ಹಿಜಾಬ್ ಪರ ಗೋಡೆಯ ಮೇಲೆ ಬರಹ
ಉಡುಪಿ: ಪಾಳು ಬಿದ್ದ ಕಟ್ಟಡವೊಂದರ ಗೋಡೆ ಮೇಲೆ ಹಿಜಾಬ್ ಪರವಾಗಿ ಬರಹಗಳನ್ನು ಬರೆದ ಘಟನೆ ಮಲ್ಪೆಯ ಬೈಲಕೆರೆ ಬಳಿ ನಡೆದಿದೆ.
ಹೈಕೋರ್ಟ್ ಮಂಗಳವಾರ ಹಿಜಾಬ್ ವಿವಾದದ ಕುರಿತು ತೀರ್ಪು ನೀಡಿತ್ತು. ತೀರ್ಪಿನ ಬೆನ್ನಲ್ಲೆ ಬೈಲಕೆರೆಯಲ್ಲಿರುವ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಕಂಡು ಬಂದಿರುವ ಬರಹ ಇದಾಗಿದ್ದು, ಸ್ಥಳದಲ್ಲಿ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ವೃತ್ತನಿರೀಕ್ಷಕ ಶರಣಬಸವ ಪಾಟೀಲ ಸ್ಥಳದಿಂದ ವಾಪಸ್ ತೆರಳುವಂತೆ ಹಿಂದೂ ಕಾರ್ಯಕರ್ತರ ಮನವೊಲಿಸಿದರು. ಮಲ್ಪೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








