ADVERTISEMENT
Tuesday, June 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬ್ಯಾಂಕ್ ಆಫ್ ಇಂಡಿಯಾದ ಲಾಕರ್ ನಲ್ಲಿದೆ 2011ರ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯದ ಚೆಂಡು..!

admin by admin
April 2, 2021
in Newsbeat, Sports, ಕ್ರೀಡೆ
mahendra singh dhoni saakshatv team india
Share on FacebookShare on TwitterShare on WhatsappShare on Telegram

Related posts

ವೈಭವ್‌ ಸೂರ್ಯವಂಶಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬಗು.. ವಿಶ್ವ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದ್ದಾನೆ ಬಾಲ ಸೂರ್ಯ..!

June 22, 2026
rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

June 22, 2026

ಬ್ಯಾಂಕ್ ಆಫ್ ಇಂಡಿಯಾದ ಲಾಕರ್ ನಲ್ಲಿದೆ 2011ರ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯದ ಚೆಂಡು..!

2011ರ ವಿಶ್ವಕಪ್ ಫೈನಲ್ ಪಂದ್ಯದ ಚೆಂಡು ಎಲ್ಲಿದೆ ಗೊತ್ತಾ ?

ಗೆಲುವಿನ ರನ್ ಗಾಗಿ ಸಿಕ್ಸರ್ ಬಾರಿಸಿದ್ದ ಆ ಚೆಂಡು ಧೋನಿ ಕೈಗೆ ಯಾವಾಗ ಸೇರುತ್ತೆ ?

2011 World Cup-winning ball and Praveen Shinde

mahendra singh dhoni team india saakshatvಏಪ್ರಿಲ್ 2, 2011.. ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ದಿನ. ಶ್ರೀಲಂಕಾ ವಿರುದ್ಧದ ಫೈನಲ್ ನಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿ 28 ವರ್ಷಗಳ ಬರವನ್ನು ನೀಗಿಸಿದ ಕ್ಷಣ. ನುವಾನ್ ಕುಲಸೇಕರ ಅವರ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಅವಿಸ್ಮರಣೀಯ ಘಟನೆ. ತೀಕ್ಷ್ಣ ಕಣ್ಣಿನ ನೋಟದೊಂದಿಗೆ ಚೆಂಡನ್ನು ದಿಟ್ಟಿಸಿ ನೋಡುತ್ತಾ, ಬ್ಯಾಟ್ ಅನ್ನು ಗದೆಯನ್ನು ತಿರುಗಿಸುತ್ತಾ ಚಂಗನೇ ವಿಕೆಟ್ ಕಿತ್ತುಕೊಂಡು ಧೋನಿ ಗೆಲುವನ್ನು ಸಂಭ್ರಮಿಸಿದ ಕ್ಷಣವನ್ನು ಎಂದಾದ್ರೂ ಮರೆಯುವುದುಂಟೆ..
ಅಬ್ಬಾ.. ಮಹೇಂದ್ರ ಸಿಂಗ್ ಧೋನಿಯವರ ಆ ಮಹೋನ್ನತ ಇನಿಂಗ್ಸ್ ಅನ್ನು ನೆನಪಿಸಿಕೊಂಡಾಗ ಇಂದಿಗೂ ರಪ್ಪನೆ ಒಂದು ಕ್ಷಣ ಹಾದು ಹೋಗುತ್ತೆ ಆ ಸಿಕ್ಸರ್.
ಹೌದು, ಸರಿಯಾಗಿ 10 ವರ್ಷಗಳ ಹಿಂದೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿಸಿತ್ತು. 1983ರಲ್ಲಿ ಕಪಿಲ್ ಡೆವಿಲ್ಸ್ ಮಾಡಿದ್ದ ಸಾಧನೆಯನ್ನು ಧೋನಿ ಹುಡುಗರು 28 ವರ್ಷಗಳ ಬಳಿಕ ಕ್ರಿಕೆಟ್ ಅಭಿಮಾನಿಗಳು ಕುಣಿದಾಡುವಂತೆ ಮಾಡಿದ್ದರು.
ಈ ವಿಶ್ವಕಪ್ ಗೆಲುವನ್ನು ಪ್ರತಿ ವರ್ಷ ನೆನಪಿಸಿಕೊಂಡು ಗತಕಾಲದ ವೈಭವವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಕ್ರಿಕೆಟಿಗರು.
mahendra singh dhoni team india saakshatv yuvaraj singhಅಚ್ಚರಿಯಂದ್ರೆ ಅವತ್ತು ಧೋನಿ ಸಿಕ್ಸರ್ ಬಾರಿಸಿದ್ದ ಚೆಂಡು, ವಿಶ್ವ ಕಪ್ ಫೈನಲ್ ಪಂದ್ಯದ ಚೆಂಡು ಯಾರ ಬಳಿ ಇದೆ, ಎಲ್ಲಿಗೆ ಹೋಯ್ತು ಎಂಬುದು ಯಾರಿಗೂ ಗೊತ್ತೆ ಇಲ್ಲ. ಈ ಚೆಂಡಿನ ಹುಡುಕಾಟವನ್ನು ಮುಂಬೈ ಕ್ರಿಕೆಟ್ ಸಂಸ್ಥೆಯು ಮಾಡಿತ್ತು. ಆದ್ರೆ ಪ್ರಯೋಜನವಾಗಿಲ್ಲ. ಅದು ಧೋನಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಹಾಗಿದ್ರೆ ಆ ಚೆಂಡು ಎಲ್ಲಿದೆ, ಯಾರ ಬಳಿ ಇದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಬಾರಿಸುತ್ತಿದ್ದಂತೆ ವಾಂಖೇಡೆ ಮೈದಾನದಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಆಟಗಾರರು ಮೈದಾನಕ್ಕೆ ಓಡೋಡಿ ಬಂದು ಸಂಭ್ರಮಾಚರಣೆಯಲ್ಲಿ ಮುಳುಗಿ ಹೊಗಿದ್ದರು. ಟೀಮ್ ಇಂಡಿಯಾ ಆಟಗಾರರು ಗೆಲುವಿನ ಆಮಲಿನಲ್ಲಿ ತಮ್ಮನ್ನು ತಾವೇ ಮರೆತು ಹೋಗಿದ್ದರು. ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದರು.
ಆದ್ರೆ ಧೋನಿ ಸಿಕ್ಸರ್ ಬಾರಿಸಿದ್ದ ಚೆಂಡು ಡ್ರೆಸಿಂಗ್ ರೂಮ್ ಬಳಿಯ ಪೆವಿಲಿಯನ್ ಸೇರಿಕೊಂಡಿತ್ತು. ಎಲ್ಲರೂ ಖುಷಿಯಲ್ಲಿ ತೇಲಾಡುತ್ತಿದ್ರೆ ಅಲ್ಲಿದ್ದ ಒಬ್ರೂ ಮಾತ್ರ ಈ ಚೆಂಡಿನ ಮಹತ್ವ ಏನು ಎಂಬುದನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡಿದ್ದರು. ತಡ ಮಾಡದೇ ಚೆಂಡನ್ನು ತನ್ನ ಪಾಕೆಟ್ ನೊಳಗೆ ಹಾಕಿಕೊಂಡು ಸೈಲೆಂಟ್ ಆಗಿಯೇ ಧೋನಿಯ ಬಳಿ ಆಟೋಗ್ರಾಫ್ ಸಹಿ ಮಾಡಿಕೊಂಡಿದ್ದರು. ಬಳಿಕ ಈ ಚೆಂಡನ್ನು ನಾನು ನಿಮಗೆ ಕೊಡುತ್ತೇನೆ. ಆದ್ರೆ ಈಗಲ್ಲ. ನೀವು ನಿವೃತ್ತಿಯಾದ ಬಳಿಕ ಅಂತ ಮಾತು ಕೂಡ ಕೊಟ್ಟಿದ್ದರು.
ಆ ನಂತರ ಆ ಚೆಂಡಿಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಸಾಕಷ್ಟು ಶೋಧ ಕಾರ್ಯ ಕೂಡ ನಡೆಸಿತ್ತು. ನಂತರ ವಿಚಾರ ಕೂಡ ಗೊತ್ತಾಗಿ ಹೋಯ್ತು.
praveen shinde mumbai saakshatvಅಂದ ಹಾಗೇ ಆ ಚೆಂಡನ್ನು ಪಡೆದುಕೊಂಡು ಧೋನಿ ಸಹಿ ಮಾಡಿಕೊಂಡವರು ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಪ್ರವೀಣ್ ಶಿಂಧೆ. ಪ್ರವೀಣ್ ಶಿಂಧೆ ಅವರು ಮಾಜಿ ಅಂಪೈರ್ ಕೂಡ.
ಈ ಚೆಂಡು ಪ್ರವೀಣ್ ಶಿಂಧೆ ಕೈಯಲ್ಲಿದೆ ಅಂತ ಗೊತ್ತಾಗುತ್ತಿದ್ದಂತೆ ಈ ಅಮೂಲ್ಯವಾದ ಚೆಂಡನ್ನು ಪಡೆಯಲು ಸಾಕಷ್ಟು ಜನ ಮುಂದೆ ಬಂದಿದ್ದರು. ಕೆಲವರು ದುಡ್ಡು ಕೊಟ್ಟು ಖರೀದಿಸಲು ಕೂಡ ಮುಂದಾಗಿದ್ದರು.
ಹೌದು, ತುಂಬಾ ಜನ ದುಡ್ಡು ಕೊಡುತ್ತೇನೆ ಆ ಚೆಂಡನ್ನು ಕೊಡಿ ಅಂತ ನನ್ನ ಬಳಿ ಕೇಳಿಕೊಂಡಿದ್ದರು. ಆದ್ರೆ ನನಗೆ ದುಡ್ಡಿನ ಅವಶ್ಯಕತೆ ಇರಲಿಲ್ಲ. ದುಡ್ಡಿಗಾಗಿ ನಾನು ಈ ಅಮೂಲ್ಯವಾದ ಚೆಂಡನ್ನು ಕೊಡಲ್ಲ. ನಾನು ಧೋನಿಗೆ ಮಾತುಕೊಟ್ಟಿದ್ದೇನೆ. ನಿವೃತ್ತಿಯಾದ ನಂತರ ಈ ಚೆಂಡನ್ನು ನಿಮಗೆ ಕೊಡುತ್ತೇನೆ ಎಂದು. ನಾನು ಆ ಚೆಂಡನ್ನು ಭದ್ರವಾಗಿಟ್ಟುಕೊಂಡಿದ್ದೇನೆ ಅಂತಾರೆ ಪ್ರವೀಣ್ ಶಿಂಧೆ.
ಆ ಚೆಂಡಿಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಸಾಕಷ್ಟು ಶೋಧ ಕಾರ್ಯ ನಡೆಸಿತ್ತು. ಕೊನೆಗೆ ನಾನು ಮುಂಬೈ ಅಂಪೈರ್ ಮಾರ್ಕಸ್ ಕೌಟೊ ಬಳಿ ಹೇಳಿದ್ದೆ. ಆದ್ರೆ ನಾನು ಆ ಚೆಂಡನ್ನು ಕೊಡುವುದಿಲ್ಲ. ಧೋನಿಗೆ ಕೊಡುತ್ತೇನೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಶಿಂಧೆ.
ಪ್ರವೀಣ್ ಶಿಂಧೆ ಅವರು ಬ್ಯಾಂಕ್ ಆಫ್ ಇಂಡಿಯಾದಲ್ಲಿ 1979ರಿಂದ 2019ರ ತನಕ ಸೇವೆ ಸಲ್ಲಿಸಿದ್ದರು. ಅಂದ ಹಾಗೇ ಶಿಂಧೆ ಅವರು 2011ರ ವಿಶ್ವಕಪ್ ತಂಡದ ಎಲ್ಲಾ ಆಟಗಾರರ ಆಟೋಗ್ರಾಫ್ ಅನ್ನು ಪಡೆದುಕೊಂಡಿದ್ದಾರೆ. ಹಾಗೇ ಪಂದ್ಯದ ವೇಳೆ, ಐಪಿಎಲ್ ವೇಳೆ ಆಟಗಾರರ ಸಹಿ ಪಡೆದುಕೊಳ್ಳುವುದು ಪ್ರವೀಣ್ ಶಿಂಧೆ ಅವರ ಹವ್ಯಾಸ. ಆದ್ರೆ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಅವರ ಆಟೋಗ್ರಾಫ್ ಅನ್ನು ಮಾತ್ರ ಪಡೆದುಕೊಂಡಿಲ್ಲ. ಅದಕ್ಕೆ ಕಾರಣವೂ ಇದೆ. ಈ ಬಗ್ಗೆ ಪ್ರವೀಣ್ ಶಿಂಧೆ ಹೇಳುವುದು ಹೀಗೆ.. ಅದು 2012. mahendra singh dhoni team india saakshatv yuvaraj singh ನಾನು ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಬಳಿ ಆಟೋಗ್ರಾಫ್ ಸಹಿ ಕೇಳಿದ್ದೆ. ಅವರು ನನ್ನ ಗುರುತಿಸಿದ್ದರು. ಯಾಕಂದ್ರೆ ಮುಂಬೈ ಕ್ರಿಕೆಟ್ ನಲ್ಲಿ ನನಗೆ ಅವರು ಚಿರಪರಿಚಿತರು. ಆದ್ರೆ ಅವರಿಬ್ಬರು ನನಗೆ ಅವಮಾನ ಮಾಡಿದ್ದರು. ನೀವು ಹಿರಿಯ ಅಂಪೈರ್. ಸರ್ ನಿಮಗೆ ಕಾಲ್ ಮಾಡುತ್ತೇವೆ. ಯಾವಾಗ ಆಟೋಗ್ರಾಫ್ ತೆಗೆದುಕೊಳ್ಳಬೇಕು ಎಂದು. ಇದು ನನಗೆ ಮುಜುಗರವಾಯ್ತು. ಆ ನಂತರ ನಾನು ಅವರ ಬಳಿ ಆಟೋಗ್ರಾಫ್ ಕೇಳಿಲ್ಲ ಎಂದು ತುಸು ಬೇಸರದಿಂದ ಹೇಳಿಕೊಳ್ಳುತ್ತಾರೆ ಶಿಂಧೆ.
ಒಟ್ಟಿನಲ್ಲಿ ಧೋನಿ ವಿಶ್ವಕಪ್ ಫೈನಲ್ ನಲ್ಲಿ ಸಿಡಿಸಿದ್ದ ಸಿಕ್ಸರ್ ಚೆಂಡು ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಉದ್ಯೋಗಿಯ ಲಾಕರ್ ನಲ್ಲಿ ಭದ್ರವಾಗಿದೆ.

Tags: #saakshatv2011 World Cup2011 world cup final match ballM.S DhoniMahendra Singh DhoniNuwan KulsekaraPraveen ShindeSachin TendulkarSri Lankateam indiaYuvaraj Singh
ShareTweetSendShare
Join us on:

Related Posts

ವೈಭವ್‌ ಸೂರ್ಯವಂಶಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬಗು.. ವಿಶ್ವ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದ್ದಾನೆ ಬಾಲ ಸೂರ್ಯ..!

by admin
June 22, 2026
0

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬ..! ಎಂಥವರನ್ನು ನಿಬ್ಬೆರಾಗಿಸುವಂತಹ ಸ್ಫೋಟಕ ಬ್ಯಾಟಿಂಗ್..!ಮೈದಾನದ ಮೂಲೆಮೂಲೆಗಳಲ್ಲಿ ಪಸರಿಸುತ್ತದೆ ಕ್ರಿಕೆಟ್ ಆಟದ ಅಸಲಿ ರಂಗು..! ಹೊಡಿಬಡಿ ಆಟಕ್ಕೂ ಜೈ, ಕೆಣಕಿದ್ರೆ ಹೊಡೆದಾಟಕ್ಕೂ...

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

by admin
June 22, 2026
0

56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 22, 2026
0

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

by Shwetha
June 22, 2026
0

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್‌ಟಿಸಿ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

by Shwetha
June 22, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram