ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ , ಸೇನಾ ಸರ್ಕಾರ: ಹೇಗಾಯ್ತು ,ಯಾಕಾಯ್ತು : ಸಂಪೂರ್ಣ ಮಾಹಿತಿ..!
ಇತ್ತೀಚೆಗೆ ಮ್ಯಾನ್ಮಾರ್ ನಲ್ಲಿ ಅನಿರೀಕ್ಷಿತ ಬೆಳವಣಿಗೆಯಾಗಿದ್ದು, ಇಡೀ ವಿಶ್ವಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ರಾಜಕೀಯ ಬಿಕ್ಕಟ್ಟಿನಿಂದಾಗಿ ಅಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಜೊತೆಗೆ 1 ವರ್ಷದ ವರೆಗೂ ತುರ್ತು ಪರಿಸ್ಥಿತಿಯನ್ನ ಘೋಷಣೆ ಮಾಡಲಾಗಿದೆ. ಏಕಾಏಕಿ ಸೇನಾ ಆಡಳಿತ ಮ್ಯಾನ್ಮಾರ್ ನಲ್ಲಿ ಅಧಿಪತ್ಯ ಸಾಧಿಸಿದೆ. ಹರಿಯ ರಾಜಕೀಯ ನಾಯಕರನ್ನ ಸೇನೆ ಬಂಧಿಸಿದೆ.
ಹಾಗಾದ್ರೆ ಈ ರಾಜಕಕೀಯ ಬಿಕ್ಕಟ್ಟು ಹೇಗೆ ಸೃಷ್ಟಿಯಾಯ್ತು.. ಯಾಕಾಯ್ತು… ಇದರ ಹಿಂದಿನ ಕಾರಣಗಳೇನು ಇದರ ಸಂಪೂರ್ಣ ಮಾಹಿತಿ, ಹಿನ್ನೆಲೆ , ಪರಿಣಾಮಗಳು, ಮುಂದೇನಾಗಬಹುದು ಅನ್ನೋದನ್ನ ತಿಳಿಯೋಣ.
ಇತಿಹಾಸ
ಮೊದಲಿಗೆ ಇದರ ಹಿನ್ನೆಲೆ ತಳಹದಿಯನ್ನ ನೋಡೋದಾದ್ರೆ, ಮೊದಲು ಮ್ಯಾನ್ಮಾರ್ ಅನ್ನ ಬರ್ಮಾ ಅಂತ ಕರೆಯಲಾಗ್ತಾಯಿತ್ತು. ಏಷ್ಯಾದ ರಾಷ್ಟ್ರ ಮ್ಯಾನ್ಮಾರ್. ಏಷ್ಯಾದ 10 ನೇ ಅತಿ ದೊಡ್ಡ ದೇಶ ಮ್ಯಾನ್ಮಾರ್. ಭಾರತ , ಬಾಂಗ್ಲಾದೇಶ, ಚೈನಾ, ಲಾವೋಸ್, ಥೈಲ್ಯಾಂಡ್ ಜೊತೆ ಮ್ಯಾನ್ಮಾರ್ ಗಡಿ ಹಂಚಿಕೊಂಡಿದೆ. ಭಾರತದಲ್ಲಿ ಮಿಜೋರಾಮ್, ಮಣಿಪುರ್, ನಾಗಾಲ್ಯಾಂಡ್, ಅರುಣಾಚಲಪ್ರದೇಶದ ಜೊತೆಗೆ ಗಡಿ ಹಂಚಿಕೊಂಡಿದೆ.
1948 ರಲ್ಲಿ ಮ್ಯಾನ್ಮಾರ್ ಬ್ರಿಟನ್ ನಿಂದ ಸ್ವತಂತ್ರಗೊಂಡಿತ್ತು. ಆಗಿನಿಂದ ಆಗಿನ ವರೆಗೂ ಈ ದೇಶದಲ್ಲಿ ರಾಜಕೀಯ ಅಸ್ಥಿರತೆ ತುಂಬಾನೆ ಹೆಚ್ಚಿದೆ. ರಾಜಕೀಯ ಬಿಕ್ಕಟ್ಟು ಇಲ್ಲಿ ಇದ್ದೇ ಇದೆ. ಇನ್ನೂ ಸ್ವತಂತ್ರದ ನಂತರದಿಂದ ಇಲ್ಲಿಯವರೆಗೂ 3 ಬಾರಿ ಸಂವಿಧಾನ ಬದಲಾಗಿದೆ.
ಇನ್ನೂ ಇತ್ತೀಚೆಗೆ ಬದಲಾಗಿರುವ ಅಂದ್ರೆ 2008ರ ಸೆಪ್ಟೆಂಬರ್ ನಲ್ಲಿ ಪಬ್ಲಿಶ್ ಮಾಡಲಾದ ಸಂವಿಧಾನ ತರಲಾಗಿತ್ತು. ಅದಕ್ಕೂ ಮುನ್ನ ಅಂದ್ರೆ ಹೊಸ ಸಂವಿಧಾನ ಜಾರಿಗೆ ತರೋ ಮುನ್ನ ಮ್ಯಾನ್ಮಾರ್ ನ ಮಿಲಿಟರಿ ಪಡೆಯ ನಾಯಕರು ರೆಫರೆಂಡಮ್ ಒಂದನ್ನ ಹೊರೆಡಿಸಿದ್ರು. ರೆಫರೆಂಡಮ್ ಅಂದ್ರೆ ಆ ದೇಶದ ಜನರು ಯಾವುದೇ ಒಂದು ನಿರ್ದಾರಕ್ಕೆ ಹೌದು ಅಥವ ಇಲ್ಲ ಎಂದು ಉತ್ತರಿಸಬೇಕಾಗುತ್ತೆ. ಹೀಗೆ ಅಲ್ಲಿನ ಜನರಿಂದ ಮತದಾನ ಮಾಡಲಾಗಿತ್ತು. ಆ ಸಂವಿದಾನದಲ್ಲಿ ಒಂದು ಆರ್ಟಿಕಲ್ ಹೀಗಿತ್ತು. ಆರ್ಟಿಕಲ್ 417. ಇದರ ಅನ್ವಯ ಮಿಲಿಟರಿ ಪಡೆ ಸಮಯ ಬಂದಾಗ, ತುರ್ತು ಪರಿಸ್ಥಿತಿಗಳು, ಅನಿವಾರ್ಯತೆ ಎದುರಾದಾಗ ಅಧಿಕಾರವನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದಾಗಿದೆ.
ಇನ್ನೂ ಮ್ಯಾನ್ಮಾರ್ ನಲ್ಲಿ ಪ್ರಮುಖ ರಾಜಕೀಯ ಪಕ್ಷಗಳನ್ನ ನೋಡೋದಾದ್ರೆ…
ಮೊದಲನೇಯದ್ದು ‘ನ್ಯಾಷನಲ್ ಲೀಗ್ ಆಫ್ ಡೆಮಾಕ್ರೆಸಿ’, 2ನೇಯದ್ದು ಯೂನಿಯನ್ ಸಾಲಿಡೆರಿಟಿ ಅಂಡ್ ಡೆವಲೋಪ್ ಮೆಂಟ್ ಪಾರ್ಟಿ.
ಇತ್ತೀನ ಬೆಳವಣಿಗೆಗಳ ಬಗ್ಗೆ ಮಾತನಾಡೋದಾದ್ರೆ…
2020ರ ನವೆಂಬರ್ ನಲ್ಲಿ ಇಲ್ಲಿ ಚುನಾವಣೆ ನಡೆದಿತ್ತು. ಆದ್ರೆ ಕೊರೊನಾ ಬಿಕ್ಕಟ್ಟಿನಿಂದಾಗಿ ಚುನಾವಣಾ ಪ್ರಕ್ರಿಯೆಗಳು ತಡವಾಗುತ್ತಾ ಹೋಯ್ತು. ಈ ವೇಳೆ NLD ನಾಯಕಿ ಅಂಗ್ ಸಾನ್ ಸೂ ಕಾಯಿ ಅವರ ನೇತೃತ್ವದಲ್ಲಿ ಪಕ್ಷ ಗೆಲುವನ್ನ ಸಾಧಿಸಿತ್ತು. ಇದಕ್ಕೂ ಮುನ್ನ 2015ರಲ್ಲಿ ನಡೆದಿದ್ದ ಚುನಾವಣೆಗಿಂತಲೂ 80 ಪರ್ಸೆಂಟ್ ಅಧಿಕ ಮತಗಳಿಂದ ಜಯಗಳಿಸಿದ್ದರು. ಆದ್ರೆ ಈ ವಿಜಯದ ಬಳಿಕ ಅಲ್ಲಿನ ಮಿಲಿಟರಿ ಪಾರ್ಟಿ ಅಂದ್ರೆ USDP ಪಾರ್ಟಿ ಏನಿದೆ ಅದು ಮತದಾನ ಅಂದ್ರೆ ಮತಗಳು, ಗೆಲುವನ್ನ ಫ್ರಾಡ್ ಅಂದ್ರೆ ವಂಚನೆಯಿಂದ ಜಯಗಳಿಸಿದ್ದಾಗಿ ಆರೋಪಿಸುತು. ಮತ್ತೆ ಮ್ಯಾನ್ಮಾರ್ ನ ಅಧಿಕಾರ ಪಡೆಯಲು ಮೋಸದಿಂದ ಗೆದ್ದಿದೆ ಎಂದು ಆರೋಪಿಸಿತು. ಇದೇ ಸಂದರ್ಭದಲ್ಲಿ ಅಲ್ಲಿನ ಮಿಲಿಟರಿ ಪಡೆಗಳು ಈ USPDಗೆ ಬೆಂಬಲ ಸೂಚಿಸಿದವು. ಅಂದ್ರೆ ಮೂಲಗಳ ಪ್ರಕಾರ ಅಲ್ಲಿನ ಮಿಲಿಟರಿ ಪಡೆಗಳು, ಮೊದಲಿನಿಂದಲೂ USDPಗೆ ಬೆಂಬಲ ನೀಡ್ತಿದ್ವು ಎಂದು ಹೇಳಲಾಗುತ್ತೆ.
USDP ಆರೋಪಗಳನ್ನ ನೋಡೋದಾದ್ರೆ…
USDP ಆರೊಪದ ಪ್ರಕಾರ ಚುನಾವಣೆಯಲ್ಲಿ ಬರೋಬ್ಬರಿ 10.5 ಮಿಲಿಯನ್ ಮತಗಳೇನಿದೆ. ಅವು ಶಂಕಿತ ಮತಗಳೆಂದು ಇದೇ USDP ಪ್ರಕಟಿಸಿತ್ತು. ವರದಿ ರಲೀಸ್ ಮಾಡಿತ್ತು. ಆದ್ರೆ ಈ ಆರೋಪಗಳನ್ನೆಲ್ಲಾ ಚುನಾವಣಾ ಆಯೋಗ ಸಂಪೂರ್ಣವಾಗಿ ನಿರಾಕರಿಸಿತ್ತು.
ಮಿಲಿಟರಿ ಅಧಿಪತ್ಯ
ತಳ್ಳಿ ಹಾಕಿತ್ತು. ಇಷ್ಟಾದ್ರೂ ಸಹ ಅಲ್ಲಿನ ಮಿಲಿಟರಿ ಪಡೆಯ ಮುಖೇನ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯ್ತು. ಇದೇ ಸಂದರ್ಭದಲ್ಲಿ 2008ರಲ್ಲಿ ಜಾರಿಗೆ ತರಲಾದ ಆರ್ಟಿಕಲ್ 417 ರ ಅನ್ವಯ ಸೇನೆ ಸರ್ಕಾರವನ್ನ ಹಿಡಿತಕ್ಕೆ ತೆಗೆದುಕೊಳ್ತು. ಇದಾದ ತಕ್ಷಣವೇ ಅಲ್ಲಿನ ರಾಜಕೀಯ ಮುಖಂಡರು, NLD ನಾಯಕರನ್ನ ಅಧಿಕಾರದಿಂದ ಕಿತ್ತು ಹಾಕಲಾಯ್ತು. ಅವರನ್ನೆಲ್ಲಾ ಬಂಧಿಸಲಾಯ್ತು. ಅಷ್ಟೇ ಅಲ್ಲ ಟಿಲಿಕಮ್ಯುನಿಕೇಷನ್ಸ್ ಅನ್ನ ಸಹ ಸ್ಥಗಿತಗೊಳಿಸಲಾಯ್ತು. ಜೊತೆಗೆ ಮುಖ್ಯವಾಗಿ ಫೇಸ್ ಬುಕ್ ಅನ್ನ ಬಂದ್ ಮಾಡಲಾಯ್ತು. ಇಂಟರ್ ನೆಟ್ ಸೇವೆಯನ್ನೂ ಸಹ ಸ್ಥಗಿತಗೊಳಿಸಲಾಯ್ತು. ಇನ್ನೂ ದೊಡ್ಡ ದೊಡ್ಡ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳನ್ನೂ ಸಹ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಅಲ್ದೇ ಮಿಲಿಟರಿ ಪಡೆಗಳು ಅಲ್ಲಿನ ಸರ್ಕಾರಿ ಕಚೇರಿಗಳು ಕಟ್ಟಡಗಳನ್ನ ಹಿಡಿತಕ್ಕೆ ತೆಗೆದುಕೊಂಡಿವೆ. ಈ ಸಂದರ್ಭದಲ್ಲಿ ಅಲ್ಲಿನ ಮಾನವ ಹಕ್ಕುಗಳ ಹೋರಾಟಗಾರರು , ಮಾಧ್ಯಮದವರು, ಸಾಮಾನ್ಯ ಜನರು ಸಹ ಭಯದಲ್ಲಿ ಬದುವಂತಹ ವಾತಾವರಣ ಸೃಷ್ಟಿಯಾಗಿದೆ. ಹೀಗೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಫೆಬ್ರವರಿ 1ಕ್ಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಈಗ ಮ್ಯಾನ್ಮಾರ್ ನಲ್ಲಿ ಸಂಪೂರ್ಣ ಸೇನಾ ಸರ್ಕಾರ ಆಡಳಿತವನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮಸಿ ಬಳೆಯುವ ಷಡ್ಯಂತ್ರ – ಗ್ರೇಟಾ ಥನ್ ಬರ್ಗ್ ಟ್ವೀಟ್: ಟೂಲ್ ಕಿಟ್ ವಿರುದ್ಧ FIR
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








