Shabarimale
ಕೊರೊನಾ ಸಂಕಷ್ಟದ ನಡುವೆ ಸ್ವಾಮಿ ಅಯ್ಯಪ್ಪನ ದರ್ಶಕ್ಕಾಗಿ ಶಬರಿಮಲೈಗೆ ತೆರುಳುವ ಭಕ್ತರು ಯಾತ್ರಿಗಳಿಗಾಗಿ ಕೇರಳ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ಮಾರ್ಗಸೂಚಿಯ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಕೇರಳದ ಐತಿಹಾಸಿಕ ಶ್ರೀ ಶಬರಿಮಲೈ ಸನ್ನಿಧಾನದಲ್ಲಿ ಜರುಗಲಿರುವ 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ವರ್ಷದ ಕಾರ್ಯಕ್ರಮಕ್ಕೆ ತೆರಳುವ ಭಕ್ತಾದಿಗಳಿಗಾಗಿ ಬಿಡಗುಗಡೆ ಮಾಡಲಾಗಿರುವ ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ.
ಸಾಲು ಸಾಲು ಸೋಲುಗಳಿಂದ ಬೇಸತ್ತ ‘ರಾಗಾ’ ಮರಳು ದಿಬ್ಬಕ್ಕೆ ಪಯಣ..!
- ಭಕ್ತರು ಅಯ್ಯಪ್ಪನ ದೇಗುಲಕ್ಕೆ ಬರುವ ಮುನ್ನ https://sabarimalaonline.org ವೆಬ್ಸೈಟ್ ನ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರಬೇಕು.
- ವೆಬ್ ಪೋರ್ಟ್ ನಲ್ಲಿ ಅನುಮತಿ ಸಿಕ್ಕರೆ ಮಾತ್ರ ಶಬರಿಮಲೈ ದರ್ಶನಕ್ಕೆ ಅವಕಾಶ.
- ಹತ್ತು ವರ್ಷಗಳ ಒಳಪಟ್ಟು ಮತ್ತು 60-65 ವರ್ಷಗಳಿಗೆ ಮೇಲ್ಪಟ್ಟವರಿಗೆ ಹಾಗೂ ಅನಾರೋಗ್ಯದ ಅಥವ ಕಾಯಿಲೆಗಳ ಲಕ್ಷಣವಿರುವವರಿಗೆ ಅನುಮತಿ ಇರುವುದಿಲ್ಲ.
- ಪ್ರತಿದಿನ ಕೇವಲ 1 ಸಾವಿರ ಜನರಿಗೆ ಮಾತ್ರ ಅವಕಾಶ.
- ವಾರದ ಅಂತ್ಯದಲ್ಲಿ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ.
- ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ.
- ದೇಗುಲಕ್ಕೆ ಪ್ರವೇಶಿಸುವುದಕ್ಕೂ 48 ಗಂಟೆ ಅವಧಿಯ ಮೊದಲು ಕೋವಿಡ್-19 ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ.
- ಪ್ರವೇಶ ಸ್ಥಳದಲ್ಲಿ ಪ್ರತಿ ಜನಕ ಪರೀಕ್ಷೆಗೆ ಅವಕಾಶ, ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕು.
- ಬಿ.ಪಿ.ಎಲ್. ಕಾರ್ಡ್, ಆಯುಷ್ಮಾನ್ ಕಾರ್ಡ್ ಹಾಗೂ ಇತ್ಯಾದಿ ಕಾರ್ಡ್ ಹೊಂದಿರುವವರು ಯಾತ್ರೆಗೆ ತೆರಳುವ ಸಮಯದಲ್ಲಿ ಅದನ್ನು ತಮ್ಮ ಬಳಿ ಹೊಂದಿರಬೇಕು.
- ತುಪ್ಪದ ಅಭಿಷೇಕ, ಪಂಪಾನದಿ ಸ್ನಾನ, ಸನ್ನಿದಾನಂನಲ್ಲಿ ರಾತ್ರಿ ತಂಗುವುದು ಹಾಗೂ ಪಂಪಾ ಮತ್ತು ಗಣಪತಿ ಕೋವಿಲ್ಗೆ ಅವಕಾಶವಿರುವುದಿಲ್ಲ.
- ಯಾತ್ರಾರ್ಥಿಗಳಿಗೆ ಪ್ರಯಾಣಕ್ಕೆ ಎರುಮೆಲು ಮತ್ತು ವೇದಸಾರಿಕ್ಕರ ಮಾರ್ಗದಲ್ಲಿ ಮಾತ್ರ ಅವಕಾಶವಿರುತ್ತದೆ.
Shabarimale
ಪಟಾಕಿ ಬ್ಯಾನ್ : ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel