ತುಮಕೂರು : ಚಾಯ್ ವಾಲಾ.. 2013ರ ಲೋಕಸಭಾ ಚುನಾವಣಾ ವೇಳೆ ಭಾರಿ ಸದ್ದು ಮಾಡಿತ್ತು. ಚಿಕ್ಕವರಿದ್ದಾಗ ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಯ್ ವಾಲಾ ಆಗಿದ್ರು ಅಂತಾ ಬಿಜೆಪಿ ಪಡೆ ಪ್ರಚಾರ ಮಾಡಿತ್ತು.
ಇದೀಗ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಕೂಡ ತಮ್ಮ ಕಾರ್ಯಕರ್ತರಿಗಾಗಿ ಚಾಯ್ ವಾಲಾ ಆಗಿದ್ದಾರೆ. ಶಿರಾ ಕ್ಷೇತ್ರದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಶಾಸಕ ಜಮೀರ್ ಅಹಮದ್ ಬಿಸಿ ಬಿಸಿ ಚಹ ಮಾಡಿದ್ದಾರೆ.
ಇದನ್ನೂ ಓದಿ : ನೀವು ಸರಿ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ : ಕಾಂಗ್ರೆಸ್ ಗೆ ಮುನಿರತ್ನ ಟಾಂಗ್
ಶಿರಾ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗೆಲುವಿಗಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ.
ಮತದಾರರ ಮನಸ್ಸು ಗೆಲ್ಲಲು ರಾಜಕೀಯ ನಾಯಕರು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ಅದರಂತೆ ಇಂದು ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಪರ ಜಮೀರ್ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮತ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ನಾಯಕರ ಈ ರೋಡ್ ಶೋನಲ್ಲಿ ನೂರಾರು ಕಾರ್ಯರ್ಕರು ಪ್ರಚಾರ ಭಾಗಿಯಾಗಿದ್ದಾರೆ.
ಮೆರವಣಿಗೆಯಲ್ಲಿ ಅಭ್ಯರ್ಥಿ ಹಾಗೂ ಪಕ್ಷದ ಪರ ಘೋಷಣೆ ಕೂಗುತ್ತಾ, ಧಣಿದಿದ್ದ ಕಾರ್ಯಕರ್ತರಿಗೆ ಜಮೀರ್ ಚಹ ಮಾಡಿಕೊಟ್ಟಿದ್ದಾರೆ. ಶಾಸಕರ ಕೈಯಿಂದಲೇ ಮಾಡಿದ ಟೀ ಕುಡಿದ ಕಾರ್ಯಕರ್ತರು ಫುಲ್ ಖುಷ್ ಆಗಿದ್ದಾರೆ.
ಈ ಹಿಂದೆ 2018 ಮಾರ್ಚ್ ತಿಂಗಳಿನಲ್ಲಿ ಜಮೀರ್ ಇದೇ ರೀತಿ ಮೈಸೂರಿನಲ್ಲಿ ರಸ್ತೆ ಬದಿಯ ಹೋಟೆಲ್ ಗೆ ಭೇಟಿ ನೀಡಿದ್ರು. ಆಗ ಅಲ್ಲಿದ್ದ ಕೈ ಮುಖಂಡರಿಗೆ ಚಾಯ್ ಮಾಡಿದ್ದ ಜಮೀರ್, ಹೋಟೆಲ್ ಮಾಲೀಕರಿಗೆ ಹಣ ಸಹಾಯ ಮಾಡಿದ್ದರು.
ಇದನ್ನೂ ಓದಿ : ನೂರಕ್ಕೆ ನೂರರಷ್ಟು ಗೆದ್ದ ತಕ್ಷಣ ಮುನಿರತ್ನ ಮಿನಿಸ್ಟರ್ : ಸಿಎಂ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel