ADVERTISEMENT
Sunday, May 25, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

25-08-2023 ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಪ್ರತಿಯೊಂದು ಆಚರಣೆ ಮತ್ತು ಸಂಕ್ಷಿಪ್ತ ವಿವರಣೆ

ಶ್ರಾವಣ ಮಾಸದ ವೃತ ನಿಯಮಗಳು

Honnappa Lakkammanavar by Honnappa Lakkammanavar
August 18, 2023
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಶ್ರವಣ ಮನನ ವ್ರತ ನಿಯಮ ಆಚರಣೆಗಳಿಗೆ ಹೇಳಿ ಮಾಡಿಸಿದಂತಿದೆ ಶ್ರಾವಣ ಮಾಸ .
ವರವನ್ನೀಯುವ ಮಹಾಲಕ್ಷ್ಮಿಯ ಪರಮ ಕೃಪೆಯಾಚಿಸುವ ವರಮಹಾಲಕ್ಷ್ಮೀ ವ್ರತವು ಈ ತಿಂಗಳಿನಲ್ಲಿ ಪ್ರಮುಖವಾದುದು .
” ಶ್ರಾವಣ ಹುಣ್ಣಿಮೆಗೆ ಸಮೀಪದ ಶುಕ್ರವಾರ ಅಂದರೆ ಶ್ರಾವಣ ಶುಕ್ಲ ಪಕ್ಷದ ಎರಡನೆಯ ಶುಕ್ರವಾರದಂದು” ವಿಶೇಷವಾಗಿ ದೇವಾಲಯಗಳಲ್ಲಿ ಮುತ್ತೈದೆಯರು ಸಂಘಟಿತರಾಗಿ , ಶ್ರದ್ಧಾ ಭಕ್ತಿಗಳಿಂದ ಈ ಪೂಜೆ ವರ್ಷದಿಂದ ವರ್ಷಕ್ಕೆ ಸಡಗರದಲ್ಲಿ ಆಚರಿಸುವುದನ್ನು ನಾವು ಕಾಣುತ್ತಿದ್ದೇವೆ . ನಿಜಕ್ಕೂ ಇದೊಂದು ಶುಭ ಲಕ್ಷಣ . ಭವಿಷ್ಟೋತ್ತರ ಪುರಾಣದಲ್ಲಿ ಪಾರ್ವತಿ – ಪರಮೇಶ್ವರರ ಸಂಭಾವಣಾ ರೂಪದಲ್ಲಿ ಈ ವ್ರತ ಕಥೆ ಹೃದಯಂಗಮವಾಗಿ ವರ್ಣಿಸಲ್ಪಟ್ಟಿದೆ . ಇದೇ ವಿವರಗಳನ್ನು ಸೂತ ಪುರಾಣಿಕರು ಶೌನಕಾದಿ ಮಹರ್ಷಿಗಳಿಗೆ ಅರುಹಿದ ವಿಚಾರ ಜನ ಜನಿತವಾದುದು . (ಇದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ)

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ಮಿಥುನ ರಾಶಿಗೆ ಗುರು ಪ್ರವೇಶ –  ಹೊಸ ಬದಲಾವಣೆಯ ಆರಂಭ

ಮಿಥುನ ರಾಶಿಗೆ ಗುರು ಪ್ರವೇಶ – ಹೊಸ ಬದಲಾವಣೆಯ ಆರಂಭ

May 25, 2025
ಕೋವಿಡ್ ಭೀತಿ ಮತ್ತೆ ಮೂಡುತ್ತಿದೆ: ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ!

ದಿನ ಭವಿಷ್ಯ (25-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

May 25, 2025

“ ವ್ರತಾನಾಮುತ್ತಮಂ ಕಾಮ್ಯಂ ಸರ್ವ ಸೌಭಾಗ್ಯ ಕಾರಣಮ್
ಸರ್ವ ಸಂಪತ್ಪದಂ ಕೀರ್ತಿ ಪುತ್ರ ಪೌತ್ರ ಪ್ರವರ್ಧನಂ ” ವ್ರತಗಳಲ್ಲಿಯೇ ಸರ್ವಶ್ರೇಷ್ಠವಾದುದು ವರಮಹಾಲಕ್ಷ್ಮೀವ್ರತ . ಇಷ್ಟಾರ್ಥ ಪಡೆದುಕೊಳ್ಳುವ ಆಚರಣೆಯಿದು. ಜ್ಞಾನ , ಭಕ್ತಿ , ವೈರಾಗ್ಯಗಳ ಜೊತೆಗೆ ಸಕಲ ಸಂಪತ್ತನ್ನು ಸತ್- ಸಂತಾನ ಕರುಣಿಸುವ ಪೂಜೆಯಿದು.
ಈ ರೀತಿ ಹಿಂದೆ ರುದ್ರ ದೇವನೇ ಪಾರ್ವತಿಗೆ ಹೇಳಿದ ವ್ರತದ ಪುಣ್ಯ ಪ್ರಭಾವ ಗಮನಾರ್ಹವಾದುದು.

ವ್ರತ ‘ ಎಂದರೆ ಒಳ್ಳೆಯ ಸದಾಚಾರ.
ಗೃಹಿಣೀ ಧರ್ಮಕ್ಕನುಸಾರವಾಗಿ ಶುಚಿರ್ಭೂತರಾಗಿ , ಶುದ್ಧ ಮನಸ್ಸಿನಿಂದ ಶ್ರದ್ಧೆಯಿಂದ ವ್ರತದಲ್ಲಿ ಸಹಭಾಗಿಗಳಾಗುವುದೇ ನಿಜವಾದ ಅರ್ಹತೆ . ಅಲಂಕೃತ ಮಂಟಪದಲ್ಲಿ ವಿಧ್ಯುಕ್ತ ಕಲಶದಲ್ಲಿ ಮಂಗಲ ಪ್ರದಾಯಿನೀ ಮಹಾ ಲಕ್ಷ್ಮೀಯನ್ನು ಶ್ರೀಮನ್ನಾರಾಯಣನ ಸಹಿತ ಕಲ್ಪೋಕ್ತ ವಿಧಿಯಿಂದ ಪೂಜಿಸಬೇಕು.
ಅಪೂಪ ( ಅಪ್ಪ ),
ಕ್ಷೀರ ಪಾಯಸ, ಪೂರ್ಣ ಭಕ್ಷ್ಯಾದಿ, ಫಲತಾಂಬೂಲ ಯೋಗ್ಯತಾನುಸಾರ ದೇವಿಗೆ ನೈವೇದ್ಯ ಕಾಲದಲ್ಲಿ ಅರ್ಪಿಸಬೇಕು . ಪ್ರಸನ್ನಾರ್ಥ್ಯದ ಬಳಿಕ ಪ್ರಸಾದ ರೂಪದ ದೋರ (ಪೂಜೆ ಮಾಡಿದ ದ್ವಾದಶಿ ಗ್ರಂಥಿ ಉಳ್ಳ ದಾರ) ಧರಿಸಿ ಬ್ರಾಹ್ಮಣರಿಗೆ ಸುವಾಸಿನಿಯರಿಗೆ ಮನೆಯ; ಕುಟುಂಬದ ಹಿರಿಯ ಮುತ್ತೈದೆಯರಿಗೆ ವ್ರತದ ಸಾಂಗತೆಗೆ ಭಕ್ಷ ಸಹಿತ ಫಲ ತಾಂಬೂಲ – ದಕ್ಷಿಣೆ ಒಪ್ಪಿಸಿ ಆಶೀರ್ವಾದ ಪಡೆಯುವುದು ಸಮುಚಿತವಾದುದು .
ಭಜನೆ , ಸ್ತೋತ್ರ ಪಠನ , ಸುವಾಸಿನಿ ಪೂಜೆ, ಕಥಾಶ್ರವಣ , ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳಿಂದ ವ್ರತ ಸಂಪನ್ನವಾಗುತ್ತದೆ . ವಿಶೇಷವಾಗಿ ಮಧ್ಯಾಹ್ನ ಕಾಲದಲ್ಲಿ ವ್ರತ ಆಚರಿಸುವ ವಿಧಾನವಿದ್ದರೂ , ಕೆಲವೆಡೆ ಸಂಜೆ ಪೂಜಿಸುವ ಪರಿಪಾಟವಿದೆ . ಆಚರಣೆಯ ವಿಧಿಯಲ್ಲಿ ಪ್ರಾದೇಶಿಕ ಭಿನ್ನತೆಯಿದ್ದರೂ , ಪೂಜಾ ವಿಧಾನದಲ್ಲಿ ಸಾಮ್ಯತೆ ಇದ್ದೇ ಇದೆ .

“ವರಮಹಾಲಕ್ಷ್ಮಿ ವ್ರತ”
ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ
ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ
ಶುಕ್ಲ ಪಕ್ಷದ ಹುಣ್ಣಿಮೆಯ ಹತ್ತಿರದ ಶುಕ್ರವಾರ ಮಾಡುತ್ತಾರೆ.
ಕೆಲವರ ಮನೆಯಲ್ಲಿ, ದೇವಸ್ಥಾನದಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತದೆ.
ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಯಾವುದೇ ಶುಕ್ರವಾರ
ಲಕ್ಷ್ಮಿ ದೇವಿಗೆ ಪೂಜೆ ಮಾಡಿ.
ವಿಧಾನ
ಸಾಮಾನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ
ಸಾಮಗ್ರಿಗಳು: ಮನೆಯಲ್ಲಿ ಇದ್ದರೆ ಅಥವಾ ಯೋಗ್ಯತಾನುಸಾರ

ರಂಗೋಲಿ , ಮಣೆ / ಮಂಟಪ
ದೇವರ ವಿಗ್ರಹ ಅಥವಾ ಕಲಶ (ದೇವರ ಪಟ)
ದೀಪ, , ತುಪ್ಪ, ಎಣ್ಣೆ,
ದೀಪಕ್ಕೆ ಹಾಕುವ ಬತ್ತಿ
ಘಂಟೆ, ಪಂಚಪಾತ್ರೆ,
ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಅರಿಶಿನ, ಕುಂಕುಮ,
ಮಂತ್ರಾಕ್ಷತೆ,ಮಾವಿನ ಎಲೆ
ಶ್ರೀಗಂಧ, ಊದಿನ ಕಡ್ಡಿ
ರವಿಕೆ ಬಟ್ಟೆ, ದಾರ
ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ – ಹಾಲು,
ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ ಸಿಯಾಳ
ವೀಳ್ಯದ ಎಲೆ, ಅಡಿಕೆ,
ಹಣ್ಣು , ತೆಂಗಿನಕಾಯಿ
ನೈವೇದ್ಯ – ಪಾಯಸ,
ಹುಗ್ಗಿ, ಅನ್ನ,
ಕೋಸಂಬರಿ , ಇತ್ಯಾದಿ
ಕರ್ಪೂರ,
ಮಂಗಳಾರತಿ ಬತ್ತಿ
ಆರತಿ ತಟ್ಟೆ,
ಹೂಬತ್ತಿ,
ಇತ್ಯಾದಿ ಇವುಗಳೊಂದಿಗೆ
ಇನ್ನು ಹಲವಾರು ವಸ್ತುಗಳ ಬಳಕೆ
ಮಾಡಬಹುದು. (ಯಾವುದೇ ಸಾಮಗ್ರಿ ಅಥವಾ ಮಾಡುವ ಕ್ರಮಗಳಲ್ಲಿ ಕಡಿಮೆ ಆದಲ್ಲಿ ಬೇಸರಿಸಬೇಡಿ ಅವರವರ ಯೋಗ್ಯತೆ ಅವರ ಭಕ್ತಿಯಿಂದಲೇ ಅಭಿವ್ಯಕ್ತಿ)
ಮುಖ್ಯವಾಗಿ ಅಲಂಕಾರ
ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ಅನೇಕ
ವಿಧವಾದ ಅಲಂಕಾರಿಕ
ಸಾಮಾನು ದೊರೆಯುತ್ತದೆ .
ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಯೋಗ್ಯತೆಯ ಮೇಲೆ
ಅವಲಂಭಿಸಿದೆ.
ಸಾಮಾನ್ಯವಾಗಿ ಉಪಯೋಗಿಸುವ
ಪೂಜಾ ಸಾಮಗ್ರಿಗಳ ಜೊತೆಗೆ, 12 ಗಂಟಿನ ದಾರ
ಇಟ್ಟು ಪೂಜೆ ಮಾಡಬೇಕು.
ಪೂಜೆ ನಂತರ ಈ
ದಾರವನ್ನು ಮಾಂಗಲ್ಯಕ್ಕೆ ಅಥವಾ ಕುತ್ತಿಗೆಗೆ ಕಟ್ಟಿಕೊಳ್ಳಬಹುದು.

1)ಈ ದಿನ ಬೆಳಿಗ್ಗೆ ಎದ್ದು ಮಂಗಳ (ತಲೆ) ಸ್ನಾನ ಮಾಡಬೇಕು.

2)ವ್ರತ ಮಾಡುವವರು ಪೂಜೆ
ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ
ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ
ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ
ಸ್ಥಾಪಿಸಬೇಕು.
3)ಬಾವಿಯಿಂದ ಒಂದು ಕಲಶದಲ್ಲಿ
ನೀರು ಹಾಕಿ
*(ಸಾಧ್ಯವಾದರೆ ಯಮುನಾ ಪೂಜೆ ಮಾಡಿ,) ಜೊತೆಗೆ ಅರಿಶಿನ ಕುಂಕುಮ,
ಬೆಳ್ಳಿ ನಾಣ್ಯ / ಯಾವುದೇ ನಾಣ್ಯ, ಹೂ
ಹಾಕಿ,ಕಳಶದ ಬಾಯಿಗೆ ಮಾವಿನ
ಎಲೆಗಳನ್ನು ಇಡಬೇಕು. .ಅದರ ಮೇಲೆ ಅರಿಶಿನ ಕುಂಕುಮ ಸವರಿದ
ತೆಂಗಿನಕಾಯಿ ಇಟ್ಟು, (ಇದರ ಮೇಲೆ ಲಕ್ಷ್ಮಿ ದೇವಿಯ ಬೆಳ್ಳಿಯ
ಮುಖವಾಡ ಇದ್ದರೆ ಅದನ್ನುಈ ತೆಂಗಿನಕಾಯಿಗೆ
ಜೋಡಿಸಬಹುದು) ಈ ಈ ಕಲಶಕ್ಕೆ ತತ್ಕಾಲ ಶೃಂಗಾರವನ್ನು ಮಾಡಿ ಘಂಟಾನಾದ ಮುಖಾಂತರ ಮನೆಗೆ ತರುವುದು. ಇದನ್ನು ಬಾವಿ ಅಥವಾ ಸರೋವರ ಗಳಿಂದ ತರಬಹುದು ಇವುಗಳು ಕಷ್ಟವಾದಲ್ಲಿ ಮನೆಯ ಒಳಗೆ ಅಥವಾ ತುಳಸಿಕಟ್ಟೆಯಲ್ಲಿ ತುಂಬಬಹುದು.
(ಗಂಗೇಚ ಯಮುನೇಚೈವ)

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಕಳಶವನ್ನು ಅಕ್ಕಿ ಹರಡಿರುವ
ತಟ್ಟೆಯ ಮೇಲೆ ಇಡಬೇಕು.
(ರಂಗೋಲಿಯ ಮೇಲೆ). ಈ ಕಲಶಕ್ಕೆ ಹೊಸ
ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ಒಡವೆ ಹಾಕಿ
ಅಲಂಕಾರ ಮಾಡಿ.

4)ಪೂಜಾ ವಿಧಾನ
ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು.
ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ
ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ
ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ ,
ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ
ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ
ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ – ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ವರಮಹಾಲಕ್ಷ್ಮಿ
ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ
ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ
ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ,
ನಕ್ಷತ್ರವನ್ನು ಹೆಸರಿಸಬಹುದು.

ಶುಭೇ ಶೋಭನೇ ಮುಹೂರ್ತೇ
ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ
ವರಾಹ ಕಲ್ಪೇ ವೈವಸ್ವತ
ಮನ್ವಂತರೇ ಕಲಿಯುಗೇ ಪ್ರಥಮ
ಪಾದೇ ಜಂಬೋ ದ್ವೀಪೇ
ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ
ತೀರೇ ಶಾಲಿವಾಹನಶಕೆ
ಬೌದ್ಧಾವತಾರೇ(ಪರಶುರಾಮಕ್ಷೇತ್ರೇ) ಅಸ್ಮಿನ್

ವರ್ತಮಾನೇ ವ್ಯಾವಹಾರಿಕೇ ಶೋಭಕೃತ್ ನಾಮ
ಸಂವತ್ಸರೇ, ದಕ್ಷಿಣಾಯನೇ ,…
ವರ್ಷಾಋತೌ , ಶ್ರಾವಣ ಮಾಸೇ ,ಶುಕ್ಲ ಪಕ್ಷೇ , …
…….ತಿಥಿಯಾಂ ,ಶುಕ್ರವಾಸರ ಯುಕ್ತಾಯಾಂ , ಶುಭ
ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ
ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ .. ವರಮಹಾಲಕ್ಷ್ಮಿ ಪ್ರೀತ್ಯರ್ಥಂ ಯಾವಚ್ಛಕ್ತಿ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ
ಕರಿಷ್ಯೇ. (ನಿಮ್ಮ ಮನಸ್ಸಿನ ಸಂಕಲ್ಪವನ್ನು ಇಲ್ಲಿ ದೇವರಲ್ಲಿ ನಿವೇದನೆ ಮಾಡಿ)

ಧ್ಯಾನ
||ಪದ್ಮಾಸನೆ ಪದ್ಮಕರೇ ಸರ್ವ ಲೋಕೈಕ
ಪೂಜಿತೆ|
ನಾರಾಯಣ ಪ್ರಿಯೇದೇವಿ ಸುಪ್ರೀತಾ ಭವ
ಸರ್ವದಾ”…||
(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:
ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳುವುದು)

1.ಆವಾಹನೆ – (ಅಂದರೆ ಆಹ್ವಾನ. ದೇವರನ್ನು ನಿಮ್ಮ
ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು.)ವರಮಹಾಲಕ್ಷ್ಮೀಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ (ಇದಕ್ಕೆ ಸಂಬಂಧಪಟ್ಟ ಮಂತ್ರವನ್ನು ಪಿಡಿಎಫ್ನಲ್ಲಿ ಕಳುಹಿಸುತ್ತೇನೆ)

2.ಆಸನ – ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ
ಮಾಡಿಸುವುದು.ವರಮಹಾಲಕ್ಷ್ಮೀಯೇ ನಮಃ ಆಸನಂ ಸಮರ್ಪಯಾಮಿ

3.ಪಾದ್ಯ – ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ವರಮಹಾಲಕ್ಷ್ಮೀಯೇ ನಮಃ ಪಾದ್ಯಂ ಸಮರ್ಪಯಾಮಿ

4.ಅರ್ಘ್ಯ – ಕೈ ತೊಳೆದುಕೊಳ್ಳುವುದಕ…

Tags: 25-08-2023 Friday Varamahalakshmi Vrat Every Ritual and Brief Description
ShareTweetSendShare
Join us on:

Related Posts

ಮಿಥುನ ರಾಶಿಗೆ ಗುರು ಪ್ರವೇಶ –  ಹೊಸ ಬದಲಾವಣೆಯ ಆರಂಭ

ಮಿಥುನ ರಾಶಿಗೆ ಗುರು ಪ್ರವೇಶ – ಹೊಸ ಬದಲಾವಣೆಯ ಆರಂಭ

by Shwetha
May 25, 2025
0

*ಮಿಥುನ ರಾಶಿಗೆ ಗುರು ಪ್ರವೇಶ* ‌ ‌ ‌ ‌ ‌ ‌ ‌ ‌ ಮೇ 14, 2025 ಬುಧವಾರ ರಾತ್ರಿ ‌11:30 ಗಂಟೆಗೆ ದೇವಗುರು...

ಕೋವಿಡ್ ಭೀತಿ ಮತ್ತೆ ಮೂಡುತ್ತಿದೆ: ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ!

ದಿನ ಭವಿಷ್ಯ (25-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 25, 2025
0

ಮೇ 25, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: ಮೇಷ (ARIES) ಇಂದು ನೀವು ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕವಾಗಿ...

ಶನಿ ಮಹಾ ಪ್ರದೋಷದ ಆಧ್ಯಾತ್ಮಿಕ ಮಹತ್ವ ಈ ಮಂತ್ರದ ರಹಸ್ಯ ಗೊತ್ತಾ?

ಶನಿ ಮಹಾ ಪ್ರದೋಷದ ಆಧ್ಯಾತ್ಮಿಕ ಮಹತ್ವ ಈ ಮಂತ್ರದ ರಹಸ್ಯ ಗೊತ್ತಾ?

by Shwetha
May 24, 2025
0

24-05-2025 , ಶನಿ ಮಹಾ ಪ್ರದೋಷ! ಈ 24 ನಿಮಿಷಗಳಲ್ಲಿ, ಈ ಮಂತ್ರವನ್ನು ಒಮ್ಮೆ ಪಠಿಸುವುದರಿಂದ ನಿಮ್ಮ ಹಣದ ಹರಿವು 10 ಪಟ್ಟು ಹೆಚ್ಚಾಗುತ್ತದೆ. ಇಂದು 24-05-2025...

ದಿನ ಭವಿಷ್ಯ (24-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (24-05-2025)ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 24, 2025
0

ಮೇ 24, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ: ಮೇಷ (Aries): * ವೃತ್ತಿ: ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡವಿರಬಹುದು. ನಿಮ್ಮ ಕೆಲಸವನ್ನು ನಿಗದಿತ ಸಮಯಕ್ಕೆ...

ಮಹಾಲಕ್ಷ್ಮಿಯನ್ನು ಮನೆಯಲ್ಲಿ ವಾಸಿಸುವಂತೆ ಮಾಡುವ ಶಕ್ತಿಶಾಲಿ ಶುಕ್ರವಾರದ ಪೂಜೆ

ಮಹಾಲಕ್ಷ್ಮಿಯನ್ನು ಮನೆಯಲ್ಲಿ ವಾಸಿಸುವಂತೆ ಮಾಡುವ ಶಕ್ತಿಶಾಲಿ ಶುಕ್ರವಾರದ ಪೂಜೆ

by Shwetha
May 23, 2025
0

ಇಂದು ರಾತ್ರಿ 8 ರಿಂದ 9 ರವರೆಗೆ, ನೀವು ಕಣ್ಣು ಮುಚ್ಚಿ ಈ ಆನೆಯನ್ನು ನಿಮ್ಮ ಮನಸ್ಸಿನ ಕಣ್ಣಿನಲ್ಲಿ ನೋಡಿದರೆ, ಕ್ಷೀರ ಸಾಗರದಲ್ಲಿ ವಾಸಿಸುವ ಲಕ್ಷ್ಮಿ ದೇವಿಯು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram