ಶಿವಮೊಗ್ಗ : ಯೋಗ ದಿನಾಚರಣೆಗೆ ಅವಧೂತ ವಿನಯ್ ಗುರೂಜಿ ಅವರು ಚಾಲನೆ ನೀಡಿದ ಬಳಿಕ ಯೋಗ ಮನಸ್ಸಿಗೆ ಬಲ ಬರೋ ವಿದ್ಯೆ ಎಂದು ಅಭಿಪ್ರಾಯ ಪಟ್ಟಿದ್ದಾರೆ..
ಯೋಗ ಬಲ ಬರೋ ವಿದ್ಯೆ.. ಅದನ್ನು ಇಡೀ ವಿಶ್ವಕ್ಕೆ ಕೊಟ್ಟಿದ್ದು ಭಾರತ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು. ನಗರದ ನೆಹರು ಸ್ಟೇಡಿಯಂ ನಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭವ್ಯ ಜ್ಞಾನವನ್ನು ಇಡೀ ವಿಶ್ವಕ್ಕೆ ಕೊಡುವ ಮೂಲಕ ಭಾರತ ಇಡೀ ಜಗತ್ತನ್ನು ಬದಲಿಸಲು ಹೊರಟಿದೆ.
ಮನಸ್ಸಿಗೆ ಬಲ ಇಲ್ಲದಾಗ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹಾಗಾಗಿ ಮನುಷ್ಯನ ಮನಸ್ಸಿನ ಬಲ ಬೇಕು ಎಂದರೆ ಯೋಗ ಮಾಡಬೇಕು ಎಂದರು. ಮನುಷ್ಯನ ಆಲೋಚನೆಗಳನ್ನು ಸರಿ ಪಡಿಸಲು ಸಹ ಯೋಗ ಬೇಕು ಎಂದರು.
ನಂತರ ಮಾತನಾಡಿ ಮಾಜಿ ಸಚಿವ ಈಶ್ವರಪ್ಪ, ಇಡೀ ವಿಶ್ವವನ್ನು ಪ್ರಧಾನಿಗಳು ಯೋಗದ ಮೂಲಕ ಸೇರಿಸುವ ಮೂಲಕ ಸಮಾಜವನ್ನು ಜೋಡಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಾಧಕರಾದ ಡಿ.ಎಚ್. ಶಂಕರಮೂರ್ತಿ, ಬಾ.ಮಾ ಶ್ರೀಕಂಠ, ಭಾ.ಸು ಅರವಿಂದ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮೇಯರ್ ಸುನೀತಾ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.








