ಗೊತ್ತಾಗುತ್ತಿತ್ತು.

ಈ ನಮ್ಮವರೇ ಇಂಗ್ಲೀಷರು ಬಿಟ್ಟುಹೋದ ಅಧಿಕಾರದ ಗದ್ದುಗೆ ಮೇಲೆ ಕೊತಿದ್ದಾರೆ!

ಬ್ರಿಟೀಷರು ನಮ್ಮನ್ನು ಗುಲಾಮರನ್ನಾಗಿ ಮಾಡಿ ಅವರ ದೇಶಕ್ಕೆ ನಮ್ಮ ಜನರ ಪರಿಶ್ರಮ ಮತ್ತು ನೈಸರ್ಗಿಕ ಸಂಪತ್ತುನ್ನು ದೋಚುತ್ತಿದ್ದರು.

ಇದನ್ನೂ ಓದಿ : ಆರ್ ಆರ್ ನಗರ ಉಪ ಕದನ : ಎಸ್.ಎಂ ಕೃಷ್ಣ ಮೊಮ್ಮಗ `ಕೈ’ ಅಭ್ಯರ್ಥಿ.?

ಆದ್ರೆ ಈಗ ನಮ್ಮವರೇ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನಮ್ಮ ಜನರ ಕೌಶಲ್ಯ ಪ್ರತಿಫಲ, ಜನರ ಪರಿಶ್ರಮದ ತೆರಿಗೆ ಹಣ ಮತ್ತು ದೇಶದ ನೈಸರ್ಗಿಕ ಸಂಪತ್ತನ್ನು ಜಾಗತೀಕರಣದ ಹೆಸರಲ್ಲಿ ಎಫ್ ಡಿಐ ಮೂಲಕ ಇಡೀ ಜಗತ್ತಿನ ಹಲವು ಬಲಾಢ್ಯ ದೇಶಗಳು ದೋಚುವಂತೆ ಸಹಕರಿಸುತ್ತಿದೆ! ಇದಕ್ಕೆಲ್ಲಾ ಕಾರಣ..?

ಅದೇ ಬ್ರಿಟಿಷರು ಬಿಟ್ಟು ಹೋದ ಎ ಫಾರ್ ಆಪಲ್ ಗುಲಾಮಿ ಕೆಲಸ, ಸಂಬಳಕ್ಕಾಗಿ, ಸರ್ಟಿಫಿಕೇಟ್ ಗಾಗಿ ಓದುವ ಉರುಹೊಡೆದು ಪರೀಕ್ಷೆಯಲ್ಲಿ ಕಕ್ಕುವ ಸ್ಪರ್ಧಾತ್ಮಕ ಶಿಕ್ಷಣ ಇಸ್ರೇಲ್ ಫಿನ್ಲ್ಯಾಂಡ್ ದೇಶಗಳ ರೀತಿ ನಾವು ನವೀನ ಕೌಶಲ್ಯ, ಸಂಶೋಧನಾ ಅವಿಷ್ಕಾರಗಳು ಪ್ರಪಂಚಕ್ಕೆ ಕೊಡುವಂತಹಾ ವಿದ್ಯಾರ್ಥಿಗಳನ್ನು ಸೃಷ್ಟಿಸುವಂತಹಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮ ನಾಯಕರು ತಲೆಕೆಡಿಸಿಕೊಳ್ಳಲೇ ಇಲ್ಲ. ಕಾರಣ..?

ಅದೇ ನಾಯಕ ಸಂಸ್ಕøತಿಯ ರಾಜಕೀಯ! ಅಪ್ಪ ಹಾಕಿದ ಆಲದ ಮರದ ರೀತಿ ನಾಯಕ ತಾನು ತಿಳಿದುರುವುದೇ ಶ್ರೇಷ್ಠ ಎಂದು ಅದನ್ನೇ ಜನರ ಮೇಲೆ ಹೇರುತ್ತಾ ಹೋಗಿದ್ದು ಮತ್ತು ಸ್ವಾತಂತ್ರ್ಯ ಬಂದಿದ್ದು ನಮ್ಮ ದೇಶದವರೇ ಆಳಲು ಎಂದು ತಾನೂ ಬ್ರಿಟಿಷರು ಮಡಿದಂತೆಯೇ ಎಂದು ನಮ್ಮ ಜನರನ್ನು ತನ್ನ ಗುಲಾಮರನ್ನಾಗಿ ಮಾಡಿ ನಾನು ನಾಯಕ ಈ ದೇಶವನ್ನು ಉದ್ದಾರ ಮಾಡುತ್ತೇನೆಂದು ಹೊರಟು ದೇಶ ಎಂದರೇ ಅಲ್ಲಿ ವಾಸಿಸುವ ಜನ ಬುದ್ದಿವಂತಿಕೆಯಲ್ಲಿ ವಿಚಾರವಂತರಾಗಿ ಉದ್ಧಾರವಾಗಬೇಕೆಂದು ಸಾಮಾನ್ಯ ತಿಳುವಳಿಕೆ ಇಲ್ಲದೇ ಜನರನ್ನು ಅಂಧಕಾರದಲ್ಲೇ ಇಟ್ಟು ಜನರಲ್ಲಿ ಏನೂ ಬದಲಾವಣೆ ಕಾಣದಿದ್ದಾಗ ನಮ್ ಜನಕ್ ಏನೂ ಗೊತ್ತಾಗಲ್ಲ! ಎಂದು ಚುನಾವಣೆ ಸಮಯದಲ್ಲಿ ತಾನು ಮಾಡಿರುವ ಕೆಲಸಗಳನ್ನು ಹಣ ಚೆಲ್ಲಿ ಪ್ರಚಾರಗಳ ಮೂಲಕ ಜನರ ತಲೆ ತುಂಬಿಸುವ ಕೆಲಸ ಶುರು ಮಾಡಿದ

ಇದನ್ನೂ ಓದಿ : ಬೆಂಗಳೂರಿನಲ್ಲಿನ ಸರ್ಕಲ್ ಗೆ ಎಸ್ ಪಿಬಿ ಹೆಸರಿಡುವಂತೆ ಒತ್ತಾಯ

ಇಲ್ಲಿಂದ ರಾಜಕೀಯ ಒಂದು ವ್ಯಾಪಾರದಂತಾಗಿ ಹಣ ಇದ್ದು ಪ್ರಚಾರ ಮಾಡುವ ಶ್ರೀಮಂತ ಮತ್ತು ತೋಳ್ಬಲದಿಂದ ಹೋರಾಟ ಮಾಡುವ ಬಲಿಷ್ಠರಿಗೆ ಮಾತ್ರ ಎಂಬಂತಾಗಿ ಪ್ರಚಾರವಿಲ್ಲದೇ ಗೆಲ್ಲುವುದು ಅಸಾಧ್ಯ ಎಂದಾದಾಗ ಜಾಹೀರಾತಿಲ್ಲದೇ ಒಂದು ವಸ್ತು ಮಾರಾಟವಾಗುವುದಿಲ್ಲ ಎಂಬಂತೆ ಪ್ರಚಾರ ಕೊಡುವುದು ಎಂಬುದೂ ಒಂದು ಹಣ ಗಳಿಸುವ ವ್ಯಾಪಾರವಾಗಿ ಕೊನೆ ಕೊನೆಗೆ ನಾಯಕರದೇ ಮಾಲೀಕತ್ವದ ಪತ್ರಿಕೆ, ಟೀವಿ ಚಾನಲ್?ಗಳನ್ನೇ ಹುಟ್ಟುಹಾಕಿ ಹಲವಾರು ನಾಯಕರ ದಿಂಡೇ ಹುಟ್ಟಿಕೊಂಡಿತು.

ಪಕ್ಷ, ಪ್ರತಿಪಕ್ಷದ ಕೆಸರೆರಚಾಟ ತಾರಕಕ್ಕೇರಿ ಕೊಲೆ ಭ್ರಷ್ಟಾಚಾರ, ಅತ್ಯಾಚಾರಗಳಂತಹ ವಿಷಯಗಳನ್ನೂ ರಾಜಕೀಯಗೊಳಿಸುವ ಹೀನಾಯ ಮಟ್ಟಕ್ಕೆ ಇಂದಿ ಇಳಿದಿದೆ. ಪ್ರಜೆ ಮಾತ್ರ ಅಂದಿನಿಂದ ಇಂದಿನವರೆಗೂ ಏನೂ ಗೊತ್ತಿಲ್ಲದ ಪ್ರಚಾರ ಮತ್ತು ನಾಯಕ ಎಂಬ ದೀಪಕ್ಕೆ ಆಕರ್ಷಿತನಾಗಿ ಆ ಬೆಂಕಿಗೆ ಬಿದ್ದು ಆಹುತಿಯಾಗುವ ಹುಳುಗಳಾಗಿರುವ ಪ್ರಜೆ. ಇಂದಿಗೂ ನಾಯಕರು ವಿಜ್ರಂಭಣೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ನೋಡಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕೆಲವು ಸಮಯ ಖುಷಿ ಪಡುತ್ತಾನೆ! ನಿನಗೆ ಸ್ವಾತಂತ್ರ್ಯ ಸಿಗಬೇಕೆಂದರೆ ನೀನು ನಾಯಕನಾಗಬೇಕು, ನೀನು ಹೇಳಿದಂತೆ ಕೆಲಸ ಮಾಡುವ ಕೆಲಸಗಾರರನ್ನು ಕಿಟ್ಟುಕೋ ಎಂದರೆ ಏ ನಾಯಕ ಇಲ್ಲದೇ ಇದ್ದರೆ ಹೇಗಾಗುತ್ತೆ? ನಮ್ ಜನಕ್ಕೆ ಅಧಿಕಾರ ಕೊಟ್ರೆ ಅಷ್ಟೇ, ನಮ್ ಜನಾನೇ ಸರಿ ಇಲ್ಲ ಸಾರ್, ಅಂತಾನೆ! ಹಾಗಾದ್ರೆ ನೀನು ಜನ ಅಲ್ವಾ? ನೀನು ದನಾನ? ಅಂದ್ರೆ ಹಿಹಿಹಿ ಅಂತ ಹಲ್ ಕಿರಿತಾನೆ.

ಈ ಸಾಮಾನ್ಯನಿಂದ ಅಸಮಾನ್ಯರಿಗೆ….. ( ಓದಿ, ತಪ್ಪಿದ್ದರೆ ಕ್ಷಮಿಸಿ ) pic.twitter.com/SV6X3nprmv

— Upendra (@nimmaupendra) October 2, 2020

ಇಷ್ಟೆಲ್ಲ ಆದರೂ ಈ ದೇಶದ ವೈಶಿಷ್ಟ್ಯವೇನೆಂದರೆ ಈಗಲೂ ತುಂಬಾ ಯುವಕರು, ಯುವತಿಯರು ಇನ್ನೂ ವಿಚಾರವಂತರಾಗೇ ಇದ್ದಾರೆ! ಈ ಪ್ರಸ್ತುತ ವ್ಯವಸ್ಥೆಯಲ್ಲೇ ಏನೋ ಸರಿ ಇಲ್ಲಾ ಎಂದು ಯೋಚಿಸುತ್ತಿದ್ದಾರೆ! ಬದಲಾಗ್ತಿದ್ದಾರೆ! ಅಂತಹ ಅಸಾಮಾನ್ಯ ಪ್ರಜೆಗಳಿಗೆ ಪ್ರಜಾಕೀಯ ಎಂಬ ಒಂದು ವೇದಿಕೆ, ಅಸಾಮಾನ್ಯ ಜನರ ಒಂದು ಪಕ್ಷ ಬಂದಿದೆ! ಇಲ್ಲಿ ಚುನಾವಣೆಗೆ ನಿಂತು ಗೆದ್ದರೆ ಅಲ್ಲಾ ಕೆಲಸ ಸಿಕ್ಕರೆ ಅವನು ಸಂಬಳ ತಗೊಂಡು ಜನರು ಹೇಳೋ ಕೆಲಸ ಮಾತ್ರ ಮಾಡೋ ಕಾರ್ಮಿಕ ಆಗ್ತಾನೆ. ಜನಗಳೇ ನಾಯಕರಾಗ್ತಾರೆ. ಜನರಿಗೆ ಇಷ್ಟ ಆಗ್ಲಿಲ್ಲಾ ಅಂದ್ರೆ ಕೆಲಸ ಬಿಟ್ಟು ಹೋಗ್ತಾನೆ. ಮತ್ತೆ ಇನ್ನೊಂದು ಚುನಾವಣೇನಾ? ಅಂತ ತಲೆ ಕೆಡಿಸಿಕೊಳ್ಳಬೇಡಿ. ಈ ಥರಾ ಒಂದೆರಡು ಕಡೆ ಆದ್ರೆ ಬೇರೆ ಜನಪ್ರತಿನಿಧಿಗಳು ಹುಷಾರಾಗ್ತಾರೆ. ನಮಗೆ ಸಂಬಳ ಕೊಡೋರು ಕೇಳ್ತಾರೆ ಅಂತ. ಇದು ಖIಉಊಖಿ ಖಿಔ ಅಂಐಐ ಃಂಅಏ ಸಂವಿಧಾನದಲ್ಲಿ ಬರಬೇಕು.

ಜನ ಈ ರೀತಿ ತಮಗೆ ಏನು ಬೇಕು ಅಂತ ಆಡಳಿತದಲ್ಲಿ ಅಧಿಕಾರದಲ್ಲಿ ಭಾಗವಹಿಸಿದರೆ ಜನರಿಗೆ ಬೇಕಾಗಿರೋ ಶಿಕ್ಷಣ, ಆರೋಗ್ಯ, ಕೆಲಸ ಹೀಗೆ ಒಂದೊಂದಾಗಿ ಬದಲಾಗುತ್ತೆ ಎಲ್ಲದಕ್ಕಿಂತಾ ಮುಖ್ಯವಾಗಿ ಜನ ಬದಲಾಗ್ತಾರೆ, ಸ್ವತಂತ್ರರಾಗಿ ವಿಚಾರ ಮಾಡುವ ಬುದ್ಧಿವಂತರಾಗ್ತಾರೆ, ಆವಿಷ್ಕಾರಗಳಾಗುತ್ತೆ, ಆತ್ಮನಿರ್ಭರ ಭಾರತ ಆಗುತ್ತೆ ನಮ್ ಕಾಲ್ಮೇಲೆ ನಾವು ನಿಲ್ತೀವಿ. ನನಗೊಬ್ಬ ನಾಯಕ ಬೇಕು ಎಂಬ ಗುಲಾಮಗಿರಿ ಹೋದ್ರೆ ತಾನೇ ನಮ್ ಜನ ? ನಾಯಕರಾಗೋದು? ಉದ್ದಾರ ಆಗೋಗು? ಅಂದ್ರೆ ಆ ಜನ ಇರೋ ಈ ದೇಶ ಉದ್ಧಾರ ಆಗೋದು. ಅದೆಲ್ಲದಕ್ಕಿಂತ ಮುಂಚೆ ಈಗ ಈ ಕ್ಷಣ ನನಗೆ ಯಾವ ತೋಲಾಂಡಿ ನಾಯಕ ಬೇಡ. ನಾನೇ ಸ್ವಯಂ ನಾಯಕ ಆಗ್ತೀನಿ ಅಂತ ಆತ್ಮವಿಶ್ವಾಸದಿಂದ ಈ ಸಂದೇಶವನ್ನು ನಾಲ್ಕು ಮಂದಿಗೆ ಫಾರ್ವರ್ಡ್ ಮಾಡ್ತೀರಾ..? ಅಂತ ಉಪೇಂದ್ರ ಮನವಿ ಮಾಡಿದ್ದಾರೆ.

Tags: prajakiyaSandalwoodsuper starUpendraUppiUppi 2
ShareTweetSendShare
Join us on:

Related Posts

ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ

ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ

by Shwetha
March 31, 2026
0

ಭಾರತೀಯರ ಪಾಲಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಭಾವನೆ, ಪರಂಪರೆ ಮತ್ತು ಆಪತ್ಕಾಲದಲ್ಲಿ ಕೈಹಿಡಿಯುವ ಅತಿ ದೊಡ್ಡ ಆಸ್ತಿ. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯಲಿ ಅಥವಾ...

EPFO UPDATE : ಇನ್ಮುಂದೆ ಎಟಿಎಂ ಮತ್ತು ಯುಪಿಐ ಮೂಲಕವೇ ಪಿಎಫ್ ಹಣ ಡ್ರಾ ಮಾಡಬಹುದು ಏಪ್ರಿಲ್ 1 ರಿಂದಲೇ ಇಪಿಎಫ್ಒ ಹೊಸ ನಿಯಮ ಜಾರಿ

EPFO UPDATE : ಇನ್ಮುಂದೆ ಎಟಿಎಂ ಮತ್ತು ಯುಪಿಐ ಮೂಲಕವೇ ಪಿಎಫ್ ಹಣ ಡ್ರಾ ಮಾಡಬಹುದು ಏಪ್ರಿಲ್ 1 ರಿಂದಲೇ ಇಪಿಎಫ್ಒ ಹೊಸ ನಿಯಮ ಜಾರಿ

by Shwetha
March 31, 2026
0

ಕೇಂದ್ರ ಸರ್ಕಾರವು ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಹಿಂದೆಂದೂ ಕೇಳಿರದಂತಹ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ನೌಕರರ ಭವಿಷ್ಯ ನಿಧಿ ಸಂಘಟನೆ ಅಂದರೆ ಇಪಿಎಫ್ಒ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆಯೊಂದು ನಡೆಯಲಿದ್ದು,...

ವಾಹನ ಸವಾರರ ಗಮನಕ್ಕೆ: ನಿಮ್ಮ ಗಾಡಿಯ ಮೇಲೂ ಬಿದ್ದಿರಬಹುದು ದಂಡ, ಪೊಲೀಸ್ ಠಾಣೆಗೆ ಅಲೆಯುವ ಬದಲು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿಯೇ ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ

ವಾಹನ ಸವಾರರ ಗಮನಕ್ಕೆ: ನಿಮ್ಮ ಗಾಡಿಯ ಮೇಲೂ ಬಿದ್ದಿರಬಹುದು ದಂಡ, ಪೊಲೀಸ್ ಠಾಣೆಗೆ ಅಲೆಯುವ ಬದಲು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿಯೇ ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ

by Shwetha
March 31, 2026
0

ಇಂದಿನ ಡಿಜಿಟಲ್ ಮತ್ತು ವೇಗದ ಯುಗದಲ್ಲಿ ವಾಹನ ಚಾಲನೆ ಮಾಡುವುದು ಎಷ್ಟು ಸುಲಭವೋ, ಅಷ್ಟೇ ಎಚ್ಚರಿಕೆಯಿಂದ ಇರುವುದು ಕೂಡ ಅಗತ್ಯವಾಗಿದೆ. ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಕಾಣುತ್ತಿಲ್ಲ, ನಾವೇನಾದರೂ...

ದೇಗುಲ ಕೆಡವಿದರೆ ಬೌದ್ಧ ಸ್ತೂಪ ಸಿಗುತ್ತದೆ ಟಿಪ್ಪು ವಿರೋಧಿಸುವವರು ಲಾಲ್ ಬಾಗ್ ಸುಡುತ್ತೀರಾ ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ದೇಗುಲ ಕೆಡವಿದರೆ ಬೌದ್ಧ ಸ್ತೂಪ ಸಿಗುತ್ತದೆ ಟಿಪ್ಪು ವಿರೋಧಿಸುವವರು ಲಾಲ್ ಬಾಗ್ ಸುಡುತ್ತೀರಾ ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
March 31, 2026
0

ರಾಜ್ಯ ರಾಜಕಾರಣದಲ್ಲಿ ಸೈದ್ಧಾಂತಿಕ ಸಮರ ಮತ್ತಷ್ಟು ತೀವ್ರಗೊಂಡಿದ್ದು, ಇತಿಹಾಸ ಮತ್ತು ಪರಂಪರೆಯ ಸೂಕ್ಷ್ಮ ವಿಚಾರಗಳನ್ನೇ ಅಸ್ತ್ರವಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಹಾಗೂ ಆರ್ ಎಸ್...

ಪಡಿತರ ಚೀಟಿದಾರರಿಗೆ ಬಂತು ಖಡಕ್ ಎಚ್ಚರಿಕೆ ಏಪ್ರಿಲ್ 1 ರಿಂದ ಜಾರಿಯಾಗಲಿದೆ ಕಟ್ಟುನಿಟ್ಟಿನ ಹೊಸ ನಿಯಮ ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಶಾಶ್ವತವಾಗಿ ರದ್ದು!

ಪಡಿತರ ಚೀಟಿದಾರರಿಗೆ ಬಂತು ಖಡಕ್ ಎಚ್ಚರಿಕೆ ಏಪ್ರಿಲ್ 1 ರಿಂದ ಜಾರಿಯಾಗಲಿದೆ ಕಟ್ಟುನಿಟ್ಟಿನ ಹೊಸ ನಿಯಮ ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಶಾಶ್ವತವಾಗಿ ರದ್ದು!

by Shwetha
March 31, 2026
0

ಬಡವರ ಹಸಿವು ನೀಗಿಸಲು ಸರ್ಕಾರ ನೀಡುತ್ತಿರುವ ಉಚಿತ ಪಡಿತರ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಅನರ್ಹರು ಮತ್ತು ನಕಲಿ ಫಲಾನುಭವಿಗಳಿಗೆ ಬಿಸಿ ಮುಟ್ಟಿಸಲು ಹಾಗೂ ನೈಜ ಬಡವರಿಗೆ ನ್ಯಾಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram