ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜುಲೈ 31, ಶುಕ್ರವಾರದಂದು ವರವನ್ನೀಯುವ ಮಹಾಲಕ್ಷ್ಮಿಯ ಪರಮ ಕೃಪೆಯಾಚಿಸುವ ವರಮಹಾಲಕ್ಷ್ಮೀ ವ್ರತ

admin by admin
July 19, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ವರಮಹಾಲಕ್ಷ್ಮಿ ವ್ರತ
31-07-2020…ಶುಕ್ರವಾರ

Related posts

ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ

ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ

December 15, 2025
ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

December 15, 2025

ಶ್ರವಣ ಮನನ ವ್ರತ ನಿಯಮ ಆಚರಣೆಗಳಿಗೆ ಹೇಳಿ ಮಾಡಿಸಿದಂತಿದೆ ಶ್ರಾವಣ ಮಾಸ…

ಜುಲೈ 31, ಶುಕ್ರವಾರದಂದು ವರವನ್ನೀಯುವ ಮಹಾಲಕ್ಷ್ಮಿಯ ಪರಮ ಕೃಪೆಯಾಚಿಸುವ ವರಮಹಾಲಕ್ಷ್ಮೀ ವ್ರತ

ವರವನ್ನೀಯುವ ಮಹಾಲಕ್ಷ್ಮಿಯ ಪರಮ ಕೃಪೆಯಾಚಿಸುವ ವರಮಹಾಲಕ್ಷ್ಮೀ ವ್ರತವು ಈ ತಿಂಗಳಿನಲ್ಲಿ ಪ್ರಮುಖವಾದುದು .
ಶ್ರಾವಣ ಹುಣ್ಣಿಮೆಗೆ ಸಮೀಪದ ಶುಕ್ರವಾರ ಅಂದರೆ ಶ್ರಾವಣ ಶುಕ್ಲ ಪಕ್ಷದ ಎರಡನೆಯ ಶುಕ್ರವಾರದಂದು” ವಿಶೇಷವಾಗಿ ದೇವಾಲಯಗಳಲ್ಲಿ ಮುತ್ತೈದೆಯರು ಸಂಘಟಿತರಾಗಿ , ಶ್ರದ್ಧಾ ಭಕ್ತಿಗಳಿಂದ ಈ ಪೂಜೆ ವರ್ಷದಿಂದ ವರ್ಷಕ್ಕೆ ಸಡಗರದಲ್ಲಿ ಆಚರಿಸುವುದನ್ನು ನಾವು ಕಾಣುತ್ತಿದ್ದೇವೆ . ನಿಜಕ್ಕೂ ಇದೊಂದು ಶುಭ ಲಕ್ಷಣ . ಭವಿಷ್ಟೋತ್ತರ ಪುರಾಣದಲ್ಲಿ ಪಾರ್ವತಿ – ಪರಮೇಶ್ವರರ ಸಂಭಾವಣಾ ರೂಪದಲ್ಲಿ ಈ ವ್ರತ ಕಥೆ ಹೃದಯಂಗಮವಾಗಿ ವರ್ಣಿಸಲ್ಪಟ್ಟಿದೆ . ಇದೇ ವಿವರಗಳನ್ನು ಸೂತ ಪುರಾಣಿಕರು ಶೌನಕಾದಿ ಮಹರ್ಷಿಗಳಿಗೆ ಅರುಹಿದ ವಿಚಾರ ಜನ ಜನಿತವಾದುದು . (ಇದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ)

“ ವ್ರತಾನಾಮುತ್ತಮಂ ಕಾಮ್ಯಂ ಸರ್ವ ಸೌಭಾಗ್ಯ ಕಾರಣಮ್
ಸರ್ವ ಸಂಪತ್ಪದಂ ಕೀರ್ತಿ ಪುತ್ರ ಪೌತ್ರ ಪ್ರವರ್ಧನಂ ” ವ್ರತಗಳಲ್ಲಿಯೇ ಸರ್ವಶ್ರೇಷ್ಠವಾದುದು ವರಮಹಾಲಕ್ಷ್ಮೀವ್ರತ . ಇಷ್ಟಾರ್ಥ ಪಡೆದುಕೊಳ್ಳುವ ಆಚರಣೆಯಿದು. ಜ್ಞಾನ , ಭಕ್ತಿ , ವೈರಾಗ್ಯಗಳ ಜೊತೆಗೆ ಸಕಲ ಸಂಪತ್ತನ್ನು ಸತ್- ಸಂತಾನ ಕರುಣಿಸುವ ಪೂಜೆಯಿದು.
ಈ ರೀತಿ ಹಿಂದೆ ರುದ್ರ ದೇವನೇ ಪಾರ್ವತಿಗೆ ಹೇಳಿದ ವ್ರತದ ಪುಣ್ಯ ಪ್ರಭಾವ ಗಮನಾರ್ಹವಾದುದು.

ವ್ರತ ‘ ಎಂದರೆ ಒಳ್ಳೆಯ ಸದಾಚಾರ.
ಗೃಹಿಣೀ ಧರ್ಮಕ್ಕನುಸಾರವಾಗಿ ಶುಚಿರ್ಭೂತರಾಗಿ , ಶುದ್ಧ ಮನಸ್ಸಿನಿಂದ ಶ್ರದ್ಧೆಯಿಂದ ವ್ರತದಲ್ಲಿ ಸಹಭಾಗಿಗಳಾಗುವುದೇ ನಿಜವಾದ ಅರ್ಹತೆ . ಅಲಂಕೃತ ಮಂಟಪದಲ್ಲಿ ವಿಧ್ಯುಕ್ತ ಕಲಶದಲ್ಲಿ ಮಂಗಲ ಪ್ರದಾಯಿನೀ ಮಹಾ ಲಕ್ಷ್ಮೀಯನ್ನು ಶ್ರೀಮನ್ನಾರಾಯಣನ ಸಹಿತ ಕಲ್ಪೋಕ್ತ ವಿಧಿಯಿಂದ ಪೂಜಿಸಬೇಕು.
ಅಪೂಪ ( ಅಪ್ಪ ),
ಕ್ಷೀರ ಪಾಯಸ, ಪೂರ್ಣ ಭಕ್ಷ್ಯಾದಿ, ಫಲತಾಂಬೂಲ ಯೋಗ್ಯತಾನುಸಾರ ದೇವಿಗೆ ನೈವೇದ್ಯ ಕಾಲದಲ್ಲಿ ಅರ್ಪಿಸಬೇಕು . ಪ್ರಸನ್ನಾರ್ಥ್ಯದ ಬಳಿಕ ಪ್ರಸಾದ ರೂಪದ ದೋರ (ಪೂಜೆ ಮಾಡಿದ ದ್ವಾದಶಿ ಗ್ರಂಥಿ ಉಳ್ಳ ದಾರ) ಧರಿಸಿ ಬ್ರಾಹ್ಮಣರಿಗೆ ಸುವಾಸಿನಿಯರಿಗೆ ಮನೆಯ; ಕುಟುಂಬದ ಹಿರಿಯ ಮುತ್ತೈದೆಯರಿಗೆ ವ್ರತದ ಸಾಂಗತೆಗೆ ಭಕ್ಷ ಸಹಿತ ಫಲ ತಾಂಬೂಲ – ದಕ್ಷಿಣೆ ಒಪ್ಪಿಸಿ ಆಶೀರ್ವಾದ ಪಡೆಯುವುದು ಸಮುಚಿತವಾದುದು .

ಭಜನೆ , ಸ್ತೋತ್ರ ಪಠನ , ಸುವಾಸಿನಿ ಪೂಜೆ, ಕಥಾಶ್ರವಣ , ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳಿಂದ ವ್ರತ ಸಂಪನ್ನವಾಗುತ್ತದೆ . ವಿಶೇಷವಾಗಿ ಮಧ್ಯಾಹ್ನ ಕಾಲದಲ್ಲಿ ವ್ರತ ಆಚರಿಸುವ ವಿಧಾನವಿದ್ದರೂ , ಕೆಲವೆಡೆ ಸಂಜೆ ಪೂಜಿಸುವ ಪರಿಪಾಟವಿದೆ . ಆಚರಣೆಯ ವಿಧಿಯಲ್ಲಿ ಪ್ರಾದೇಶಿಕ ಭಿನ್ನತೆಯಿದ್ದರೂ , ಪೂಜಾ ವಿಧಾನದಲ್ಲಿ ಸಾಮ್ಯತೆ ಇದ್ದೇ ಇದೆ .

ಈ ಲಾಕ್ಡೌನ್ ಕಾಲದಲ್ಲಿ ಪೂಜೆಯಲ್ಲಿ ಸಾಮೂಹಿಕವಾಗಿ ಭಾಗಿಯಾಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಪೂಜೆ ಮಾಡಲು ಬೇಕಾದ ವಿಧಾನವನ್ನು ಸ್ತೋತ್ರಗಳನ್ನು ಅಷ್ಟೋತ್ತರವನ್ನು ನಿಮಗೆ ವಾಟ್ಸಪ್ ಮೂಲಕ ಕಳಿಸಲಾಗುತ್ತದೆ.

ವರಮಹಾಲಕ್ಷ್ಮಿ ವ್ರತ ಕಲ್ಪೋಕ್ತ ಪೂಜಾ ವಿಧಿ
ಈ ಪುಸ್ತಕ ಮತ್ತು ದ್ವಾದಶ ಗ್ರಂಥಿ ಉಳ್ಳ ದೋರ(ದಾರ)
ಬೇಕಾದವರು ಸಂಪರ್ಕಿಸಿ.
ಪೂಜೆ ಮಾಡಿದ ದಾರವನ್ನು ಉಚಿತವಾಗಿ ಕೊಡಲಾಗುತ್ತದೆ. (ಸಜ್ಜನರ ಸೇವೆ ಗೊಂದು ಅವಕಾಶ)
ಪೂಜೆಯ ವಿಶೇಷ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ
ಶ್ರೀ ಗಜೇಂದ್ರ ಜೋಶಿ
ಜಾತಕ ವಿಮರ್ಶಕರು 9538175275

Tags: festivalfridayhinduhindu festivaljulyLord MahalakshmiVaramahalakshmi Vrata
ShareTweetSendShare
Join us on:

Related Posts

ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ

ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ

by admin
December 15, 2025
0

ದುಷ್ಟ ಗ್ರಹಗಳಿಂದ ನಿಮ್ಮ ಜೀವನದಲ್ಲಿ ಎಂದಿಗೂ ದುಃಖ ಇರುವುದಿಲ್ಲ. ಹನುಮಂತನ ಈ ತಾರಕ ಮಂತ್ರವನ್ನು ಒಮ್ಮೆ ಪಠಿಸಿದರೂ ಸಹ ಗ್ರಹಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕುಟುಂಬಕ್ಕೆ...

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

by admin
December 15, 2025
0

ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್...

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

by admin
December 15, 2025
0

ಶಿವನ ದೇವಸ್ಥಾನ ಮಾತ್ರವಲ್ಲ, ಯಾವ ದೇವಸ್ಥಾನಕ್ಕೆ ಭೇಟಿ ನೀಡಿದರೂ ನಮ್ಮೊಳಗೆ ಒಂದು ಶಕ್ತಿ ಬರುತ್ತದೆ. ಆ ಧನಾತ್ಮಕ ಶಕ್ತಿಯು ನಮ್ಮ ಜೀವನದಲ್ಲಿ ಕೆಲವು ತಿರುವುಗಳನ್ನು ತರುತ್ತದೆ. ಆದರೆ, ಶಿವನ ದೇವಸ್ಥಾನಕ್ಕೆ...

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

by Shwetha
December 15, 2025
0

ಹಳಿಯಾಳ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಶಿಕ್ಷಕನೇ, ತನ್ನ ಮಗನ ವ್ಯಾಮೋಹದಲ್ಲಿ ಪರೀಕ್ಷಾ ಅಕ್ರಮಕ್ಕೆ ಇಳಿದು ಸಿಕ್ಕಿಬಿದ್ದಿರುವ ಲಜ್ಜೆಗೆಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ. ಕೇಂದ್ರ...

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

by Shwetha
December 15, 2025
0

ತಿರುವನಂತಪುರಂ: ಕೇರಳದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವೊಂದಕ್ಕೆ ಸಾಕ್ಷಿಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ರಾಜಧಾನಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಐತಿಹಾಸಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram