ಆರೋಗ್ಯ ಕರ್ನಾಟಕ ಮಾಡುವ ಸಂಕಲ್ಪ ನಮ್ಮದು : ಸಿಎಂ
ಬೆಂಗಳೂರು : ನಮ್ಮ ಸರ್ಕಾರ ಆರೋಗ್ಯ ಕರ್ನಾಟಕ ಮಾಡಲು ಸಂಕಲ್ಪ ಮಾಡಿದೆ. ಬರುವ ದಿನಗಳಲ್ಲಿ ಹೆಲ್ತ್ ವಿಷನ್ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ನೂತನ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಮನ್ಸುಖ್.ಎಲ್.ಮಾಂಡವೀಯ ಅವರು ಉದ್ಘಾಟಿಸಿದರು.
ಆಸ್ಪತ್ರೆಯ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಸ್ಪತ್ರೆ ಆವರಣದಲ್ಲಿ ಈ ರೀತಿ ಗ್ಯಾಸ್ಟ್ರಲ್ ಆಸ್ಪತ್ರೆ ಆಗಲಿದೆ ಅಂತ ಯಾರು ಅಂದುಕೊಂಡಿರಲಿಲ್ಲ. ಇದೆಲ್ಲದಕ್ಕೂ ದಾನಿಗಳು ಕಾರಣ.
ನಾವು ಈ ಇನ್ಸ್ಟಿಟ್ಯೂಟ್ ಬಗ್ಗೆ ಹೇಳೋದಾದ್ರೆ, ಸುಧಾಕರ್ ಹಾಗೂ ಎಲ್ಲಾ ಶಾಸಕರು, ಸಂಸದರು ಕೆಲಸ ಮಾಡಿದ್ದಾರೆ. ಇನ್ನು ಈ ಆಸ್ಪತ್ರೆಯಲ್ಲಿ ಲಿವರ್ ಸೇರಿದಂತೆ ಯಾವುದೇ ಅಂಗಾಗ ಕಸಿ ಮಾಡಿದ್ರು ಎಸ್ ಟಿ-ಎಸ್ ಟಿ, ಒಬಿಸಿ ವರ್ಗಕ್ಕೆ ಉಚಿತವಾಗಿ ಮಾಡಲಾಗುತ್ತಿದೆ.
ಇದರಿಂದ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೋ ಉತ್ತಮವಾಗಿ ಬೆಳೆಯುತ್ತಿದೆ. ನಮ್ಮ ಸರ್ಕಾರ ಆರೋಗ್ಯ ಕರ್ನಾಟಕ ಮಾಡಲು ಸಂಕಲ್ಪ ಮಾಡಿದೆ. ಬರುವ ದಿನಗಳಲ್ಲಿ ಹೆಲ್ತ್ ವಿಷನ್ ಮಾಡಲಿದೆ ಎಂದು ತಿಳಿಸಿದರು.
ಇನ್ನು ಹೊಸ ಸಂಸ್ಥೆ ಪ್ರತ್ಯೇಕವಾಗಿ ಇರೋದು ಇದೇ ಮೊದಲು. ಇಲ್ಲಿ ತಜ್ಞರು ಇದ್ದಾರೆ, ವಿಧಿ, ವಿಜ್ಞಾನದ ಮೂಲಕ ಕೆಲಸ ಮಾಡಲಿದೆ. ಬಹಳಷ್ಟು ಜನ ನರಳುತ್ತಿದ್ದು, ನಮ್ಮ ಆಹಾರ ಪದ್ಧತಿ ಎಲ್ಲವೂ ಗ್ಯಾಸ್ಟ್ರೋ ಸಂಸ್ಥೆ ಕೆಲಸ ಮಾಡಲಿದೆ.
ಸೈನ್ಸ್ ಡೆವಲಪ್ ಆದಂತೆ, ಅದರ ಮೇಲೆ ಟೆಕ್ನಾಲಜಿ ಡೆವಲಪ್ ಆದಾಗ ಸರ್ಕಾರ ಅದರ ಮೇಲೆ ಕೆಲಸ ಮಾಡಲಿದೆ. ಪ್ರಗತಿಪರ ಸರ್ಕಾರ ಕರ್ನಾಟಕದಲ್ಲಿದೆ.
ಅದಕ್ಕೆ ಉದಾಹರಣೆಗೆ ಈ ಸಂಸ್ಥೆ. 30ಕೋಟಿ ಸರ್ಕಾರದ ಅನುದಾನದಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಯಲ್ಲಿ ಉತ್ತಮ ಸಂಸ್ಕೃತಿ ಇದೆ. ಇಲ್ಲಿ ನಿಜಕ್ಕೂ ಉತ್ತಮ ವಾತಾವರಣ ಇದೆ.
ಇಲ್ಲಿ ನಿಜಕ್ಕೂ ಬಡವರಿಗೆ ಉತ್ತಮ ಚಿಕಿತ್ಸೆ ನೀಡಿ. ಎಲ್ಲರೂ ಎಥಿಕಲ್ ಆಗಿ ಕೆಲಸ ಮಾಡಿ. ಎಥಿಕಲ್ ಕ್ಲಿನಿಕಲ್ ಪ್ರಾಕ್ಟಿಸ್ ಅಗತ್ಯವಿದೆ. ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಮೋಸ ಆಗಬಾರದು.
ಸತ್ಯ ಮಾರ್ಗದಲ್ಲಿ ಕಸಿ ಕಾರ್ಯ ನಡೆಯಬೇಕು. ಕಿಡ್ನಿ ಕಸಿ, ಹೃದಯ ಕಸಿ ಗಾಗಿ ಬಡವರು ಕ್ಯೂ ನಿಲ್ಲುತ್ತಿದ್ದಾರೆ. ಕಸಿ ಚಿಕಿತ್ಸೆಯಲ್ಲಿ ಶೋಷಣೆ ನಿಲ್ಲಬೇಕು. ಅಂಗಾಂಗ ಕಸಿ ಆಗದೆ ಯಾವ ಬಡವನು ಸಾಯಬಾರದು ಎಂದು ಆಸ್ಪತ್ರೆವರ್ಗಕ್ಕೆ ಎಚ್ಚರಿಕೆಯ ಸಲಹೆ ನೀಡಿದರು.