ರಿಷಬ್ ಪಂತ್ ಸ್ಪೇಷಲ್ ಪ್ಲೇಯರ್… ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅಭಿಮತ,
ರಿಷಬ್ ಪಂತ್.. ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್/ ಬ್ಯಾಟ್ಸ್ ಮೆನ್. ಆದ್ರೆ ರಿಷಬ್ ಪಂತ್ ಮೂಡಿಸಿದ್ದ ಭರವಸೆಗಳು, ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಆರಂಭದಲ್ಲಿ ರಿಷಬ್ಪಂತ್ ಅವರ ಪ್ರತಿಭೆ, ಸಾಮಥ್ರ್ಯಗಳ ಬಗ್ಗೆ ಕ್ರಿಕೆಟ್ ಪಂಡಿತರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ 2019ರ ವಿಶ್ವಕಪ್ ಸೇರಿದಂತೆ ಹಲವಾರು ಪಂದ್ಯಗಳಲ್ಲಿ ರಿಷಬ್ ಪಂತ್ ವೈಫಲ್ಯ ಅನುಭವಿಸಿದ್ದರು. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಬಗ್ಗೆಯೂ ಪ್ರಶ್ನೆಗಳು ಮೂಡಿದ್ದವು. ಹೀಗಾಗಿ ರಿಷಬ್ ಪಂತ್ ಸ್ಥಾನವನ್ನು ಸದ್ಯ ಕೆ.ಎಲ್. ರಾಹುಲ್ ನಿಭಾಯಿಸುತ್ತಿದ್ದಾರೆ.
ಈ ನಡುವೆ ರಿಷಬ್ ಪಂತ್ಗೆ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಬೆನ್ನಿಗೆ ನಿಂತಿದ್ದರು. ಇದೀಗ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು ರಿಷಬ್ ಪಂತ್ ಬೆನ್ನಿಗೆ ನಿಂತಿದ್ದಾರೆ.
ರಿಷಬ್ ಪಂತ್ ಕಳೆದ ವರ್ಷ ಅಷ್ಟೊಂದು ಚೆನ್ನಾಗಿ ಪ್ರದರ್ಶನ ನೀಡಿಲ್ಲ. ಆದ್ರೂ ಟೀಮ್ ಮ್ಯಾನೇಜ್ಮೆಂಟ್ ಪಂತ್ ಬೆನ್ನಿಗೆ ನಿಂತಿದೆ. ಆತ ಒಬ್ಬ ವಿಶೇಷ ಆಟಗಾರ. ಆತನಲ್ಲಿ ವಿಶೇಷ ಪ್ರತಿಭೆ ಇದೆ. ಆತ ಟೀಮ್ ಇಂಡಿಯಾದ ಆಶಾಕಿರಣ. ಆತನ ರನ್ ಗಳಿಸಲು ಶುರು ಮಾಡಿದ್ರೆ ಪಂತ್ ತಂಡದ ಬೆನ್ನುಲುಬಾಗುತ್ತಾನೆ ಅನ್ನೋ ನಂಬಿಕೆ ನಮಗಿದೆ ಅಂತ ಹೇಳ್ತಾರೆ ವಿಕ್ರಮ್ ರಾಥೋಡ್.
ಎಂ.ಎಸ್. ಧೋನಿ ಬಗ್ಗೆ ಇನ್ನೂ ಏನು ನಿರ್ಧರವಾಗಿಲ್ಲ. ಧೋನಿಗೆ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಆದ್ರೆ ಎಂ,ಎಸ್. ಧೋನಿಯವರ ಜಾಗವನ್ನು ತುಂಬುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. ಇನ್ನೊಂದೆಡೆ ಪಂತ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಒತ್ತಡಕ್ಕೆ ಸಿಲುಕಿದ್ದಾರೆ. ಇದ್ರಿಂದ ಅವರು ಹೊರಬಂದ್ರೆ ಪಂತ್ ಅತ್ಯುತ್ತಮ ಆಟಗಾರನಾಗಲು ಸಾಧ್ಯ ಎಂದು ರಾಥೋಡ್ ಹೇಳಿದ್ದಾರೆ.
ಇನ್ನು ರಿಷಬ್ ಪಂತ್ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದಾರೆ. ಲಯಕಂಡುಕೊಳ್ಳಲು ಪರಿಶ್ರಮ ಪಡುತ್ತಿದ್ದಾರೆ. ಆತನಿಗೆ ನಾವು ಬೆಂಬಲ ನೀಡಿದ್ರೆ ಮುಂದಿನ ದಿನಗಳಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ವಿಕ್ರಮ್ ರಾಥೋಡ್ ಅವರ ಅಭಿಪ್ರಾಯವಾಗಿದೆ.