ಏನಾಗಿದೆ ಸಮಾಜಕ್ಕೆ.. ಅತ್ಯಾಚಾರಿಗಳಿಗೆ ನಮ್ಮ ಕಾನೂನಿನ ಭಯ ಯಾಕಿಲ್ಲ.. ಹುಡುಗಿಯರಿಗೆ ಬದುಕುವ ಹಕ್ಕೇ ಇಲ್ವಾ..!
ಸಮಾಜಕ್ಕೆ ಏನಾಗಿದೆ. ನಮ್ಮ ಕಾನೂನು ವ್ಯವಸ್ಥೆ ಅಷ್ಟೊಂದು ದುರ್ಬಲವಾಗಿದ್ಯಾ. ಅಥವ ಎಂಥಹದ್ದೇ ತಪ್ಪು ಮಾಡಿದ್ರೂ ನಮ್ಮ ಕಾನೂನಿನ ವ್ಯವಸ್ಥೆಯಲ್ಲಿ ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಅನ್ನೋ ಯೋಚನೆನಾ. ಅಥವ ಪೊಲೀಸ್ ಇಲಾಖೆ ಮೇಲೆಯೇ ಕಾಮುಕರಿಗೆ ಭಯ ಇಲ್ವಾ… ಹೀಗೆಲ್ಲಾ ಪ್ರಶ್ನೆ ಅನುಮಾನಗಳು ಏಳುವುದಕ್ಕೆ ಕಾರಣೆ.. ಇತ್ತೀಚೆಗೆ ದಿನಕ್ಕೊಂದಾದ್ರು ಬೆಳಕಿಗೆ ಬರುತ್ತಿರುವ ಅತ್ಯಚಾರ ಪ್ರಕರಣಗಳು. ಅದ್ರಲ್ಲೂ ಉತ್ತರಪ್ರದೇಶದಲ್ಲಿ ಮಹಿಳೆಯರಗೆ ಭದ್ರತೆಯೇ ಇಲ್ವಾ. ಹೆಣ್ಮಕ್ಕಳಾಗಿ ಹುಟ್ಟಿರೋದೇ ತಪ್ಪಾ ಅನ್ನಿಸೋದಕ್ಕೆ ಶುರುವಾಗಿದೆ. ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಬಿಹಾರ ಹೆಚ್ಚಾಗಿ ಈ ರಾಜ್ಯಗಳಲ್ಲಿ ಸಾಮೂಹಿಕ ಅತ್ಯಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಎಷ್ಟೇ ಕಠಿಣ ಕಾನೂನಿನ ಕ್ರಮ ಕೈಗೊಂಡ್ರೂ ಸಹ ಯಾಕೆ ಈ ರೀತಿಯಾದ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಯಾಕೆ ಅತ್ಯಚಾರದ ಬಗ್ಗೆ ಯೋಚನೆ ಮಾಡೋಕು ಮುನ್ನ ಕಾಮುಕರ ಮೈ ನಡುಗಲ್ಲ. ಯಾಕೆ ಕಾನೂನಿ ವ್ಯವಸ್ಥೆ ಮೇಲೆ ಭಯ ಹುಟ್ಟಲ್ಲ.. ಯಾಕಂದ್ರೆ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಅನ್ನೋ ಆಲೋಚನೆ..
ಅತ್ತೆ ಮೇಲೆ ಸೊಸೆ ದರ್ಪ : ಪೊರಕೆಯಿಂದ ಹಲ್ಲೆ
ಹೌದು ಈ ವಿಶ್ಲೇಷಣೆ ಕೆಲವೊಬ್ಬರಿಗೆ ಇಷ್ಟ ಆಗದೇ ಇರಬಹುದು. ಆದ್ರೆ ಹತ್ರಾಸ್ ಆಗಿರಬಹುದು ನಿರ್ಭಯಾ ಕೇಸ್ ಆಗಿರಬಹುದು ಇದಕ್ಕೆ ಉದಾಹರಣೆ. ನಿರ್ಭಯಾ ಪ್ರಕರಣ ನಡೆದು ಬರೋಬ್ಬರಿ 8 ವರ್ಷಗಳೇ ಬೇಕಾಯ್ತು ಅತ್ಯಚಾರಿಗಳಿಗೆ ಗಲ್ಲಿಗೇರಿಸಲು. ಈ ಕೇಸ್ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೇಶಾದ್ಯಂತ ಜನರು ಒಗ್ಗೂಡಿ ನಿರ್ಭಯಾಗೆ ನ್ಯಾಯ ಒದಗಿಸಬೇಕೆಂದು ಹೋರಾಡಿ ಉಗ್ರ ಪ್ರತಿಭಟನೆಗಳನ್ನ ನಡೆಸಿದ್ರು. ಆದ್ರೂ 8 ವರ್ಷಗಳೇ ಬೇಕಾಯಿತು ನಿರ್ಭಯಾಗೆ ನ್ಯಾಯ ಸಿಗೋದಕ್ಕೆ. ಅಪರಾಧಿಗಳನ್ನ ಗಲ್ಲಿಗೇರಿಸಿದ ಮೇಲಾದ್ರೂ ಅತ್ಯಚಾರ ಪ್ರಕರಣಗಳ ಸಂಖ್ಯೆ ಕಡೆಮೆಯಾಯ್ತಾ ಇಲ್ಲಾ,, ಇನ್ನೂ ಹೆಚ್ಚಾಗ್ತಾಲೇ ಇದೆ. ಯಾಕೆ ಇಂತಹ ಪ್ರಕರಣಗಳು ಈಗಲೂ ಮರುಕಳಿಸುತ್ತಲೇ ಇದೆ. ಅಪರಾಧ ಸಾಬೀತಾದ ತಕ್ಷಣವೇ ಯಾಕೆ ಅಪರಾಧಿಗಳನ್ನ ಗಲ್ಲಿಗೇರಿಸಲಾಗ್ತಿಲ್ಲ. ಇನ್ನೂ ಹತ್ರಾಸ್ ಕೇಸ್ ನಲ್ಲಿ ಯುವತಿ ಸಾವನಪ್ಪಿದ್ರೂ ಈ ವರೆಗೂ ನ್ಯಾಯ ಸಿಕ್ಕಿಲ್ಲ. ಇನ್ನೂ ಅಮಾನವೀಯತೆ ಎಂದ್ರೆ ಅಲ್ಲಿನ ಪೊಲೀಸರು ಯುವತಿಯ ಶವವನ್ನ ಮನಮೆಯವರಿಗೂ ಗೊತ್ತಾಗದೇ ಸುಟ್ಟುಉಹಾಕಿದ್ದು. ಥೂ ಇದ್ಯಾವ ನ್ಯಾಯ ಸ್ವಾಮಿ.. ಮಹಿಳೆಯರಿಗೆ ರಕ್ಷಣೆಯೇ ಇಲ್ವಾ… ಪೊಲೀಸ್ ಇಲಾಖೆ ಅಷ್ಟೊಂದು ಸ್ಟ್ರಾಂಗ್ ಇಲ್ವಾ… ಸರ್ಕಾರ ಏನೂ ಕ್ರಮಗಳನ್ನ ತೆಗೆದುಕೊಳ್ತಾಯಿಲ್ಲ ಯಾಕೆ..
ಪೊಲೀಸರಿಗೆ ಇಲ್ಲಾ ಸೇಫ್ಟಿ : ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆಯೇ ಅತ್ಯಚಾರ
ನ್ಯಾಯಯುತವಾಗಿ ನೋಡೋದಾದ್ರೆ ಯಾರು ಒಪ್ಪಲಿ ಬಿಡಲಿ ಜನರ ದೃಷ್ಟಿಯಿಂದ ನೋಡೋದಾದ್ರೆ 2019ರ ಹೈದ್ರಾಬಾದ್ ಪ್ರಿಯಾಂಕಾ ರೆಡ್ಡಿ ರೇಪ್ ಕೇಸ್ ನಲ್ಲಿ , ಸಂತ್ರಸ್ತೆಗೆ ನಿಜವಾದ ನ್ಯಾಯ ಸಿಕ್ತು ಅನ್ನೋದು ಜನರ ಅಭಿಪ್ರಾಯ. ಯಾಕಂದ್ರೆ ಸಾಮೂಹಿಕ ಅತ್ಯಚಾರವೆಸಗಿ ವೈದ್ಯೆಯನ್ನ ಸುಟ್ಟುಹಾಕಿದ್ದ ಪಾಪಿಗಳನ್ನ ಎನ್ ಕೌಂಟರ್ ಮಾಡಿ ಕೊಂದು ದೇಶದ ಹೀರೋಗಳು ಎನಿಸಿಕೊಂಡಿದ್ದವರು ಹೈದ್ರಾಬಾದ್ ಪೊಲೀಸರು. ಇದಕ್ಕೆ ಮಾನವ ಹಕ್ಕುಗಳ ಪರ ಹೋರಾಟಗಾರರಿಂದ ವಿರೋಧ ವ್ಯಕ್ತವಾದ್ರೂ ಇಡೀ ದೇಶವೇ ಪೊಲೀಸರ ಕಾರ್ಯವನ್ನ ಕೊಂಡಾಡಿದ್ದು ನಿಜ.
ಇನ್ನೂ ಕೇವಲ ಒಂದೇ ವಾರದ ಅಂತರದಲ್ಲಿ ದೆಹಲಿ, ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ , ಹರಿಯಾಣ ಈ ನೆರೆ ಹೊರ ಭಾಗದಲ್ಲಿ 15 ಕ್ಕೂ ಹೆಚ್ಚು ಅತ್ಯಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಬಿಹಾರದಲ್ಲಿ 15 ವರ್ಷದ ಕಿವುಡು ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಚಾರ, ಮಧ್ಯಪ್ರದೇಶದಲ್ಲಿ 13 ವರ್ಷದ ಬಾಲಕಿಯ ಮೇಲೆ 9 ಮಂದಿಯಿಂದ ಒಂದೇ ವಾರದಲ್ಲಿ 2 ಬಾರಿ ಅತ್ಯಚಾರ, ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅತ್ಯಚಾರ ಹೀಗೆ ಒಂದಾದ ಮೇಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಆದ್ರೆ ಇದಕ್ಕೆಲ್ಲ ಕಡಿವಾಣ ಬೀಳೋದ್ಯಾವಾಗ.
ಒಂದೇ ವಾರದಲ್ಲಿ 2 ಬಾರಿ ‘13ರ ಅಪ್ರಾಪ್ತೆ’ ಮೇಲೆ 9 ಜನರಿಂದ ‘ಗ್ಯಾಂಗ್ ರೇಪ್’
ಇನ್ನೂ ಸೋ ಕಾಲ್ಡ್ ಬುದ್ಧಿ ಜೀವಿಗಳು ಅಂತ ಕರೆಸಿಕೊಳ್ಳೋವರು ಈ ಬಗ್ಗೆ ಕೆಲ ವಿಮರ್ಷೆಗಳನ್ನ ಮಾಡೋದು ನೋಡುದ್ರೆ ಸಿಟ್ಟು ನೆತ್ತಿಗೇರುತ್ತೆ. ಯುವತಿಯರು ಅರೆ ಬರೆ ಬಟ್ಟೆ ಹಾಕೋದು, ಒಂಟಿಯಾಗಿ ಓಡಾಡುವುದು, ಮೈ ತುಂಬ ಬಟ್ಟೆ ಹಾಕದೇ ಇರೋದೆ ಅತ್ಯಾಚಾರಗಳಿಗೆ ಕಾರಣ ಅಂತಾರೆ… ಅರೆ ಬರೆ ಬಟ್ಟೆ ಹಾಕಿದ್ರೇನೆ ಅತ್ಯಚಾರಾ ಆಗೋದಾದ್ರೆ, ಹಾಟ್ ಆಗಿ ಮಾಡ್ರನ್ ಡ್ರೆಸ್ ಹಾಕೋದರಿಂದಲೇ ರೇಪ್ ಆಗೋದಾದ್ರೆ 1 ವರ್ಷದ , 3 ವರ್ಷದ ಕಂದಮ್ಮಗಳಿಗೆ ಅರೆ ಬರೆ ಬಟ್ಟೆ ಹಾಕೋಕೆ ಬರಲ್ಲ. ಮಾಡ್ರನ್ ಆಗಿರೋಕೆ ಬರುತ್ತಾ.. ಏನೂ ಅರಿಯದ ಪುಟ್ಟ ಕಂದಮ್ಮಗಳು, ಮೈತುಂಬ ಬಟ್ಟೆ ತೊಟ್ಟವರ ಮೇಲೆ ಅತ್ಯಚಾರಗಳು ಆಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಗೃಹಿಣಿಯರ ಮೇಲೆ ಅಷ್ಟೇ ಯಾಕೆ 80 ವರ್ಷದ ಇಳಿ ವಯಸ್ಸಿನ ವೃದ್ಧೆಯರ ಮೇಲೂ ಅತ್ಯಚಾರಗಳಾಗ್ತಿವೆ. ಹಾಗಾದ್ರೆ ಅವರು ಸಹ ಮಾಡ್ರನ್ ಆಗೇ ಇರೋದಕ್ಕೆ ಹೀಗಾಗ್ತಾ ಇದ್ಯಾ. ಅತ್ಯಾಚಾರ ಯಾಕ್ ಆಗ್ತಿದೆ. ಅತ್ಯಚಾರಿಗಳ ಮನಸ್ಥಿತಿಯೇ ಹೊಲಸು. ಹಾಕುವ ಬಟ್ಟೆ ಕಾರಣಕ್ಕೆ ಅತ್ಯಚಾರವಾಗಲ್ಲ.. ಅತ್ಯಚಾರಿಗಳ ಕೀಳು ಮನಸ್ಥಿತಿ ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲದೇ ಇರುವ ರೀತಿ ಆಗಿದೆ. ಇದಕ್ಕೆಲ್ಲ ಸರ್ಕಾರವೇ ಕಡಿವಾಣ ಹಾಕಬೇಕು. ಸರ್ಕಾರ ಈ ಬಗ್ಗೆ ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳಬೇಕು. ಕಾಮುಕರು ಅತ್ಯಚಾರದ ಬಗ್ಗೆ ಯೋಚನೆ ಮಾಡುವುದಕ್ಕೂ ಮುನ್ನ ಮೈ ಬೆವರುಕಿತ್ತು ಬರುಯವಷ್ಟು ಭಯಾನಕವಾದ ಶಿಕ್ಷೆ ವಿಧಿಸಬೇಕು.. ನಡುಬೀದಿಯಲ್ಲಿ ಅತ್ಯಚಾರಿಗಳನ್ನ ಗಲ್ಲಿಗೇರಿಸಬೇಕು.
ಹಗಲಲ್ಲೂ ಹುಡುಗಿಯರಿಗೆ ಸೇಫ್ಟಿ ಇಲ್ಲಾ… ಕಾಮುಕರಿಗೆ ಕಾನೂನಿನ ಭಯ ಇಲ್ಲಾ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








