ADVERTISEMENT
Thursday, December 18, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ರಾಹುಲ್ ಯಾಕಿಲ್ಲ..?

admin by admin
December 26, 2020
in Newsbeat, Sports, ಕ್ರೀಡೆ
team india saakshatv kl rahul
Share on FacebookShare on TwitterShare on WhatsappShare on Telegram

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ರಾಹುಲ್ ಯಾಕಿಲ್ಲ..?

kl rahul team india saakshatvಕೆ.ಎಲ್. ರಾಹುಲ್..
ಕೆಲವು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟಿಗ ಅನ್ನೋ ಹಣೆಪಟ್ಟಿ ಪಡೆದಿದ್ದ ಆಟಗಾರ. ಆದ್ರೆ ಕ್ರಿಕೆಟ್ ಜಗತ್ತಿನಲ್ಲಿ ಆಗುತ್ತಿದ್ದ ಬದಲಾವಣೆಗೆ ತಕ್ಕಂತೆ ತನ್ನ ಬ್ಯಾಟಿಂಗ್ ಕಲೆಯನ್ನು ಸುಧಾರಿಸಿಕೊಂಡ್ರು. ಪರಿಣಾಮ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಆಧಾರಸ್ತಂಭವಾಗುತ್ತಿರುವ ಕೆ.ಎಲ್. ರಾಹುಲ್ ಅವರ ಕಳೆದ ಎರಡು ವರ್ಷಗಳ ಸಾಧನೆ ಅಪ್ರತಿಮವಾಗಿದೆ. ಕಳೆದ ಐಪಿಎಲ್ ಟೂರ್ನಿಯಲ್ಲೂ ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಯಲ್ಲೂ ಗಮನ ಹರಿಸುವಂತಹ ಸಾಧನೆ ಮಾಡಿದ್ದರು.
ಆದ್ರೆ ಕೆ.ಎಲ್. ರಾಹುಲ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ರೂ 11ರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮೊದಲ ಟೆಸ್ಟ್ ನಲ್ಲಿ ಸ್ಥಾನ ಪಡೆಯದ ರಾಹುಲ್, ಎರಡನೇ ಟೆಸ್ಟ್ ನಲ್ಲಿ ಆಡುತ್ತಾರೆ ಅನ್ನೋ ನಿರೀಕ್ಷೆ ಇತ್ತು.
ಆದ್ರೆ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲೂ ರಾಹುಲ್ ಗೆ ಸ್ಥಾನ ನೀಡಲಾಗಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲ ತಾಣದಲ್ಲಿ ಕಿಡಿ ಕಾರುತ್ತಿದ್ದಾರೆ.
ಅಷ್ಟಕ್ಕೂ ರಾಹುಲ್ ಅವರಿಗೆ 11ರ ಬಳಗದಲ್ಲಿ ಯಾಕೆ ಅವಕಾಶ ನೀಡಲ್ಲ ಅನ್ನೋ ಪ್ರಶ್ನೆಗೆ ಉತ್ತರ ನಿಗೂಢವಾಗಿದೆ. ಒಂದು ಕಡೆ ವಿರಾಟ್ ಕೊಹ್ಲಿ ಅನುಪಸ್ಥಿತಿ ಮತ್ತೊಂದೆಡೆ ಮೊದಲ ಟೆಸ್ಟ್ ಪಂದ್ಯ ಸೋಲು. ಇನ್ನೊಂದೆಡೆ ಸರಣಿಯಲ್ಲಿ ಅಂತರವನ್ನು ಸಮಗೊಳಿಸುವ ಸವಾಲು. ಹೀಗೆ ಟೀಮ್ ಇಂಡಿಯಾ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಕೆ.ಎಲ್. ರಾಹುಲ್ 11ರ ಬಳಗದಲ್ಲಿರಬೇಕಿತ್ತು.
ಆದ್ರೆ ಅವಕಾಶ ನೀಡಿಲ್ಲ. ಯಾಕಂದ್ರೆ ರಾಹುಲ್ ಬದಲು ಇನಿಂಗ್ಸ್ ಆರಂಭಿಸುವುದಾದ್ರೆ ಶುಬ್ಮನ್ ಗಿಲ್ ಅವರನ್ನು ಹೊರಗಿಡಬೇಕಾಗಿತ್ತು. ಒಂದು ವೇಳೆ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವುದಾದ್ರೆ ಹನುಮ ವಿಹಾರಿಗೆ ಚಾನ್ಸ್ ಸಿಕ್ಕಿರಲಿಲ್ಲ. ಇಲ್ಲಿ ಟೀಮ್ ಮ್ಯಾನೇಜ್ ಮೆಂಟ್ ಆರಂಭಿಕನಾಗಿ ಶುಬ್ಮನ್ ಗಿಲ್‍ಗೆ ಚಾನ್ಸ್ ನೀಡಿದ್ರೆ, ಹನುಮ ವಿಹಾರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗಿದೆ.
klrahul team india saakshatvಆದ್ರೂ ಹನುಮ ವಿಹಾರಿ ಬದಲು ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಗೆ ಅವಕಾಶ ನೀಡಬಹುದಿತ್ತು. ಮೊದಲೇ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರರ ಕೊರತೆ ಕಾಡುತ್ತಿದೆ. ಚೇತೇಶ್ವರ ಪೂಜಾರ ಮತ್ತು ನಾಯಕ ರಹಾನೆ ಮಾತ್ರ ನಂಬಿಕಸ್ಥ ಬ್ಯಾಟ್ಸ್ ಮೆನ್ ಗಳು. ಹೀಗಾಗಿ ಅನುಭವಿ ರಾಹುಲ್ ಗೆ ವಿಹಾರಿ ಬದಲು ಅವಕಾಶ ನೀಡಬಹುದಿತ್ತು. ಒಂದು ವೇಳೆ ಹನುಮ ವಿಹಾರಿಯವರನ್ನು ಆಡಿಸಲೇಬೇಕು ಅನ್ನೋದಾದ್ರೆ ವಿಕೆಟ್ ಕೀಪರ್ ರಿಷಬ್ ಪಂತ್ ಬದಲು ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಆಗಿ ರಾಹುಲ್ ಅವರಿಗೆ ಚಾನ್ಸ್ ನೀಡಬಹುದಿತ್ತು.
ಆದ್ರೆ ಕೆ.ಎಲ್. ರಾಹುಲ್ ಅವರನ್ನು ಮೂರು ಮಾದರಿಯಲ್ಲೂ ಕಡೆಗಣಿಸಲಾಗಿದೆ. ಈಗಾಗಲೇ ಕ್ರಿಕೆಟ್ ಪಂಡಿತರು ಕೂಡ ರಾಹುಲ್ ಅವರನ್ನು ಕಡೆಗಣಿಸಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ರಾಹುಲ್ 2018ರ ಆಸೀಸ್ ಸರಣಿಯಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದು ಕಾರಣವಲ್ಲ. ಯಾಕಂದ್ರೆ ರಾಹುಲ್ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಪಕ್ವಗೊಂಡಿದ್ದಾರೆ. ಸದ್ಯ ಅತ್ಯುತ್ತಮ ಫಾರ್ಮ್‍ನಲ್ಲೂ ಕೂಡ ಇದ್ದಾರೆ.
ಒಟ್ಟಿನಲ್ಲಿ ಕೋಚ್ ರವಿಶಾಸ್ತ್ರಿ ಮೈಂಡ್ ನಲ್ಲಿ ಏನಿದೆ ಎಂಬುದೇ ಗೊತ್ತಾಗುತ್ತಿಲ್ಲ. ಮಹತ್ವದ ಪಂದ್ಯದಲ್ಲಿ ರಾಹುಲ್ ನಂತಹ ಅನುಭವಿ ಆಟಗಾರರಿಗೆ ಅವಕಾಶ ನೀಡದಿರುವುದು ಸರಿಯಲ್ಲ.

Related posts

December 17, 2025
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

December 17, 2025
Tags: #saakshatvaustreliaBoxing Day Testhanuma vihariIndian team managementk l rahulpantrahaneravi shasthriShubman Gillteam india
ShareTweetSendShare
Join us on:

Related Posts

by admin
December 17, 2025
0

ಜೀವನದಲ್ಲಿ ಎಲ್ಲಾ ರೀತಿಯ ಯೋಗವನ್ನು ಪಡೆಯಲು ಬಯಸುವವರು ಗುರುವಾರ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಈ ರೀತಿಯಲ್ಲಿ ಗುರು ಪೂಜೆಯನ್ನು ಮಾಡಲು ಪ್ರಯತ್ನಿಸಬೇಕು. ನೀವು ಊಹಿಸಲಾಗದ ಮಟ್ಟದ ಯೋಗವನ್ನು...

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

by admin
December 17, 2025
0

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

by admin
December 17, 2025
0

ಒಬ್ಬ ಅರ್ಚಕರು ದೇವಸ್ಥಾನದಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತಿದ್ದರು, ಮರುದಿನ ವಿಶೇಷ ಮಹಾಪೂಜೆ ಇದ್ದಿದ್ದರಿಂದ ಅದರ ತಯಾರಿಯಲ್ಲಿಯೇ ವ್ಯಸ್ತರಾಗಿದ್ದರು.ಆದರೆ ತುಂಬಾ ತಡವಾಗಿತ್ತು ಹಾಗೂ ಎಂದಿನಂತೆಯೇ ತಮ್ಮ ಮನೆಗೆ ದೇವಸ್ಥಾನದ...

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

by Shwetha
December 17, 2025
0

ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಒಂದು ವಾರ ವಿಸ್ತರಿಸುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್...

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

by Shwetha
December 17, 2025
0

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಎಂಬ ಗುಸುಗುಸು ಮತ್ತು ವಿಪಕ್ಷಗಳ ಟೀಕಾಸ್ತ್ರಗಳ ನಡುವೆಯೇ ವಿಧಾನಸಭೆಯ ಕಲಾಪ ಹೈವೋಲ್ಟೇಜ್ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram