ವಾವ್ಹಾ…! ಆಸ್ಪತ್ರೆ ಮೆನುವಿನಲ್ಲಿ ಚಿಕನ್ ಸಾಂಬಾರ್ : ರೋಗಿಗಳಿಗೆ ಮಾತ್ರ..!
ಹೈದರಾಬಾದ್ : ಆಸ್ಪತ್ರೆ ಊಟ , ರೋಗಿಗಳಿಗೆ ನೀಡುವ ಊಟ ಅಂದ್ರೆ ಹೇಳಿ ಕೇಳಿ ಹೇಗಿರುತ್ತೆ ಎಲ್ರಿಗೂ ಅನುಭವ ಆಗೇ ಆಗಿರುತ್ತೆ. ರುಚಿಯಾದ ಮಸಾಲೆದಾರ್ ಊಟ ಸಿಗೋದು ದೂರದ ಮಾತು, ಸರರಿಯಾಗಿ ಉಪ್ಪು, ಖಾರ , ಹುಳಿ ಇರೋ ಊಟವೂ ರೋಗಿಗಳಿಗೆ ಸಿಗೋದಿಲ್ಲ. ಅಂತ್ರದಲ್ಲಿ ರೋಗಿಗಳಿಗೆ ಆಹಾರದ ಮೆನುನಲ್ಲಿ ಚಿಕನ್ ಸೇರಿಸಿದ್ದಾರೆ ಎಂದರೆ ಆಶ್ಚರ್ಯ ಆಗದೇ ಇರುತ್ತಾ.
ಎಸ್ ಕ್ಷಯ ರೋಗಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಕ್ಷಯ ರೋಗಿಗಳಿಗೆ ಚಿಕನ್ ಸಾಂಬಾರ್ ಅನ್ನು ಒದಗಿಸುತ್ತಿದೆ. ಕ್ಷಯ ರೋಗದಿಂದ ಬಹುಬೇಗನೇ ಗುಣಮುಖರಾಗಲು ಆಸ್ಪತ್ರೆಯ ಮೆನುವಿನಲ್ಲಿ ಚಿಕನ್ ಸಾಂಬರ್ ಸೇರಿಸಿರುವ ಸರ್ಕಾರ, ಅಗತ್ಯವಿರುವ ಪೋಷಕಾಂಶಗಳನ್ನು ರೋಗಿಗಳಿಗೆ ನೀಡಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಹೀಗಾಗಿ ವಾರಕ್ಕೆ (ಬುಧವಾರ) ಒಂದು ಬಾರಿ ಚಿಕನ್ ಸಾಂಬಾರ್ ನೀಡಲಾಗುವುದು. ಉಳಿದಂತೆ ಪ್ರತಿ ದಿನ ಎರಡು ಮೊಟ್ಟೆಗಳನ್ನು ನೀಡಲಾಗುವುದು. ರಾಜ್ಯದಲ್ಲೇ ಮೊದಲ ಬಾರಿಗೆ ಖಮ್ಮಮ್ ಜಿಲ್ಲೆಯಲ್ಲಿರುವ ಕ್ಷಯ ರೋಗ ವಿಭಾಗದಲ್ಲಿ ಈ ಯೋಜನೆಯನ್ನು ಬುಧವಾರ ಆರಂಭಿಸಲಾಗಿದೆ.
ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಸ್ಯಾಲರಿ ಕಟ್..!
ದೆಹಲಿ ರೈತಹೋರಾಟ : ಟೂಲ್ ಕಿಟ್ ಹಂಚಿಕೆ – ಬೆಂಗಳೂರಿನಲ್ಲಿ ಪರಿಸರ ಕಾರ್ಯರ್ತೆಯ ಬಂಧನ
ಮ್ಯಾನ್ಮಾರ್: ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮಿಲಿಟರಿ ಆಡಳಿತ ಎಚ್ಚರಿಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








