ಮೈಸೂರು: ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿದ್ದರೂ ಮೈಸೂರು ದಸರಾ ಆಚರಣೆಗೆ 15 ಕೋಟಿ ಬಿಡುಗಡೆ ಮಾಡಿತ್ತು. ನಿನ್ನೆ ನಡೆದ ವಿಜಯದಶಮಿ ಜಂಬೂ ಸವಾರಿ ವೇಳೆ 100ಕ್ಕೂ ಹೆಚ್ಚು ಮಂದಿ ಮಾತ್ರ ಗಣ್ಯರು ಪಾಲ್ಗೊಂಡಿದ್ದರೆ, ಎರಡು ಸ್ತಬ್ದ ಚಿತ್ರಗಳು ಮಾತ್ರ ಪಾಲ್ಗೊಂಡಿದ್ದವು. ಯುವ ದಸರಾ ಸೇರಿದಂತೆ ಯಾವುದೇ ಜನರು ಸೇರುವ ಯಾವುದೇ ಕಾರ್ಯಕ್ರಮಗಳನ್ನು ಮಾಡಿಲ್ಲ. ಆದರೂ ರಾಜ್ಯ ಸರ್ಕಾರ ದಸರಾ ಆಚರಣೆಗೆ 15 ಕೋಟಿ ಬಿಡುಗಡೆ ಮಾಡಿತ್ತು. ಯಾವುದೇ ಅದ್ದೂರಿತನ ಇಲ್ಲದೆ ಜಂಬೂ ಸವಾರಿ ಮೆರವಣಿಗೆ ಸರಳವಾಗಿ ಕೊನೆಗೊಂಡಿದ್ದರೂ 15 ಕೋಟಿ ಎಲ್ಲಿ ಹೋಯಿತು ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.
ನ.1ಕ್ಕೆ ಪಿನ್ಟುಪಿನ್ ಲೆಕ್ಕ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಈ ಬಾರಿ ಮೈಸೂರು ದಸರಾ ಆಚರಣೆಗೆ ಒಟ್ಟು 15 ಕೋಟಿ ಅನುದಾನ ಬಂದಿತ್ತು. ಅದರಲ್ಲಿ ಎಷ್ಟು ಖರ್ಚಾಗಿದೆ ಎನ್ನುವ ಲೆಕ್ಕವನ್ನು ನವೆಂಬರ್ 1ರಂದು ಕೊಡುತ್ತೇನೆ ಎಂದು ತಿಳಿಸಿದರು.
ನವೆಂಬರ್ ಒಂದರ ವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ದಸರಾ ದೀಪಾಲಂಕಾರ ಉಳಿಯಲಿದೆ. ಕೊರೊನಾ ವಾರಿಯರ್ಸ್ ನಿಂದ ದಸರಾ ಉದ್ಘಾಟನೆಯಾಗಿದ್ದು ಐತಿಹಾಸಿಕ ಸಂಗತಿ. ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆಯ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿವೆ. ಶಾಸಕರಾದ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಎಲ್ಲರೂ ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿಗಳು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಿಗೆ ಶುಭ ಸಂದೇಶ ನೀಡಿದ್ದಾರೆ. ದಸರಾ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಸಚಿವ ಸೋಮಶೇಖರ್ ಹೇಳಿದ್ದಾರೆ.
ಸಿದ್ದರಾಮಯ್ಯ ಧಮ್ ಏನು ಅಂತ ನಮ್ಗೂ ಗೊತ್ತಿದೆ..!
ಧಮ್ ಇದ್ರೆ ಅಸೆಂಬ್ಲಿ ಕರೆಯಲಿ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲಿಗೆ ತಿರುಗೇಟು ನೀಡಿರುವ ಸಚಿವ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯನವ್ರ ಧಮ್ ಏನು ಅಂತ ಹತ್ತಿರದಿಂದ ನೋಡಿದ್ದೇನೆ. ಯಾವ ರೀತಿ ಧಮ್ ಇದೆ ಅಂತ ಐದು ವರ್ಷ ಅವರ ಜೊತೆಯಲ್ಲಿದ್ದೇ ನೋಡಿದ್ದೇನೆ.
ಹೊರಗೆ ಏನು ಮಾತನಾಡ್ತಾರೆ, ಸದನ ಒಳಗೆ ಏನು ಮಾತನಾಡ್ತಾರೆ ಅಂತ ಎಲ್ಲಾ ಚೆನ್ನಾಗಿ ಗೊತ್ತು ಎಂದು
ಟಾಂಗ್ ನೀಡಿದರು.
ಸಿದ್ದರಾಮಯ್ಯನವ್ರ ಆಟ ಏನು ನಡೆಯಲ್ಲ. ಜನಪರ ಕಾಳಜಿ ಇದ್ರೆ ಅಧಿವೇಶನ ಕರೆದಾಗ ವ್ಯಾಲಬಲ್ ಟೈಂ ಬಿಟ್ಟು ಬಾಯ್ಕಾಟ್ ಮಾಡ್ತಾರೆ. ಬಾಯ್ಕಟ್ ಮಾಡೋಕೆ ಅಸೆಂಬ್ಲಿಯಲ್ಲಿ ಕೂರ್ತಾರ. ನಮ್ ಧಮ್ ನೀವ್ಯಾಕೆ ಚೆಕ್ ಮಾಡ್ತೀರ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.
ರಿಲ್ಯಾಕ್ಸ್ ಗೆ ಜಾರಿದ ದಸರಾ ಆನೆಗಳು
ಜಂಬೂಸವಾರಿ ಯಶಸ್ವಿಯಾಗಿ ಮುನ್ನಡೆಸಿದ ಕ್ಯಾಪ್ಟನ್ ಅಭಿಮನ್ಯು ಬಣ್ಣ, ಆಭರಣ ಕಳಚಿ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾನೆ. ಅಭಿಮನ್ಯು ಜನೆತೆ ಹೆಜ್ಜೆ ಹಾಕಿ ಜಂಬೂ ಸವಾರಿ ಯಶಸ್ವಿಯಾಗಲು ಸಾಥ್ ನೀಡಿದ ಐದು ಆನೆಗಳು ಅರಮನೆ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಹೀಗಾಗಿ ಮಾವುತರು, ಕಾವಾಡಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೊರೊನಾ ಮಧ್ಯೆ ಜಂಬೂಸವಾರಿ ನಿರ್ವಿಘ್ನವಾಗಿ ಮುಗಿದಿದ್ದಕ್ಕೆ ಅರಮನೆಯ ಆನೆ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾವುತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel