ಪರಶುರಾಮ ಸೃಷ್ಟಿಯ ತುಳುನಾಡಿನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಲ್ ತಾಯಿ ಮಕ್ಕಳ ಅಪೂರ್ವ ಸಮಾಗಮಕ್ಕೆ ಸಾಕ್ಷಿಯಾಯಿತು.
ಗೆಜ್ಜೆಗಿರಿಯ ಮೂಲಸ್ಥಾನ ಗರಡಿಯಲ್ಲಿ ಕೋಟಿ ಚೆನ್ನಯರ ದರ್ಶನ ನಡೆದು ನಂತರ ಕೋಟಿ ಚೆನ್ನಯ ದೈವ ಪಾತ್ರಿಗಳು ಮೂಲಸ್ಥಾನ ಗರಡಿಯಿಂದ ಸತ್ಯ ಧರ್ಮ ಚಾವಡಿವರೆಗೆ ನಿರ್ಮಿಸಲಾದ ವೀರಪಥದಲ್ಲಿ ಇಳಿದು ಬಂದು ಮಾತೆ ದೇಯಿಬೈದ್ಯೆತಿಯ ದರ್ಶನಕ್ಕಾಗಿ ಕಾಯುತ್ತಾರೆ. ಸತ್ಯ ಧರ್ಮ ಚಾವಡಿಯ ಒಳಗೆ ಮಾತೆ ದೇಯಿಬೈದ್ಯೆತಿಯ ದರ್ಶನದ ನಂತರ ಮಾತೆ ದೇಯಿಬೈದ್ಯೆತಿಯ ದೈವ ಪಾತ್ರಿ ಚಾವಡಿ ಎದುರು ತನ್ನ ಮಕ್ಕಳಾದ ಕೋಟಿ ಚೆನ್ನಯರನ್ನು ಎದುರುಗೊಂಡು ತಾಯಿ ಮಕ್ಕಳ ಸಮಾಗಮ ನಡೆಯಿತು.
ಗೆಜ್ಜೆಗಿರಿ ಮಣ್ಣಿನಲ್ಲಿ 500 ವರ್ಷಗಳ ಬಳಿಕ ನಡೆದ ತಾಯಿ ಮಕ್ಕಳ ಈ ಅಪೂರ್ವ ಸಮಾಗಮವನ್ನು ಕಣ್ತುಂಬಿ ಕೊಳ್ಳಲು ಕಾದು ಕುಳಿತಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರು ಈ ವಿಶೇಷ ಕ್ಷಣವನ್ನು ವೀಕ್ಷಿಸಿ ಪುನೀತರಾದರು. ಅಪರೂಪದ ಈ ಭಕ್ತಿ ಪ್ರಧಾನ ಕ್ಷಣವನ್ನು ನೋಡಿ ಧನ್ಯರಾಗಲು ದೇಶ ವಿದೇಶಗಳಿಂದ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು.
https://youtu.be/mx2wQ-zYT20








