‘ಕೈ’ – ಜೆಡಿಎಸ್ ಪ್ರತಿಭಟನೆ | ಶ್ರೀನಿವಾಸಪುರದಲ್ಲಿ ಉದ್ವಿಗ್ನ ಪರಿಸ್ಥಿತಿ JDS-Congress protest in srinivaspur kolar saaksha tv
ಕೋಲಾರ : ಜಿಲ್ಲೆಯ ಶ್ರೀನಿವಾಸಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಶ್ರೀನಿವಾಸಪುರದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತ್ತು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪ್ರತಿಭಟನೆಗಳಿಸಿದರು. ಇದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಡುವಂತಾಗಿತ್ತು.
ಹಿನ್ನೆಲೆ
ಜಮೀನು ವಿವಾದವೊಂದರ ರಾಜಿ ಸಂದಾನಕ್ಕೆ ಜೆಡಿಎಸ್ ಮುಖಂಡ ತೂಪಲ್ಲಿ ನಾರಾಯಣಸ್ವಾಮಿ, ಪೊಲೀಸ್ ಠಾಣೆಮೆಟ್ಟಿಲೇರಿದ್ದರು.
ಹೀಗಾಗಿ ರಮೇಶ್ ಕುಮಾರ್, ಠಾಣೆಯಲ್ಲಿ ಏನು ಕೆಲಸ ಎಂದು ಏರು ಧ್ವನಿಯಲ್ಲಿ ನಿಂದಿಸಿದ್ದರು.
ಇದನ್ನ ಖಂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಶ್ರೀನಿವಾಸಪುರದಲ್ಲಿ ಪ್ರತಿಭಟನೆ ನಡೆಲಾಗಿತ್ತು. ಇದರ ವಿರುದ್ಧವಾಗಿ ರಮೇಶ್ ಕುಮಾರ್ ಬೆಂಬಲಿಗರು ಕೂಡ ಪ್ರತಿಭಟಿಸಿದ್ದಾರೆ.