ಸಿಕ್ಕಿದಾಗೆಲ್ಲಾ ಮಾಮ ಮಾಮ ಅಂತ ಕರೆಯುತ್ತಿದ್ದ : ಸಿದ್ದರಾಮಯ್ಯ ಕಂಬನಿ siddaramaiah saaksha tv
ಬೆಂಗಳೂರು : ಪುನೀತ್ ಒಬ್ಬ ಪ್ರತಿಭಾವಂತ ನಟ, ಇನ್ನೂ ಬಹಳ ವರ್ಷ ನಮ್ಮ ಜೊತೆ ಇರಬೇಕಾಗಿತ್ತು. ಸಿಕ್ಕಿದಾಗೆಲ್ಲಾ ಮಾಮ ಮಾಮ ಅಂತ ಕರೆಯುತ್ತಿದ್ದ ಎಂದು ಅಪ್ಪು ಅವರೊಂದಿಗೆ ಇದ್ದ ಒಡನಾಟವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ಇಂದು ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲ ಇಡೀ ದೇಶದ ಚಿತ್ರರಂಗಕ್ಕೆ ನಷ್ಟವಾಗಿದೆ.
ಆ ನಷ್ಟ ತುಂಬುವುದು ಬಾರಿ ಕಷ್ಟ. ಪುನೀತ್ಗೆ ಚಿರಶಾಂತಿ ದೊರಕಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ಸಿಕ್ಕಿದಾಗೆಲ್ಲಾ ಮಾಮ ಮಾಮ ಅಂತ ಕರೆಯುತ್ತಿದ್ದ ಎಂದು ಅಪ್ಪು ಅವರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು.
ಇದೇ ವೇಳೆ 20 ದಿನಗಳ ಹಿಂದೆ ಸಲಗ ಚಿತ್ರದ ಫ್ರೀ ರಿಲೀಸ್ಗೆ ಹೋಗಿದ್ದಾಗ ಅಲ್ಲಿ ಪುನೀತ್, ಶಿವರಾಜ್ಕುಮಾರ್ ಇಬ್ಬರೂ ಸಿಕ್ಕಿದ್ರು, ಹೀಗೆ ಹೃದಯಾಘಾತ ಆಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ಕಂಬನಿ ಮಿಡಿದರು.