ಐಪಿಎಸ್ ಮಾಡು.. ಸಾರಾಯಿ ಚಟದಿಂದ ಬಿಡಿಸು : ಹನುಮನಿಗೆ ಭಕ್ತರಿಂದ ವಿಚಿತ್ರ ಪತ್ರಗಳು
ವಿಜಯಪುರ : ದೇವರ ಬಳಿ ಭಕ್ತರು ನನಗೆ ಅದು ಮಾಡು ಇದು ಮಾಡು.. ನನಗೆ ಒಳ್ಳೆದು ಮಾಡಿದ್ರೆ, ನಿನ್ಗೆ ಅದು(ಪೂಜೆ, ಧಾನ್ಯ, ಕಾಣಿಕೆ, ಬಲಿ) ಕೊಡ್ತೀನಿ, ಇದು ಕೊಡ್ತೀನಿ ಅಂತಾ ಬೇಡಿಕೊಂಡು ಹರಿಕೆಗಳನ್ನ ಮಾಡಿಕೊಳ್ಳೋದು ಕಾಮನ್. ಹೀಗೆ ಭಕ್ತರು ಬೇಡಿಕೊಳ್ಳುವುದು ತಪ್ಪು ಅಂತಾನು ಯಾರು ಹೇಳೋಕೆ ಆಗಲ್ಲ. ಅದು ಅವರವರ ನಂಬಿಕೆ.
ಇದನ್ನೂ ಓದಿ : ಅಭಿಮಾನಿಯ ಕೊನೆ ಆಸೆ ಈಡೇರಿಸಲಿದ್ದಾರೆ ಹುಲಿಯಾ
ಇನ್ನು ಕೆಲವರು ದೇವರ ಬಳಿ ಚಿತ್ರವಿಚಿತ್ರ ಬೇಡಿಕೆಗಳನ್ನು ಕೂಡ ಇಡುತ್ತಾರೆ. ಅಂತಹದ್ದೇ ಘಟನೆ ವಿಜಯಪುರ ಜಿಲ್ಲೆಯ ನಿಡಗುಂಡಿ ತಾಲೂಕಿನ ಸುಪ್ರಸಿದ್ಧ ಯಲಗೂರು ಆಂಜನೇಯ ದೇಗುಲದಲ್ಲಿ ನಡೆದಿದೆ.
ಇಲ್ಲಿನ ದೇಗುಲದ ಹುಂಡಿಯಲ್ಲಿ ಹಣದ ಜೊತೆ ಭಕ್ತರು ಆಂಜನೇಯನಿಗೆ ಬರೆದ ಪತ್ರಗಳು ಲಭ್ಯವಾಗಿದೆ. ಹುಂಡಿ ಎಣಿಕೆ ಕಾರ್ಯದ ವೇಳೆ ಕೆಲ ಪತ್ರಗಳು ಸಿಕ್ಕಿವೆ. ಅವುಗಳಲ್ಲಿ ಬಾಳೇಶ ಎಂಬ ಯುವಕ ” ನನ್ನ ಶರ್ಟ್ ಮೇಲೆ ಒಂದು ಸಿಂಹ ಒಂದು ಸ್ಟಾರ್ ಬರುವ ಹಾಗೆ ಐಪಿಎಸ್ ಮಾಡಪ್ಪ. ಒಂದು ವರ್ಷದಲ್ಲಿ ಸರ್ಕಾರಿ ನೌಕರಿ ಸಿಕ್ಕರೇ ಎರಡು ತಿಂಗಳ ಸಂಬಳ ನಿನಗೆ ಮೀಸಲು, ನಡೆದುಕೊಂಡು ಬಂದೇ ನಿನ್ನ ಹರಕೆ ತೀರುಸುತ್ತೇನೆ ಅಂತ ಬರೆದಿದ್ದಾನೆ. ಇನ್ನೊಂದು ಪತ್ರದಲ್ಲಿ ನಾನು ಸಾರಾಯಿ ಕುಡಿಯುತ್ತೇನೆ, ಇಸ್ಪೀಟು ಆಡುತ್ತೇನೆ. ಈ ದಶ್ಚಟ ಬಿಡಿಸು ಅಂತ ಇನ್ನೊಬ್ಬ ಭಕ್ತ ಬರೆದಿದ್ದಾನೆ. ಹೀಗೆ ಹತ್ತು ಹಲವಾರು ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ.
ಇನ್ನು ಈ ವರ್ಷ ಹುಂಡಿಯಲ್ಲಿ 25 ಲಕ್ಷ ರೂಪಾಯಿ ಸಂಗ್ರಹವಾಗಿದೆ.









