ರಾಷ್ಟ್ರೀಯ ರೈತರ ದಿನ ಆಚರಣೆ ಏಕೆ..?
ಇಂದು ಡಿಸೆಂಬರ್ 23… ದೇಶದಾದ್ಯಂತ ಪ್ರತಿವರ್ಷದಂತೆ ಈ ವರ್ಷವೂ ಕೂಡ ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ದೇಶವಾಸಿಗಳು ವಾಟ್ಸಪ್, ಫೇಸ್ ಬುಕ್ ಸೇರಿದಂತೆ ಸೋಶಿಯಲ್ ಮಿಡಿಯಾದಲ್ಲಿ ಸ್ಟೇಟಸ್, ಫೋಟೋಸ್ ಹಂಚಿಕೊಂಡು ಕಿಸಾನ್ ದಿವಸ್ ಅನ್ನ ಆಚರಣೆ ಮಾಡುತ್ತಿದ್ದಾರೆ.
ಇದರ ಮಹತ್ವವೇನು..?
ಕಿಸಾನ್ ದಿವನ್ ಅನ್ನ ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನದ ಸ್ಮರಣಾರ್ಥ ಆಚರಣೆ ಮಾಡಲಾಗುತ್ತದೆ. ಯಾಕೆಂದ್ರೆ ಚೌಧರಿ ಚರಣ್ ಸಿಂಗ್ ಅವರು ಪ್ರಧಾನಿಗಳಾಗಿದ್ದ ಅಲ್ಪಾವಧಿಯಲ್ಲಿ ರೈತರ ಕಲ್ಯಾಣಕ್ಕೆ ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕ್ಕಾಗಿ ಅವರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಅವರು ಜುಲೈ 1979ರಲ್ಲಿ ಪ್ರಧಾನಿಯಾಗಿ ಹುದ್ದೆ ವಹಿಸಿ 1980ರ ಜನವರಿಯವರಿಗೆ ಇದ್ದರು.
ಇನ್ನು ಮೀರತ್ ನ ನೂರ್ಪುರ್ ನಲ್ಲಿ 1902ರಲ್ಲಿ ಚೌಧರಿ ಚರಣ್ ಸಿಂಗ್ ಜನಿಸಿದರು. ಇವರು ಕೃಷಿ ಆರ್ಥಿಕತೆಯ ಮಹತ್ವವನ್ನು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು.
ದೇಶದ ಅಭಿವೃಧ್ದಿಗಾಗಿ ಯೋಜನ ಆಯೋಗದ ಪರ್ಯಾಯ ಮಾದರಿಯನ್ನು ನಿರೂಪಿಸಲು ಪ್ರಯತ್ನಿಸಿದರು. 1960 ಮತ್ತು 1970 ರ ದಶಕಗಳಲ್ಲಿ ಭಾರತದ ಚುನಾವಣ ರಾಜಕೀಯಕ್ಕೆ ರೈತರ ಸಮಸ್ಯೆಗಳನ್ನು ತಂದು ರೈತರ ಕಷ್ಟಗಳನ್ನು ದೇಶದ ಮುಂದೆ ಇಟ್ಟರು.
ಇದಲ್ಲದೆ ಚೌಧರಿ ಚರಣ್ ಸಿಂಗ್ ರವರು ರೈತರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ರೈತರ ಜೀವನೂಪಾಯವನ್ನು ಸುಧಾರಿಸಲು ವಿವಿಧ ಪರಿಹಾರಗಳನ್ನು ಚಿತ್ರಿಸಿದ್ದಾರೆ. ಅವರು ಮಂಡಿಸಿದ 1979 ರ ಬಜೆಟ್ ನಲ್ಲಿ ಅವರು ರೈತರ ಪರವಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿದರು. ಅಲ್ಲದೆ ಜಮಿನ್ದಾರಿ ನಿರ್ಮೂಲನ ಕಾಯ್ದೆಯನ್ನು ಜಾರಿಗೆ ತಂದವರು.
ಪಂಡಿತ್ ಜವಹರಲಾಲ್ ನೆಹರೂ ಅವರನ್ನು ವಿರೋಧಿಸಿ ಅದ್ವಿತೀಯ ನಾಯಕ ಎನಿಸಿಕೊಂಡಿದ್ದರು. 1959ರ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಚೌಧರಿಯವರು, ನೆಹರೂರವರನ್ನು ಸಾರ್ವಜನಿಕವಾಗಿಯೇ ಅವರ ಸಾಮೂಹಿಕ ಮತ್ತು ಸಾಮಾಜಿಕ ನೀತಿಗಳನ್ನು ವಿರೋಧಿಸಿದ್ದರು.
ಅಂದಹಾಗೆ ಚೌಧರಿ ಚರಣ್ ಸಿಂಗ್ ಸ್ಮಾರಕವನ್ನು ಕಿಸಾನ್ ಘಾಟ್ ಎಂದು ಕರೆಯಲಾಗುತ್ತದೆ. ಲಕ್ನೊದ ಅಮೌಸಿ ವಿಮಾನ ನಿಲ್ದಾಣವನ್ನು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ.
ಇದು ಕಿಸಾನ್ ದಿವಸ್ ನ ಹಿನ್ನೆಲೆ ಮತ್ತು ಮಹತ್ವ. ದೇಶದ ಬೆನ್ನೆಲುಬು, ರೈತನೇ ದೇಶದ ಆಸ್ತಿ ಅಂತ ಗಂಟೆಗಟ್ಟಲೇ ಭಾಷಣ ಬಿಗಿಯೋ ನಾಯಕರು ಅನ್ನದಾತರನ್ನ ಸದ್ಯ ನಡುರಸ್ತೆಯಲ್ಲಿ ನಿಲ್ಲಿಸಿರೋದು ನಾಚಿಕಗೇಡಿನ ಸಂಗತಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









