ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಧೋನಿಯ ಸ್ಮೈಲ್.. ಎಲ್ಲವನ್ನೂ ಮರೆ ಮಾಚುವಂತೆ ಮಾಡುತ್ತೆ…!

admin by admin
November 2, 2020
in IPL 2020, Newsbeat, ಕ್ರೀಡೆ
mahendra singh dhoni saakshatv csk ipl 2020
Share on FacebookShare on TwitterShare on WhatsappShare on Telegram

Related posts

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

December 14, 2025
ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

December 14, 2025

ಧೋನಿಯ ಸ್ಮೈಲ್.. ಎಲ್ಲವನ್ನೂ ಮರೆ ಮಾಚುವಂತೆ ಮಾಡುತ್ತೆ…!

mahendra singh dhoni csk ipl 2020 saakshatvಮಹೇಂದ್ರ ಸಿಂಗ್ ಧೋನಿ..!
ಈ ಒಂದು ಹೆಸರು ಸಾಕು.. ಆಧುನಿಕ ಕ್ರಿಕೆಟ್ ಜಗತ್ತು ಒಂದು ಕ್ಷಣ ಹುಬ್ಬೇರಿಸುವಂತೆ ಮಾಡುತ್ತದೆ.
ಮಹೇಂದ್ರ ಸಿಂಗ್ ಧೋನಿಯ ಸ್ಮೈಲ್.. !
ಎಮ್.ಎಸ್. ಧೋನಿಯ ಮುಖದಲ್ಲಿ ಅರಳುವ ನಗು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
ಪಂದ್ಯ ಸೋಲಲಿ.. ಗೆಲ್ಲಲಿ.. ಮುಖದಲ್ಲಿ ಮಾತ್ರ ಮಂದಹಾಸವಿದ್ದೇ ಇರುತ್ತೆ. ಇದು ಧೋನಿ ತನ್ನ ವೃತ್ತಿ ಬದುಕಿನಲ್ಲಿ ಮೈಗೂಡಿಸಿಕೊಂಡು ಬಂದಿರುವ ತತ್ವ ಸಿದ್ಧಾಂತ.
ಮಹೇಂದ್ರ ಸಿಂಗ್ ಧೋನಿ ತಾಳ್ಮೆ..!
ಒಬ್ಬ ಕ್ರಿಕೆಟಿಗನಾಗಿ, ನಾಯಕನಾಗಿ ಮಹೇಂದ್ರ ಸಿಂಗ್ ತಾಳ್ಮೆಯನ್ನು ಕಳೆದುಕೊಂಡಿರುವುದು ತೀರಾ ಕಮ್ಮಿ. ಒಂದು ವೇಳೆ ಗೇಮ್ ಪ್ಲಾನ್ ವರ್ಕ್ ಔಟ್ ಆಗದೇ ಇದ್ದಾಗ ಅಥವಾ ಸಹ ಆಟಗಾರ ತನ್ನ ಮಾತನ್ನು ಕೇಳದೇ ಇದ್ದಾಗ ಧೋನಿ ಸಿಡಿಮಿಡಿಗೊಂಡಿದ್ದೂ ಇದೆ. ಆದ್ರೆ ಅದು ಆ ಕ್ಷಣ ಮಾತ್ರ.. ಮತ್ತೆ ಎಲ್ಲವನ್ನೂ ಮರೆತುಬಿಡುತ್ತಾರೆ. ಹೀಗಾಗಿಯೇ ಧೋನಿ ಸಹ ಆಟಗಾರರ ಪಾಲಿನ ನೆಚ್ಚಿನ ನಾಯಕನಾಗಿದ್ದು.
ಎಮ್.ಎಸ್.ಡಿ ಕೂಲ್ ಕ್ಯಾಪ್ಟನ್..!
ಹೌದು, ಎಮ್. ಎಸ್. ಧೋನಿ ಕೂಲ್ ಕ್ಯಾಪ್ಟನ್. ಎಂಥ ಒತ್ತಡವಿರಲಿ, ಮೈದಾನದಲ್ಲಿ ಮತ್ತು ಡ್ರೆಸಿಂಗ್ ರೂಮ್ ನಲ್ಲಿ ಅದನ್ನು ನಿಭಾಯಿಸುವ ಚಾಕಚಕ್ಯತೆ ಅವರಲ್ಲಿದೆ. ತಾಳ್ಮೆ, ಬುದ್ಧಿವಂತಿಕೆಯಿಂದಲೇ ತಂಡವನ್ನು ಮುನ್ನಡೆಸುವ ರೀತಿಗೆ ಧೋನಿಗೆ ಒಲಿದು ಬಂದಿರುವ ಹೆಗ್ಗಳಿಕೆಯೇ ಕೂಲ್ ಕ್ಯಾಪ್ಟನ್.
ಮಹೇಂದ್ರ ಸಿಂಗ್ ಧೋನಿ ಗ್ಯಾಂಬ್ಲರ್..!
ms dhoni csk ipl 2020 saakshatvಎದುರಾಳಿ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಗ್ಯಾಂಬ್ಲರ್. ಯಾವಾಗ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅನ್ನೋದು ಯಾರಿಗೂ ಗೊತ್ತಾಗುವುದೇ ಇಲ್ಲ. ಪಿಚ್‍ನ ಮರ್ಮಾ ಮತ್ತು ಬ್ಯಾಟ್ಸ್ ಮೆನ್ ಗಳ ಮನಸ್ಥಿತಿ.. ಬೌಲರ್ ಗಳ ತಂತ್ರಗಾರಿಕೆಯಲ್ಲಿ ಎಮ್.ಎಸ್. ಧೋನಿ ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.
ಆದ್ರೆ ಧೋನಿ ಪರ್ವ ಈಗ ಮುಗಿಯುತ್ತಾ ಬಂದಿದೆ. 2019ರ ವಿಶ್ವಕಪ್ ಟೂರ್ನಿಯ ಬಳಿಕ ಸುಮಾರು ಒಂದು ವರ್ಷಗಳ ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ನಿಗೂಢವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿದ್ದ ಧೋನಿ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿಯ ಶಾಕ್ ನೀಡಿದ್ದರು.
ಇದಕ್ಕೆ ಕಾರಣವೂ ಇದೆ. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಧೋನಿಗೆ ಒಂದು ಅರ್ಥಪೂರ್ಣ ವಿದಾಯ ಸಿಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು.
ಆದ್ರೆ ಧೋನಿ ಅಂತಹ ಅವಕಾಶವನ್ನೇ ನೀಡಲಿಲ್ಲ. ಕೋವಿಡ್ ಸೋಂಕು ಅವರ ವಿದಾಯದ ಪಂದ್ಯಕ್ಕೆ ಅಡ್ಡಿಯನ್ನುಂಟು ಮಾಡಿತ್ತು. ಟಿ-ಟ್ವೆಂಟಿ ವಿಶ್ವಕಪ್ ಆಡುವ ಮನಸ್ಸಿದ್ರೂ ಕೂಡ ಅದಕ್ಕೆ ಕಾಲ ಕೂಡಿ ಬರಲಿಲ್ಲ. ಹೀಗಾಗಿ ಧೋನಿ ಸಡನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.
ಇನ್ನು ಧೋನಿ ಐಪಿಎಲ್ ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಐಪಿಎಲ್ ಗೂ ವಿದಾಯ ಹೇಳ್ತಾರೆ ಅಂತ ಅಂದುಕೊಂಡಿದ್ದರು.
dhoni msd saakshatv csk ipl 2020ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿದೆ.
ಮೂರು ಬಾರಿ ಚಾಂಪಿಯನ್ ಆಗಿದ್ದ ಸಿಎಸ್ ಕೆ ತಂಡ 2020ರ ಐಪಿಎಲ್ ನಲ್ಲಿ ಏಳನೇ ಸ್ಥಾನಪಡೆದುಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್ ಕೆ ಈ ಮಟ್ಟದ ನೀರಸ ಪ್ರದರ್ಶನ ನೀಡಿದ್ದು ಇದೇ ಮೊದಲ ಬಾರಿ.
ಈ ನಡುವೆ ಧೋನಿ ಕೆಲವೊಂದು ಪಂದ್ಯಗಳಲ್ಲಿ ತಮ್ಮ ಜೆರ್ಸಿಗಳನ್ನು ಪ್ರೀತಿಯಿಂದ ಕೇಳಿದ ಆಟಗಾರರಿಗೆ ಉಡುಗೊರೆಯಾಗಿ ನೀಡಿದ್ದರು.
ಆಗ ಬಹುತೇಕ ಮಂದಿ ಧೋನಿ ಕೊನೆಯ ಐಪಿಎಲ್ ಪಂದ್ಯ ಅಂತಲೇ ಭಾವಿಸಿದ್ದರು.
ಆದ್ರೆ ಧೋನಿ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಎಲ್ಲರೂ ಅಂದುಕೊಂಡಿದ್ದರು ಇದು ನನ್ನ ಕೊನೆಯ ಐಪಿಎಲ್ ಟೂರ್ನಿ ಅಂತ. ಆದ್ರೆ ನಾನು ಮುಂದಿನ ಐಪಿಎಲ್ ನಲ್ಲೂ ಭಾಗಿಯಾಗುತ್ತೇನೆ ಅಂತ ಹೇಳುವ ಮೂಲಕ ಧೋನಿ ಮತ್ತೆ ಅಭಿಮಾನಿಗಳಿಗೆ ತನ್ನ ಬ್ಯಾಟಿಂಗ್ ಮತ್ತು ನಾಯಕನ ನೈಪುಣ್ಯತೆಯನ್ನು ತೋರಿಸಲು ಮುಂದಾಗಿದ್ದಾರೆ.
ಹಾಗೇ ನೋಡಿದ್ರೆ ಧೋನಿ ಗೂ ಸಿಎಸ್ ಕೆ ತಂಡದ ಈ ವರ್ಷದ ಪ್ರದರ್ಶನ ಬೇಸರವನ್ನುಂಟು ಮಾಡಿದೆ. ಬ್ಯಾಟಿಂಗ್ ನಲ್ಲೂ ಧೋನಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ.
ಅದು ಅಲ್ಲದೆ ಸಿಎಸ್ ಕೆ ತಂಡಕ್ಕೆ ಹೊಸ ಸ್ವರೂಪವನ್ನು ನೀಡಿ ನಾಯಕತ್ವದಿಂದ ಕೆಳಗಿಳಿಯುವ ಜವಾಬ್ದಾರಿ ಕೂಡ ಅವರ ಮೇಲಿದೆ.
mahendra singh dhoni csk ipl 2020 saakshatvಕಳೆದ 10-11 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಧೋನಿ ಅಷ್ಟೊಂದು ಸುಲಭವಾಗಿ ತಂಡವನ್ನು ಬಿಡಲು ಸಿದ್ಧರಿಲ್ಲ.
2021ರ ಐಪಿಎಲ್ ಗೆ ಹೊಸ ತಂಡವನ್ನು ಕಟ್ಟಿ ಅದಕ್ಕೊಂದು ಭದ್ರ ಅಡಿಪಾಯ ಹಾಕಿಕೊಂಡುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ ಎಂಬುದನ್ನು ಅವರು ಕೂಡ ಮರೆತಿಲ್ಲ.
ಈಗಾಗಲೇ ಮುಂದಿನ ಐಪಿಎಲ್ ಗೆ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂಬ ಸುಳಿವನ್ನು ಕೂಡ ನೀಡಿದ್ದಾರೆ.
ಹೀಗಾಗಿ ಧೋನಿ ಮುಂದಿನ ಐಪಿಎಲ್ ನಲ್ಲಿ ಆಡುವುದು ಖಚಿತ. ಆದ್ರೆ 2021ರ ಐಪಿಎಲ್ ಎಲ್ಲಿ ನಡೆಯುತ್ತೆ ಅನ್ನೋದು ಇನ್ನೂ ಗೊತ್ತಿಲ್ಲ. ಇದೇ ವೇಳೆ ಪಂದ್ಯ ನೋಡಲು ಪ್ರೇಕ್ಷಕರು ಇರುತ್ತಾರೋ ಇಲ್ಲವೋ ಎಂಬುದು ಸಹ ಗೊತ್ತಾಗುತ್ತಿಲ್ಲ.
ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ಅರ್ಥಪೂರ್ಣ ವಿದಾಯ ಹೇಳ್ತಾರೆ ಎಂಬುದು ಅಷ್ಟೇ ಸತ್ಯ.

Tags: #saakshatvchennai super kingscskcsk fanscsk fans clubCSK jerseysIPL 2020ipl 2021M.S Dhoni
ShareTweetSendShare
Join us on:

Related Posts

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

by Shwetha
December 14, 2025
0

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರು ಎಂದೇ ಕೀರ್ತಿ ಗಳಿಸಿದ್ದ, ರಾಜ್ಯದ ಹಿರಿಯ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು...

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

by admin
December 14, 2025
0

2025 ಭಾರತ - ಪಾಕ್ ನಡುವಿನ ಪುರುಷರ t-20 ಏಷ್ಯಾಕಪ್ ಕ್ರಿಕೆಟ್ ಟೂರ್ನಿ - ನೋ ಹ್ಯಾಂಡ್ ಶೇಕ್..! 2025 ಭಾರತ - ಪಾಕ್ ನಡುವಿನ ಮಹಿಳಾ...

ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

by admin
December 14, 2025
0

ಹನುಮಂತನ ನೆಚ್ಚಿನ 3 ರಾಶಿಚಕ್ರ ಚಿಹ್ನೆಗಳು ಹನುಮಂತ ಎಂದಾಗ ರಾಮಾಯಣ ನೆನಪಾಗುತ್ತದೆ. ಹನುಮಂತನು ರಾಮನಿಗೆ ಯುದ್ಧವನ್ನು ಗೆಲ್ಲಲು ಸಹಾಯ ಮಾಡಿದನು. ಆ ಈಶ್ವರನ ನ ಅಂಶವೇ ಈ...

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

by Shwetha
December 14, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ (Power Sharing) ವಿಚಾರವಾಗಿ ಎದ್ದಿರುವ ಗೊಂದಲದ ಅಲೆಗಳು ಇನ್ನೂ ತಣ್ಣಗಾಗಿಲ್ಲ. ಹೈಕಮಾಂಡ್ ಎಷ್ಟೇ ಖಡಕ್...

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

by Shwetha
December 14, 2025
0

ಬೆಳಗಾವಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸಚಿವರು ಕೇವಲ ರಾಜಧಾನಿ ಬೆಂಗಳೂರು ಮತ್ತು ತಮ್ಮ ಸ್ವಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇಂತಹ ಸಂಪುಟ ಸದಸ್ಯರನ್ನು ಇಟ್ಟುಕೊಂಡು ಸಮಗ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram