Mohammad Azharuddin: ನನ್ನ ಬೆದರಿಸುತ್ತಿದ್ದಾರೆ..
ಎಚ್ಸಿಎಯಿಂದ ಅಮಾನತುಗೊಂಡಿರುವ ಕೆಲವು ಸದಸ್ಯರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಗುರುವಾರ ಬೇಗಂಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜಾನ್ ಮನೋನ್, ವಿಜಯಾನಂದ್ ಮತ್ತು ನರೇಶ್ ಶರ್ಮಾ, ಜಿಮ್ಖಾನಾ ಮೈದಾನದಲ್ಲಿರುವ ಎಚ್ಸಿಎ ಕಚೇರಿಗೆ ಆಗಮಿಸಿ ಅಲ್ಲಿನ ಕೆಲ ಸಿಬ್ಬಂದಿಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರ ದಾಖಲಿಸಿಕೊಂಡಿರುವ ಬೇಗಂಪೇಟೆ ಇನ್ಸ್ ಪೆಕ್ಟರ್ ಪಿ.ಶ್ರೀನಿವಾಸರಾವ್ ಈ ಬಗ್ಗೆ ಕಾನೂನು ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.