ಕೋಟಿಗೊಬ್ಬ 3 ಸಕ್ಸಸ್ ಮೀಟ್ – ಬಾವುಕರಾದ ಸೂರಪ್ಪಬಾಬು, ಅರ್ಜುನ್ ಜನ್ಯ
ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ. ಚಿತ್ರ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ…ಇದೇ ಖುಷಿಯಲ್ಲಿ ಚಿತ್ರತಂಡ ಶನಿವಾರ ಸಕ್ಸಸ್ ಮೀಟ್ ಆಯೋಜಿಸಿತ್ತು.
ಈ ವೇಳೆ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಸುದೀಪ್ ನನ್ನ ಪಾಲಿನ ಗುರು ಎಂದು ಹೇಳಿಕೊಂಡರು. “ಈ ಸಿನಿಮಾ ನೋಡಿದಾಗಲೆಲ್ಲ ನನಗೆ ನನ್ನ ಅಣ್ಣ ನೆನಪಾಗುತ್ತಾರೆ…ಈ ಚಿತ್ರದ ಬ್ಯಾಗ್ರೌಂಡ್ ಮ್ಯೂಸಿಕ್ ಮಾಡುವಾಗ ನಾನು ನನ್ನಅಣ್ಣನನ್ನ ಕಳೆದುಕೊಂಡೆ’’ ಎಂದು ಬಾವುಕರಾದರು. “ಆ ಸಂದರ್ಭದಲ್ಲಿ ಸುದೀಪ್ ಧೈರ್ಯ ನೀಡಿ ಶಕ್ತಿ ತುಂಬಿದರು.
ಸುಮಾರು ಹತ್ತು ವರ್ಷಗಳಿಂದ ನಾನು ಸುದೀಪರನ್ನ ಹತ್ತಿರದಿಂದ ನೋಡಿದ್ದೇನೆ ಅವರು ಎಷ್ಟು ಹೋರಾಡಿದ್ದಾರೆ ಎಂಬುದು ನನಗೆ ಗೊತ್ತು. ಕೆಲಸವೇ ಮೊದಲು ಮಿಕ್ಕಿದ್ದೆಲ್ಲ ನಂತರ…ಇದನ್ನ ನನಗೆ ಹೇಳಿಕೊಟ್ಟಿದ್ದೆ ನನ್ನ ಗುರು ಸುದೀಪ್” ಎಂದು ಹೇಳಿದರು.
ಚಿತ್ರ ಬಿಡುಗಡೆಯ ಸಮಯದಲ್ಲಿ ಆದ ಅಡೆತಡೆಯಿಂದ ಕೋಟಿಗೊಬ್ಬ ಚಿತ್ರ ಒಂದು ದಿನತಡವಾಗಿ ಬಿಡುಗಡೆಯಾಗಿತ್ತು.ಸಾಕಷ್ಟು ತೊಂದರೆಗಳನ್ನ ಎದುರಿಸಿಯು ಚಿತ್ರ ಚೆನ್ನಾಗಿ ಓಡುತ್ತಿರುವುದು ಸೂರಪ್ಪ ಬಾಬು ಅವರ ಖುಷಿಗೆ ಕಾರಣವಾಗಿತ್ತು ಮತ್ತು ವೇದಿಕಲ್ಲಿ ಮಾತನಾಡುವಾಗ ಸುದೀಪ್ ಚಿತ್ರ ಬಿಡುಗಡೆಗೆ ಸಹಕರಿಸಿದ್ದನ್ನ ಹೇಳುತ್ತ ನಿಜವಾದ ಕೋಟಿಗೊಬ್ಬ ಎಂದು ಭಾವುಕರಾದರು..
ಸಮಾರಂಭದಲ್ಲಿ ಚಿತ್ರನಟಿ ಮಡೋನಾ ಸೆಬಾಸ್ಟೀನ್, ಚಿತ್ರನಟ ಉಪೇಂದ್ರ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು…