ಮೈಸೂರು: ಶರನ್ನವರಾತ್ರಿಯ ಕೊನೆಯ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಅರ್ಜುನ ಯುದ್ದಕ್ಕೆ ಹೊರಡುವ ಮುನ್ನ ಬನ್ನಿ ಪೂಜೆ ಸಲ್ಲಿಸುತ್ತಾನೆ. ಅದೇ ಸಂಪ್ರದಾಯವನ್ನ ನಾವು ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಸಾಂಪ್ರಾದಾಯಿಕ ಬನ್ನಿ ಪೂಜೆ ಮಹತ್ವದ ಬಗ್ಗೆ ಮೈಸೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹಾರಾಜ ಯದುವೀರ್, ಶರನ್ನವರಾತ್ರಿಯ ಕೊನೆಯ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಮೊದಲನೆಯ ದಿನ ಕಂಕಣಧಾರೆಯಾಗುತ್ತದೆ. ನಂತರ ಸಿಂಹಾಸನರೋಹಣ ಆಗುತ್ತದೆ. ಆ ಬಳಿಕ 9 ದಿನಗಳ ಕಾಲ ನವಗ್ರಹ ಪೂಜೆ ನಡೆಯುತ್ತದೆ.

ಪ್ರತಿದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ವಿಧಿ-ವಿಧಾನಗಳ ಮೂಲಕ ಪೂಜೆ ನಡೆಯತ್ತದೆ. ಮುಖ್ಯವಾಗಿ ತಿಥಿ ಪ್ರಕಾರ 5 ಅಥವಾ 6ನೇ ದಿನ ಸರಸ್ವತಿ ಪೂಜೆ ನಡೆಯುತ್ತದೆ. ಸಪ್ತಮಿ ದಿನ ಕಾಳಾರಾತ್ರಿ ಆಚರಿಸುತ್ತೇವೆ. ಇದು ದೊಡ್ಡ ಪೂಜೆ ಆಗಿರುತ್ತದೆ ಎಂದರು.ಇನ್ನು, ಲಕ್ಷ್ಮೀ, ಸರಸ್ವತಿ, ಕಾಳಿ ದೇವಿಯರನ್ನು ಬೇರೆ-ಬೇರೆ ರೂಪದಲ್ಲಿ ಪೂಜೆ ಮಾಡುತ್ತೇವೆ. ನವಮಿ ದಿನ ಸಿಂಹಾಸನ ವಿಸರ್ಜನೆ ಮಾಡುತ್ತೇವೆ. ದಸರಾದ ಕೊನೆಯ ದಿನ ವಿಜಯದಶಮಿ ನಡೆಯಲಲಿದ್ದು, ಆ ದಿನವೇ ವಜ್ರಮುಷ್ಠಿ ಕಾಳಗ ನಡೆಯುತ್ತದೆ. ನಮ್ಮ ವಿಜಯ ಯಾತ್ರೆ ಬನ್ನಿ ಪೂಜೆ ಬಗ್ಗೆ ಮಹಾಭಾರತ ತಿಳಿದವರಿಗೆ ಗೊತ್ತಿರುತ್ತದೆ. ಅರ್ಜುನ ಯುದ್ದಕ್ಕೆ ಹೊರಡುವ ಮುನ್ನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಹೋಗುತ್ತಾನೆ. ಅದೇ ರೀತಿ ಸಂಪ್ರದಾಯ ಮುಂದುವರಿದು ಸಮಾಪ್ತಿಯಾಗಿದೆ ಎಂದರು.
ಅರಮನೆಯಲ್ಲಿ ಶರನ್ನವರಾತ್ರಿ ಮುಕ್ತಾಯ
ಶರನ್ನವರಾತ್ರಿಯ 10ನೇ ದಿನ ಮೈಸೂರು ಅರಮನೆಯಲ್ಲಿ ವಿಜಯ ದಶಮಿಯನ್ನು ವಿಜಯಯಾತ್ರೆ ಮೂಲಕ ಯದುವೀರ್ ನೆರವೇರಿಸುವ ಮೂಲಕ 10 ದಿನದ ಶರನ್ನವರಾತ್ರಿ ಮುಕ್ತಾಯವಾಗಿದೆ.

ಬೆಳಗ್ಗೆ 9:30ಕ್ಕೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ ಆನೆ ಬಾಗಿಲಿಗೆ ಬಂದು ಪೂಜೆ ನಡೆಯಿತು. ಬೆಳಗ್ಗೆ 9:45ಕ್ಕೆ ಉತ್ತರ ಪೂಜೆ: ಖಾಸಾ ಆಯುಧಗಳಿಗೆ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ 10:20 ದ 10:40ರವರೆಗೆ ರಾಜ ಆಯುಧಗಳಿಗೆ ಉತ್ತರ ಪೂಜೆ ನಡೆಯಲಿದೆ. ನಂತರ ಭುವನೇಶ್ವರಿ ದೇವಾಲಯದ ಬಳಿ ಆಯುಧಗಳನ್ನು ವಿಜಯ ಯಾತ್ರೆಯ ಮೂಲಕ ತಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜ ಪೋಷಾಕ್ ನಲ್ಲಿ ಶಮಿ ಮರದ ಹತ್ತಿರದ ವಿಜಯಯಾತ್ರೆ ಬಂದು ಶಮಿ ಪೂಜೆ ನೆರವೇರಿಸಿದರು.
ನಂತರ ಶಮಿ ಪೂಜೆ ಮುಗಿದ ನಂತರ ಕನ್ನಡಿ ತೊಟ್ಟಿಯಲ್ಲಿರುವ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಿಜಯ ದಶಮಿ ಆಚರಿಸಿದರು. ಆ ಮೂಲಕ ವಿಜಯ ದಶಮಿ ದಿನ ರಾಜಮನೆತನದಲ್ಲಿ ನಡೆಯುವ ವಿಜಯ ದಶಮಿಯ ಪೂಜಾ ಕಾರ್ಯಕ್ರಮಗಳು ಅಂತ್ಯಗೊಂಡವು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








