varun chakravarthy ವರುಣ್ ಚಕ್ರವರ್ತಿ… 2020ರ ಐಪಿಎಲ್ ನಲ್ಲಿ ಬೆಳಕಿಗೆ ಬಂದ ಪ್ರತಿಭೆ. ಹುಟ್ಟೂರು ನಮ್ಮ ಕರ್ನಾಟಕ. ಅದು ಕೂಡ ಬೀದರ್ ಯುವಕ. ಆದ್ರೆ ಬೆಳೆದಿದ್ದು ಎಲ್ಲಾ ತಮಿಳುನಾಡು. ಸದ್ಯ ಐಪಿಎಲ್ ನಲ್ಲಿ ಆಡುತ್ತಿರುವ ತಂಡ ಕೊಲ್ಕತ್ತಾ ನೈಟ್ ರೈಡರ್ಸ್.

ಹೌದು, ಡೆಲ್ಲಿ ವಿರುದ್ಧ ಐದು ವಿಕೆಟ್ ಗಳಿಸಿ ತಂಡದ ಗೆಲುವಿನ ರೂವಾರಿಯಾಗಿದ್ದ ವರುಣ್ ಚಕ್ರವರ್ತಿ ಇದೀಗ ಟೀಮ್ ಇಂಡಿಯಾದ ಟಿ-ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಎಲ್ಲದಕ್ಕೂ ಒಂದು ಸಮಯ ಅಂತ ಇದ್ದೇ ಇರುತ್ತೆ. ಅದಕ್ಕಾಗಿ ಕಾಯಬೇಕು ಅಷ್ಟೇ.. ಸಮಯದ ಹಿಂದೆ ನಾವು ತಿರುಗುತ್ತಲೇ ಇರಬೇಕು. ಇದಕ್ಕೆ ಉತ್ತಮ ನಿದರ್ಶನ ವರುಣ್ ಚಕ್ರವರ್ತಿ. ತನ್ನ 28ರ ಹರೆಯದಲ್ಲಿ ಟೀಮ್ ಇಂಡಿಯಾ ಪ್ರವೇಶಿಸಿದ್ದ ವರುಣ್ ಚಕ್ರವರ್ತಿಗೆ ಇದು ಅನಿರೀಕ್ಷಿತವೂ ಹೌದು.. ಅಚ್ಚರಿಯೂ ಹೌದು.
ಬಹುಶಃ ವರುಣ್ ಚಕ್ರವರ್ತಿ ಕೂಡ ಅಂದುಕೊಂಡಿರಲಿಲ್ಲ. ತಾನು ಟೀಮ್ ಇಂಡಿಯಾದ ಟಿ-ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಅಂತ. ಯಾಕಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಪ್ರವೇಶ ಮಾಡುವುದೇ ದೊಡ್ಡ ಸಾಹಸ. ಸ್ಪರ್ಧಾತ್ಮಕ ದಿನಗಳಲ್ಲಿ ತನಗೆ ಇಂತಹುದ್ದೊಂದು ಅವಕಾಶ ಸಿಗುತ್ತೆ ಅಂತ ವರುಣ್ ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಅಷ್ಟಕ್ಕೂ ಕೆಕೆಆರ್ ಪರ ಆಡಲು ಅವಕಾಶ ಸಿಕ್ಕಿದ್ದೇ ವರುಣ್ ಚಕ್ರವರ್ತಿಗೆ ಅದೃಷ್ಟದಿಂದ.
ಸುನೀಲ್ ನರೇನ್ ಅವರ ಬೌಲಿಂಗ್ ಸಂಶಯಾಸ್ಪದ ರೀತಿಯಲ್ಲಿದೆ ಎಂಬ ಆರೋಪ ಕೇಳಿಬಂದಿತ್ತು. ಆಗ ಕೆಕೆಆರ್ ತಂಡದ 11ರ ಬಳಗದಲ್ಲಿ ವರುಣ್ ಚಕ್ರವರ್ತಿಗೆ ಆಡುವ ಅವಕಾಶ ಸಿಕ್ಕಿತ್ತು.
ಸಿಕ್ಕ ಅವಕಾಶವನ್ನೇ ಸರಿಯಾಗಿಯೇ ಬಳಸಿಕೊಂಡ್ರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್ ಪಡೆದು ಮಿಂಚು ಹರಿಸಿದ್ರು. ಅಲ್ಲದೆ ತನ್ನ ಪ್ರತಿಭೆ ಮತ್ತು ಸಾಮಥ್ರ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದರು.
ಇದು ಒಂದೇ ಸಾಕಿತ್ತು.. ಆಯ್ಕೆಗಾರರ ಗಮನ ಸೆಳೆದ ವರುಣ್ ಈಗ ಆಸ್ಟ್ರೇಲಿಯಾ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾಗುವಂತೆ ಮಾಡಿತ್ತು.
ವರುಣ್ ಚಕ್ರವರ್ತಿ ಮಿಸ್ಟ್ರೀ ಸ್ಪಿನ್ನರ್. ಲೆಗ್ ಸ್ಪಿನ್ನರ್ ಆಗಿದ್ರೂ ಕೂಡ ತನ್ನ ಚಾಣಕ್ಯ ಬೌಲಿಂಗ್ ಮೂಲಕ ಬ್ಯಾಟ್ಸ್ ಮೆನ್ ಗಳನ್ನು ತಬ್ಬಿಬ್ಬುಗೊಳಿಸುವ ತಂತ್ರಗಾರಿಕೆ ವರುಣ್ ಚಕ್ರವರ್ತಿ ಅವರಲ್ಲಿದೆ.
ವಾಸ್ತು ಶಿಲ್ಪ ಇಂಜಿನಿಯರ್ ಪದವೀಧರನಾಗಿರುವ ವರುಣ್ ಚಕ್ರವರ್ತಿ ಮೂಲತಃ ಬೀದರ್ ನವರು. ಆದ್ರೆ ಓದಿದ್ದು ತಮಿಳುನಾಡಿನ ಸೇಂಟ್ ಪಾಟ್ರಿಕ್ ಸ್ಕೂಲ್ ನಲ್ಲಿ. ಎಳವೆಯಿಂದಲೇ ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಹೊಂದಿದ್ದ ವರುಣ್ ಚಕ್ರವರ್ತಿ, ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಆಗಿದ್ದರು.
ಶಾಲಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ರೂ ತಮಿಳುನಾಡು ವಿವಿಧ ವಯೋಮಿತಿ ತಂಡಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ವರುಣ್ ಚಕ್ರವರ್ತಿ ಶಿಕ್ಷಣದತ್ತ ಮುಖ ಮಾಡಿದ್ದರು. ಆದ್ರೆ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡಲಿಲ್ಲ.
ಬಹುಮುಖ ಪ್ರತಿಭೆಯಾಗಿರುವ ವರುಣ್ ಚಕ್ರವರ್ತಿ ಅವರು, ಅದ್ಭುತವಾದ ಚಿತ್ರಗಳನ್ನು ಬಿಡಿಸುತ್ತಿದ್ದರು. ಹಾಗೇ ಗಿಟಾರ್ ಮತ್ತು ಕೊಳಲು ಕೂಡ ನುಡಿಸುತ್ತಾರೆ.
ಕೊಳಲು ವಾ ಹಾಗೇ ಕ್ರಿಯೇಟಿವ್ ಸ್ಕಿಲ್ ಕೂಡ ಹೊಂದಿದ್ದರು. ಅಲ್ಲದೆ ವಾಸ್ತು ಶಿಲ್ಪದಲ್ಲಿ ಪದವಿ ಪಡೆದು ಕೆಲ ಸಮಯ ಕಂಪೆನಿಯೊಂದರಲ್ಲಿ ಉದ್ಯೋಗ ಕೂಡ ಮಾಡಿದ್ದರು.
ಇದನ್ನೂ ಓದಿ : ಐಪಿಎಲ್ 2020- ಸತತ ಐದನೇ ಗೆಲುವು.. ಕಿಂಗ್ಸ್ ಆಸೆ ಇನ್ನೂ ಜೀವಂತ
ಬಳಿಕ ಮತ್ತೆ ಅವರನ್ನು ಕ್ರಿಕೆಟ್ ಸೆಳೆಯಿತ್ತು. 2018ರಲ್ಲಿ ತಮಿಳುನಾಡು ಕ್ರಿಕೆಟ್ ಲೀಗ್ ನಲ್ಲಿ ಆಡುವ ಮೂಲಕ ವರುಣ್ ಚಕ್ರವರ್ತಿ ಮತ್ತೆ ಮುಂಚೂಣಿಗೆ ಬಂದ್ರು. ಆಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿ ಮಾಡಿತ್ತು.
2018ರಲ್ಲಿ ತಮಿಳುನಾಡು ಕ್ರಿಕೆಟ್ ನಲ್ಲಿ ಮತ್ತೆ ಮಿಂಚು ಹರಿಸಿದ್ರು. ನಾಲ್ಕನೇ ಡಿವಿಷನ್ ಆಡುತ್ತಿದ್ದ ವರುಣ್ ಮೊದಲ ಡಿವಿಷನ್ ನಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು. ಅಲ್ಲದೆ ಮಾಜಿ ಲೆಗ್ ಸ್ಪಿನ್ನರ್ ಶಿವರಾಮಕೃಷ್ಣನ್ ಅವರ ಮಾರ್ಗದರ್ಶನವನ್ನು ಕೂಡ ಪಡೆದಿದ್ದರು.
2018-19ರಲ್ಲಿ ತಮಿಳುನಾಡು ರಣಜಿ ತಂಡ ಪ್ರವೇಶಿಸಿದ್ದರು. ಅಲ್ಲದೆ ವಿಜಯ ಹಜಾರೆ ಟ್ರೋಫಿಯಲ್ಲೂ ಆಡಿದ್ದರು. 2020ರಲ್ಲಿ ವರುಣ್ ಚಕ್ರವರ್ತಿ ಅವರು ಕೆಕೆಆರ್ ತಂಡದ ಪಾಲಾದ್ರು. ಇಲ್ಲಿ ದಿನೇಶ್ ಕಾರ್ತಿಕ್ ಸಹಾಯವೂ ಇದೆ.
ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ವರುಣ್ ಚಕ್ರವರ್ತಿಯ ಪ್ರತಿಭೆಯನ್ನು ಗುರುತಿಸಿದ ದಿನೇಶ್ ಕಾರ್ತಿಕ್ ಕೆಕೆಆರ್ ನಲ್ಲಿ ಅವಕಾಶ ನೀಡಿದ್ರು. ಈ ಅವಕಾಶದಿಂದ ಈಗ ವರುಣ್ ಚಕ್ರವರ್ತಿ ಟೀಮ್ ಇಂಡಿಯಾಗೆ ಆಯ್ಕೆಯಾಗುವಂತೆ ಮಾಡಿತ್ತು.
ಇನ್ನು ವರುಣ್ ಚಕ್ರವರ್ತಿ ಅವರು ಸಾಂಪ್ರದಾಯಿಕ ಲೆಗ್ ಸ್ಪಿನ್ನರ್ ಅಲ್ಲ. ಅವರ ಬತ್ತಳಿಕೆಯಲ್ಲಿ ಲೆಗ್ ಬ್ರೇಕ್, ಗೂಗ್ಲಿ, ಆಫ್ ಬ್ರೇಕ್ ಹೀಗೆ ಆರು ಎಸೆತಗಳನ್ನು ವಿಭಿನ್ನ ಮಾದರಿಯಲ್ಲಿ ಎಸೆಯುವ ಸಾಮಥ್ರ್ಯ ಮತ್ತು ನೈಪುಣ್ಯತೆ ಕೂಡ ಇದೆ.
ಒಟ್ಟಿನಲ್ಲಿ ವರುಣ್ ಚಕ್ರವರ್ತಿಯವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯೂ ಅವರ ಮೇಲಿದೆ. ಆಲ್ ದಿ ಬೆಸ್ಟ್ ವರುಣ್ ಚಕ್ರವರ್ತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










