ಮಾನ್ಯ ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿ ಮಾಡಿದ್ದೇನು : ಬಿಜೆಪಿ
ಬೆಂಗಳೂರು : ಮಾನ್ಯ ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿ ಮಾಡಿದ್ದೇನು ಎಂದು ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯ ಗಾಂಧಿ ಯಾವ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ ಸಿದ್ದರಾಮಯ್ಯ?
ಕಾಂಗ್ರೆಸ್ ಪಕ್ಷದ ಶಾಶ್ವತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಯಾವ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು?
ನೀವು ಸ್ವಾತಂತ್ರ್ಯಕ್ಕೆ ಹೋರಾಡಿ ಯಾವ ಸೆರೆಮನೆಯಲ್ಲಿ, ಎಷ್ಟು ದಿನ ಬಂಧಿಯಾಗಿದ್ದಿರಿ ಎಂದು ಕುಟುಕಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಕ್ಕಿ ಯೋಜನೆಯ ಪ್ರಸಹನ ಸದನದಲ್ಲಿ ಬಟಾಬಯಲಾಗಿದೆ.
ಇಷ್ಟರ ಮೇಲೂ ನಾನು ಅಕ್ಕಿ ಕೊಟ್ಟೆ ಎಂದು ಹೋದಲ್ಲಿ ಬಂದಲ್ಲಿ ಬಡಾಯಿಸುವ ಸಿದ್ದರಾಮಯ್ಯ ಅವರನ್ನು ನೋಡಿದಾಗ ಮರುಕವಾಗುತ್ತದೆ.
ಎಷ್ಟು ದಿನ ಸುಳ್ಳಿನ ಮೇಲೆ ಹೊರಳಾಡುತ್ತೀರಿ ಸಿದ್ದರಾಮಯ್ಯ ಎಂದು ಟೀಕೆ ಮಾಡಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿ ಮಾಡಿದ್ದೇನು? ಜನಮಾನಸದಲ್ಲಿ ಉಳಿಯುವ ಒಂದಾದರೂ ಸ್ಥಾಯಿ ಯೋಜನೆ ನೀಡಿದ್ದೀರಾ?
ಅಕ್ಕಿ ಕೊಟ್ಟೆ , ಅಕ್ಕಿ ಕೊಟ್ಟೆ ಎಂದು ಇನ್ನೆಷ್ಟು ವರ್ಷ ಸುಳ್ಳಿನ ಗೋಪುರ ಕಟ್ಟುತ್ತೀರಿ ಎಂದು ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬೆಂಕಿಕಾರಿದೆ.