ADVERTISEMENT
Sunday, May 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

2023 The Artist ಕ್ಯಾಲೆಂಡರ್ ಬಿಡುಗಡೆ – ಮೂರನೇ ಬಾರಿ ಜೊತೆಯಾದ  ವಿಜಯ್ ಸೇತುಪತಿ ಹಾಗೂ ಎಲ್. ರಾಮಚಂದ್ರನ್

‘ದಿ ಆರ್ಟಿಸ್ಟ್’ ಪರಿಕಲ್ಪನೆಯಡಿ ಚಿತ್ರಕಲೆ ಕಲಾವಿದ, ಶಿಲ್ಪಿ, ಗ್ರಾಫಿಟಿ ಕಲಾವಿದ ಹೀಗೆ ಹಲವು ಆಯಾಮದಲ್ಲಿ ವಿಜಯ್ ಸೇತುಪತಿ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಈ ಎಲ್ಲಾ ಫೋಟೋಗಳಿಗೂ ಸುಂದರ ಸ್ಪರ್ಶ ನೀಡಿ 2023ಕ್ಕೆ ಕಲರ್ ಫುಲ್ ಕ್ಯಾಲೆಂಡರ್ ತಯಾರಿಸಲಾಗಿದೆ. ಈ ಫೋಟೋಗಳನ್ನು ಸೆರೆ ಹಿಡಿಯಲು 12 ವಿಭಿನ್ನ ಸೆಟ್ ಗಳನ್ನು ನಿರ್ಮಾಣ ಮಾಡಿದ್ದು, ನೂರಕ್ಕು ಹೆಚ್ಚು ಜನ ಹಗಲಿರುಳೆನ್ನದೇ ಹತ್ತು ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ದುಡಿದಿರೋದು ಗಮನಾರ್ಹ.

Naveen Kumar B C by Naveen Kumar B C
December 23, 2022
in Cinema, Newsbeat, ಮನರಂಜನೆ
Vijay setupathi
Share on FacebookShare on TwitterShare on WhatsappShare on Telegram

2023ರ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಬಿಡುಗಡೆ – ಮೂರನೇ ಬಾರಿ ಜೊತೆಯಾದ  ವಿಜಯ್ ಸೇತುಪತಿ ಹಾಗೂ ಎಲ್. ರಾಮಚಂದ್ರನ್

ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಎಲ್. ರಾಮಚಂದ್ರನ್ ಪ್ರತಿವರ್ಷ ನವ ಹಾಗೂ ವಿಭಿನ್ನ ಪರಿಕಲ್ಪನೆಯ ಕ್ಯಾಲೆಂಡರ್ ಮೂಲಕ ಗಮನ ಸೆಳೆಯುತ್ತಾರೆ. ತಮ್ಮ ವಿಶೇಷ ಪರಿಕಲ್ಪನೆಯಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಬೆರಗುಗೊಳಿಸುವಂತೆ ಚೆಂದಗಾಣಿಸಿ ಕ್ಯಾಲೆಂಡರ್ ರೂಪ ನೀಡುತ್ತಾರೆ. ಪ್ರತಿವರ್ಷದಂತೆ ಈ ವರ್ಷವೂ ಎಲ್. ರಾಮಚಂದ್ರನ್ ಖ್ಯಾತ ನಟ ವಿಜಯ್ ಸೇತುಪತಿ ಜೊತೆಗೂಡಿ 2023ಕ್ಕೆ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಹೊರತಂದಿದ್ದಾರೆ.

ಕಳೆದೆರಡು ವರ್ಷದಿಂದ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಹಾಗೂ ಎಲ್. ರಾಮಚಂದ್ರನ್ ಹೊಸ ಪರಿಕಲ್ಪನೆಯಡಿ ಹೊಸ ವರ್ಷಕ್ಕೆ ಕ್ಯಾಲೆಂಡರ್ ನಿರ್ಮಾಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಈ ಹಿಂದೆ ‘ಹ್ಯೂಮನ್’ ಮತ್ತು ‘ಕಲೈಜ್ಞಾನ್’ ಎಂಬ ಶೀರ್ಷಿಕೆಯಡಿ ಎರಡು ಕ್ಯಾಲೆಂಡರ್ ಬಿಡುಗಡೆ ಮಾಡಿ ಎಲ್ಲರ ಚಿತ್ತ ಸೆಳೆದಿತ್ತು ಈ ಜೋಡಿ. ಇದೀಗ ಸತತ ಮೂರನೇ ಬಾರಿ ಈ ಜೋಡಿ ಒಂದಾಗಿ 2023ಕ್ಕೆ ಹೊಸ ಥೀಮ್ ನಡಿ ಕ್ಯಾಲೆಂಡರ್ ಒಂದನ್ನು ಹೊರತಂದಿದೆ. ಈ ಬಾರಿಯ ಕ್ಯಾಲೆಂಡರ್ ಗೆ ‘ದಿ ಆರ್ಟಿಸ್ಟ್’ ಎಂಬ ಶೀರ್ಷಿಕೆ ಇಡಲಾಗಿದೆ.

‘ದಿ ಆರ್ಟಿಸ್ಟ್’ ಪರಿಕಲ್ಪನೆಯಡಿ ಚಿತ್ರಕಲೆ ಕಲಾವಿದ, ಶಿಲ್ಪಿ, ಗ್ರಾಫಿಟಿ ಕಲಾವಿದ ಹೀಗೆ ಹಲವು ಆಯಾಮದಲ್ಲಿ ವಿಜಯ್ ಸೇತುಪತಿ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಈ ಎಲ್ಲಾ ಫೋಟೋಗಳಿಗೂ ಸುಂದರ ಸ್ಪರ್ಶ ನೀಡಿ 2023ಕ್ಕೆ ಕಲರ್ ಫುಲ್ ಕ್ಯಾಲೆಂಡರ್ ತಯಾರಿಸಲಾಗಿದೆ. ಈ ಫೋಟೋಗಳನ್ನು ಸೆರೆ ಹಿಡಿಯಲು 12 ವಿಭಿನ್ನ ಸೆಟ್ ಗಳನ್ನು ನಿರ್ಮಾಣ ಮಾಡಿದ್ದು, ನೂರಕ್ಕು ಹೆಚ್ಚು ಜನ ಹಗಲಿರುಳೆನ್ನದೇ ಹತ್ತು ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ದುಡಿದಿರೋದು ಗಮನಾರ್ಹ.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಎಲ್. ರಾಮಚಂದ್ರನ್ ಕಲೆ ಮತ್ತು ಕಲ್ಪನೆ ಅನೇಕ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಈ ಕ್ಯಾಲೆಂಡರ್ ಒಂದೊಳ್ಳೆ ಕಾರ್ಯಕ್ಕೆ ಅಡಿಪಾಯವಾಗಿದೆ. ಹಲವು ಜನರ ಸಂತೋಷಕ್ಕೂ ಇದು ಕಾರಣವಾಗಿದೆ. ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಪ್ರತಿಯೊಬ್ಬ ಸೃಷ್ಟಿಕರ್ತ ಕಲಾವಿದನಿಗೂ ಅರ್ಪಣೆ ಎಂದಿದ್ದಾರೆ.

ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಈ ಬಾರಿಯ ವಿಶಿಷ್ಟ ಪರಿಕಲ್ಪನೆ ಹೊಂದಿದ ಕ್ಯಾಲೆಂಡರ್ ಹೊರತರಲು ಸಮಯ ನೀಡಿದ್ದಕ್ಕಾಗಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಎಲ್. ರಾಮಚಂದ್ರನ್. ದೃಢಸಂಕಲ್ಪ, ಆತ್ಮ ಸ್ಥೈರ್ಯ, ಕೆಲಸದಲ್ಲಿನ ಬದ್ಧತೆ ವಿಜಯ್ ಸೇತುಪತಿ ಅವರನ್ನು ಇತರೆ ಸಮಕಾಲೀನ ನಟರಿಗಿಂತ ಎತ್ತರಕ್ಕೆ ನಿಲ್ಲಿಸಿದೆ. ವಿಶೇಷ ಸ್ಥಾನಮಾನಕ್ಕೂ ಅವರು ಅರ್ಹರು. ಈ ಬಾರಿಯ ಪರಿಕಲ್ಪನೆಗಾಗಿ ವಿಜಯ್ ಸೇತುಪತಿ ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದಾರೆ. ‘ದಿ ಆರ್ಟಿಸ್ಟ್’ ಪರಿಕಲ್ಪನೆ ಹಾಗೂ ಅದರ ವಿಭಿನ್ನತೆಯನ್ನು ಇಂಚಿಂಚೂ ಅರ್ಥ ಮಾಡಿಕೊಂಡು ಪರಿಣಿತರ ಬಳಿ ಚರ್ಚೆ ನಡೆಸಿ ತಾವೇ ಒಂದು ಪಾತ್ರವಾಗಿ ಮಾರ್ಪಾಡಾಗಿದ್ರು, ಅಷ್ಟರ ಮಟ್ಟಿಗೆ ತಲ್ಲೀನರಾಗಿದ್ರು ಎಂದು ವಿಜಯ್ ಸೇತುಪತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಲ್.ರಾಮಚಂದ್ರನ್.

2021ರ ಲಾಕ್ ಡೌನ್ ನಲ್ಲಿ ಬಿಡುಗಡೆಯಾದ ‘ಹ್ಯೂಮನ್’, 2022ರಲ್ಲಿ ಬಿಡುಗಡೆಯಾದ ‘ಕಲೈಜ್ಞಾನ್’ ಶೀರ್ಷಿಕೆಯ ಕ್ಯಾಲೆಂಡರ್ ಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. 2023ರ ‘ದಿ ಆರ್ಟಿಸ್ಟ್’ ಶೀರ್ಷಿಕೆ ಹೊತ್ತ ಕ್ಯಾಲೆಂಡರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಕ್ಯಾಲೆಂಡರ್ ಮಾರಾಟದಿಂದ ಸಂಗ್ರಹವಾದ ಹಣ ವಿಜಯ್ ಸೇತುಪತಿ ಚಾರಿಟೇಬಲ್ ಟ್ರಸ್ಟ್ ಗೆ ಸೇರಲಿದ್ದು, ಸಾಮಾಜಿಕ ಕಲ್ಯಾಣಕ್ಕಾಗಿ ಈ ಆದಾಯವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಹಿಂದಿನ ಎರಡು ವರ್ಷಕ್ಕಿಂತ ಈ ಬಾರಿಯ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಬಹಳ ವಿಭಿನ್ನವಾಗಿ ಮೂಡಿ ಬಂದಿದೆ. ತಿಂಗಳಿಗೆ ಎರಡು ಫೋಟೋ ಒಳಗೊಂಡಂತೆ ಒಟ್ಟು 24 ಫೋಟೋ ವಿನ್ಯಾಸವಿರುವ 2023ರ ಕಲರ್ ಫುಲ್ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಖಂಡಿತ ಎಲ್ಲರ ಹೃದಯ ಗೆಲ್ಲುತ್ತೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

To buy :
http://store.lramachandran.com/

Related posts

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

April 30, 2026
ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

April 30, 2026

https://www.amazon.in/s?me=AGY3MKGT8A8BO&marketplaceID=A21TJRUUN4KGV

 

2023 The Artist Calendar Launch – Vijay Sethupathi and L. Ramachandran

Tags: 2023 The ArtistThe Artist Calendarvijay sethupathi
ShareTweetSendShare
Join us on:

Related Posts

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

by Shwetha
April 30, 2026
0

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಸಹಾಯಕ...

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

by Shwetha
April 30, 2026
0

ಬೆಂಗಳೂರು ಸಹಕಾರಿ ಹಾಲು ಒಕ್ಕೂಟವಾದ ಬೆಂಗಳೂರು ಮಿಲ್ಕ್ ಯುನಿಯನ್ ಲಿಮಿಟೆಡ್ (ಬಮೂಲ್) ಮತ್ತು ತಿರುಮಲ ತಿರುಪತಿ ದೇವಸ್ಥಾನಮ್ ನಡುವೆ ಮಹತ್ವದ ಒಪ್ಪಂದ ಕೈಗೊಳ್ಳಲಾಗಿದೆ. ಈ ಒಪ್ಪಂದದ ಪ್ರಕಾರ,...

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

by Shwetha
April 30, 2026
0

ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದಕ ದೇಶವಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈಗ ಒಪೆಕ್ ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ಈ ಮಹತ್ವದ ನಿರ್ಧಾರ ಮೇ 1ರಿಂದ ಜಾರಿಗೆ...

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60  ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

by Shwetha
April 30, 2026
0

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಬೇಕೆಂದು ಕನಸು ಕಾಣುತ್ತಿರುವ ಯುವಜನತೆಗೆ ಇದೀಗ ಬಂಪರ್ ಅವಕಾಶ ಎದುರಾಗಿದೆ. ದೇಶದ ಕೇಂದ್ರ ಬ್ಯಾಂಕ್ ಆಗಿರುವ...

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

by Shwetha
April 30, 2026
0

ಮಳೆರಾಯನ ಆರ್ಭಟಕ್ಕೆ ನಲುಗಿದ ಸಿಲಿಕಾನ್ ಸಿಟಿ ಶಿವಾಜಿನಗರದಲ್ಲಿ ಸಂಭವಿಸಿತು ಘನಘೋರ ದುರಂತ ಬೆಂಗಳೂರಿನಲ್ಲಿ ಏಪ್ರಿಲ್ 29ರ ಸಂಜೆ ಸುರಿದ ಅಲಿಕಲ್ಲು ಸಹಿತ ಧಾರಾಕಾರ ಮಳೆ ಭಾರಿ ಅವಾಂತರವನ್ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram